alex Certify ತಂದೆ ಸಾವಿನ ವಿಚಾರ ರಾಜಕೀಯ ಮಾಡಬೇಡಿ: ಹೆಚ್.ಡಿ.ಕೆ. ವಿರುದ್ಧ ಅಭಿಷೇಕ್ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆ ಸಾವಿನ ವಿಚಾರ ರಾಜಕೀಯ ಮಾಡಬೇಡಿ: ಹೆಚ್.ಡಿ.ಕೆ. ವಿರುದ್ಧ ಅಭಿಷೇಕ್ ಆಕ್ರೋಶ

ಬೆಂಗಳೂರು: ಪದೇ ಪದೇ ನನ್ನ ತಂದೆ ಸಾವಿನ ವಿಚಾರ ಮಾತನಾಡಬೇಡಿ. ನನ್ನ ತಂದೆ ಸಾವನ್ನು ರಾಜಕೀಯ ಮಾಡುವುದು ಸರಿಯಲ್ಲ. ಓರ್ವ ಮಗನಾಗಿ ನನಗೆ ನೋವಾಗುತ್ತೆ ಎಂದು ಅಂಬರೀಶ್ ಪುತ್ರ ಅಭಿಷೇಕ್ ಮನವಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅಭಿಷೇಕ್, ಮಂಡ್ಯಕ್ಕೆ ಅಂಬರೀಷ್ ಮೃತದೇಹ ಕೊಂಡೊಯ್ದಿದ್ದು ನಾನೇ. ಎಲ್ಲಾ ನಾನೇ ಮಾಡಿದೆ ಎಂದು ಕುಮಾರಸ್ವಾಮಿ ಹೇಳುತ್ತಾರೆ ಏನ್ ಮಾಡಿದ್ರು? ಅವತ್ತಿನ ವಿಡಿಯೋ ಮಾಧ್ಯಮಗಳಲ್ಲೇ ಇದೆ. ಅಂದಮೇಲೆ ಎಲ್ಲವನ್ನು ನೀವೇ ನೋಡಿ. ರಾಜಕೀಯವಾಗಿ ವಿರೋಧ ಮಾಡಿ. ಆದರೆ ವೈಯಕ್ತಿಕವಾಗಿ ಮಾತನಾಡಬೇಡಿ. ಈ ಬಗ್ಗೆ ನನಗೆ ಮಾತನಾಡಲು ನೋವಾಗುತ್ತೆ ಎಂದರು.

BIG NEWS: ಗೊಂದಲದಲ್ಲಿ ಪ್ರತಾಪ್ ಸಿಂಹ; ಕ್ಲಾರಿಟಿ ಪಡೆದು ಮಾತಾಡಲಿ; ತಿರುಗೇಟು ಕೊಟ್ಟ ಸುಮಲತಾ

ಇನ್ನು ಅಕ್ರಮ ಗಣಿಗಾರಿಕೆ ವಿರುದ್ಧದ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಇದು ಮುಂದುವರೆಯುತ್ತೆ. ಅಮ್ಮ ಸುಮಲತಾ ಅವರು ದಾಖಲೆಗಳಿಲ್ಲದೇ ಮಾತನಾಡುವುದಿಲ್ಲ. ಮಂಡ್ಯ ಕ್ಷೇತ್ರದ ಜನತೆ ಅಮ್ಮನ ಬೆನ್ನಿಗೆ ನಿಂತಿದ್ದಾರೆ. ಇನ್ನು ಕೆಆರ್ಎಸ್ ಬಿರುಕಿನ ಬಗ್ಗೆಯೂ ಮಾತನಾಡಿದ ಅಭಿಷೇಕ್, ಅವರಿಗಿರುವ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತಾರೆ. ಆಗ ಎಲ್ಲವೂ ಸ್ಪಷ್ಟವಾಗುತ್ತದೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...