alex Certify ತಮ್ಮ ಗೆಲುವಿಗಾಗಿ ಸ್ನೇಹಿತ ಹೊತ್ತಿದ್ದ ಹರಕೆ ತೀರಿಸಿದ ಸಚಿವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಮ್ಮ ಗೆಲುವಿಗಾಗಿ ಸ್ನೇಹಿತ ಹೊತ್ತಿದ್ದ ಹರಕೆ ತೀರಿಸಿದ ಸಚಿವ

ಮೇಲುಕೋಟೆ: ಮೇಲುಕೋಟೆಗೆ ಭೇಟಿ ನೀಡಿದ ಅಬಕಾರಿ ಸಚಿವ ಕೆ.ಗೋಪಾಲಯ್ಯ ಶ್ರೀ ಚೆಲುವರಾಯಸ್ವಾಮಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ತಮ್ಮ ಗೆಲುವಿಗಾಗಿ ಸ್ನೇಹಿತ ಹೊತ್ತಿದ್ದ ಹರಕೆ ತೀರುಸುವ ನಿಟ್ಟಿನಲ್ಲಿ ಚೆಲುವರಾಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಸಚಿವರು, ಚೆಲುವರಾಯಸ್ವಾಮಿ ಹಾಗೂ ತಿರುನಾರಾಯಣ ಸ್ವಾಮಿ ಯುಧುಗಿರಿ ಅಮ್ಮನವರ ಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ರಕ್ತ ಹೀನತೆಗೆ ಕಾರಣವಾಗ್ತಿದೆ ಇದರ ಕೊರತೆ

ಈ ವೇಳೆ ಸುದ್ದಿಗಾರೊಂದಿಗೆ ಮಾತಾನಾಡಿದ ಸಚಿವ ಗೋಪಾಲಯ್ಯ, ನನ್ನ ಸ್ನೇಹಿತರಾದ ಜಯರಾಮು ಅವರು ಚುನಾವಣೆ ವೇಳೆ ನನ್ನ ಗೆಲುವಿಗೆ ಹರಕೆ ಮಾಡಿಕೊಂಡಿದ್ದರು.
ಈ ಹಿನ್ನಲೆ ನಾನು ದೇವಾಲಯಕ್ಕೆ ಇಂದು ಆಗಮಿಸಿ ದೇವರ ದರ್ಶನ ಪಡೆದು ಹರಕೆ ಸಲ್ಲಿಸಿದ್ದೇನೆ. ನಾನು ಯಾವಾಗಲೂ ಚೆಲುವರಾಯಸ್ವಾಮಿ ದೇವಾಲಯಕ್ಕೆ ಬರುತ್ತಿರುತ್ತೇನೆ ಎಂದರು.

ದೇಶದಲ್ಲಿ ಕರೋನಾ ಮೂರನೇ ಅಲೆ ಪರಿಹರಿಸುವಂತೆ ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ಹೇಳಿದರು.

ಇದೇ ವೇಳೆ ಪರಿಷತ್ ಚುನಾವಣೆಯಲ್ಲಿ ಜೆ.ಡಿ.ಎಸ್-ಬಿಜಿಪಿ ಮೈತ್ರಿ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಮೈತ್ರಿ ವಿಚಾರ ಹೈ ಕಮ್ಯಾಂಡ್ ಗೆ ಬಿಟ್ಟಿದ್ದು ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...