alex Certify ತಂದೆ-ತಾಯಿಯ ‘ರುಣ’ ತೀರಿಸಿದ ನಟ ದುನಿಯಾ ವಿಜಯ್……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆ-ತಾಯಿಯ ‘ರುಣ’ ತೀರಿಸಿದ ನಟ ದುನಿಯಾ ವಿಜಯ್……!

ಬೆಂಗಳೂರು : ಚಂದನವನದಲ್ಲಿ ನೆಲೆ ನಿಲ್ಲಲು ಕಾರಣವಾಗಿದ್ದ ಹಾಗೂ ತಮ್ಮ ಹೆಸರಿನ ಮುಂದೆ ದುನಿಯಾ ಎಂಬ ಖ್ಯಾತಿ ತಂದು ಕೊಟ್ಟಿದ್ದ ‘ದುನಿಯಾ’ ಚಿತ್ರದಲ್ಲಿ, ಸತ್ತ ತನ್ನ ತಾಯಿಗೆ ಸಮಾಧಿ ಕಟ್ಟಲು ಹಳ್ಳಿಯಿಂದ ನಾಡಿಗೆ ಬಂದು ಸಾಕಷ್ಟು ಸವಾಲುಗಳನ್ನು ಎದುರಿಸಿ, ಕೊನೆಗೆ ಸಾವನ್ನಪ್ಪಿದ್ದು ಹೊಸ ಅಲೆಯನ್ನೇ ಸೃಷ್ಟಿಸಿತ್ತು.

ಅಂದು ಆ ಚಿತ್ರ ಸೂಪರ್ ಹಿಟ್ ಆಗಿ ದುನಿಯಾ ವಿಜಯ್ ಎಂದೇ ನಟ ವಿಜಯ್ ನನ್ನು ಗುರುತಿಸುವಂತಾಗಿತ್ತು. ಈ ಚಿತ್ರದಿಂದಾಗಿ ದುನಿಯಾ ವಿಜಯ್ ಕನ್ನಡ ಚಿತ್ರರಂಗದಲ್ಲಿ ನಾಯಕ ನಟರಾಗಿ ಗುರುತಿಸಿಕೊಳ್ಳುವಂತಾಗಿತ್ತು. ಹಳ್ಳಿಯಲ್ಲಿ ಬಂಡೆ ಒಡೆಯುವ ಹುಡುಗ, ತಾಯಿ ಸಾಯುತ್ತಿದ್ದಂತೆ ಸಮಾಧಿ ಕಟ್ಟಲು ಹಣ ಇಲ್ಲದೆ, ನಗರದತ್ತ ಬರುತ್ತಾನೆ. ಆ ನಂತರ ಪ್ರೀತಿಯಲ್ಲಿ ಮುಳುಗಿ, ಪಡಬಾರದ ಕಷ್ಟ ಪಟ್ಟು ಇಹಲೋಕ ತ್ಯಜಿಸುತ್ತಾನೆ. ಅದು ಚಿತ್ರದ ಕನಸಾದರೆ, ಇಲ್ಲಿ ನಿಜವಾಗಿಯೂ ತಮ್ಮ ಹೆತ್ತವರ ಸಮಾಧಿಯನ್ನು ನಿರ್ಮಿಸಿ ಅದಕ್ಕೆ ‘ರುಣ’ ಎಂದು ಹೆಸರಿಟ್ಟು ಮಾದರಿಯಾಗಿದ್ದಾರೆ.

11 ವರ್ಷದ ಬಾಲಕಿ ಗರ್ಭಪಾತಕ್ಕೆ ಅನುಮತಿ ನೀಡಿದ ಬಾಂಬೆ ಹೈಕೋರ್ಟ್​

ಇತ್ತೀಚೆಗಷ್ಟೇ ನಟ ದುನಿಯಾ ವಿಜಯ್ ಅವರ ತಾಯಿ ಹಾಗೂ ತಂದೆ ಇಹಲೋಕ ತ್ಯಜಿಸಿದ್ದರು. ಈ ಹಿನ್ನೆಲೆಯಲ್ಲಿ ದುನಿಯಾ ವಿಜಯ್ ತಾಯಿ ಹಾಗೂ ತಂದೆಗೆ ತಮ್ಮ ಜನ್ಮಸ್ಥಳ ಕುಂಬಾರನಹಳ್ಳಿಯಲ್ಲಿ ಸಮಾಧಿ ನಿರ್ಮಿಸಿದ್ದಾರೆ.

ಇದಕ್ಕೆ ‘ರುಣ’ ಎಂದು ಹೆಸರಿಟ್ಟಿದ್ದಾರೆ. ತಂದೆ ಹಾಗೂ ತಾಯಿಯ ಹೆಸರಿನ ಎರಡು ಅಕ್ಷರಗಳನ್ನು ತೆಗೆದುಕೊಂಡು ಈ ಹೆಸರಿಟ್ಟಿದ್ದಾರೆ. ತಂದೆ ರುದ್ರಪ್ಪ ಅವರ ಹೆಸರಿನ ರು ಹಾಗೂ ತಾಯಿ ನಾರಾಯಣಮ್ಮ ಅವರ ಹೆಸರಿನಲ್ಲಿನ ಣ ತೆಗೆದುಕೊಂಡು ‘ರುಣ’ ಎಂದು ಹೆಸರಿಟ್ಟಿದ್ದಾರೆ.

ಅಲ್ಲದೇ, ತಾವು ಅಭಿನಯಿಸಿದ ಸಲಗ ಚಿತ್ರವನ್ನು ದುನಿಯಾ ವಿಜಯ್ ಅವರು ತಂದೆ – ತಾಯಿಗೆ ಅರ್ಪಿಸಿ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದಕ್ಕೆ ಅಭಿಮಾನಿಗಳು ಹಾಗೂ ಚಿತ್ರರಂಗ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...