alex Certify ತಂದೆ ಅಂತ್ಯಕ್ರಿಯೆ ನೆರವೇರಿಸಿದ್ದ ಪುತ್ರನಿಗೆ 24 ಗಂಟೆ‌ ಬಳಿಕ ಕಾದಿತ್ತು ಶಾಕ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆ ಅಂತ್ಯಕ್ರಿಯೆ ನೆರವೇರಿಸಿದ್ದ ಪುತ್ರನಿಗೆ 24 ಗಂಟೆ‌ ಬಳಿಕ ಕಾದಿತ್ತು ಶಾಕ್….!

55 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆಂದು ಭಾವಿಸಿ ಭಾನುವಾರ ಸಂಜೆ ಸಂಬಂಧಿಕರು ಮಣ್ಣು ಮಾಡಿದರೆ, ಸೋಮವಾರದಂದು ಆ ವ್ಯಕ್ತಿಯು ಜೀವಂತವಾಗಿ ಮನೆಗೆ ಮರಳಿದ ಘಟನೆಯು ತಮಿಳುನಾಡಿನ ಈರೋಡ್​ ಬಳಿಯ ಬನಗಲಾದಪುರದಲ್ಲಿ ನಡೆದಿದೆ.

ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುವ ಮೂರ್ತಿ ಕಬ್ಬು ಕಟಾವು ಮಾಡಲು ಕೆಲವು ದಿನಗಳ ಹಿಂದೆ ತಿರುಪುರಕ್ಕೆ ಹೋಗಿದ್ದರು ಎನ್ನಲಾಗಿದೆ. ಭಾನುವಾರ ಬೆಳಗ್ಗೆ ಮೂರ್ತಿ ಪುತ್ರ ಕಾರ್ತಿಗೆ ತಂದೆ ಹತ್ತಿರದ ಬಸ್​ ನಿಲ್ದಾಣದಲ್ಲಿ ಶವವಾಗಿ ಮಲಗಿದ್ದಾರೆ ಎಂಬ ಕರೆ ಬಂದಿತ್ತು.

ಕೂಡಲೇ ಸ್ಥಳಕ್ಕೆ ಧಾವಿಸಿದ ಪುತ್ರ ಅದು ತನ್ನ ತಂದೆಯದ್ದೇ ಮೃತದೇಹ ಎಂದು ಗುರುತಿಸಿದ್ದಾನೆ. ಸತ್ಯಮಂಗಳಂ ಠಾಣಾ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಮಾತ್ರವಲ್ಲದೇ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಇದಾದ ಬಳಿಕ ಭಾನುವಾರ ಸಂಜೆ ಮೂರ್ತಿ ಅಂತ್ಯಕ್ರಿಯೆಯನ್ನು ನಡೆಸಲಾಗಿತ್ತು.

ಆದರೆ ಸೋಮವಾರ ಸಂಜೆ ಸುಮಾರಿಗೆ ಮೂರ್ತಿ ತನ್ನ ಮನೆಗೆ ಮರಳಿದ್ದು ಕುಟುಂಬಸ್ಥರೆಲ್ಲ ಶಾಕ್​ ಆಗಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಪುತ್ರ ಕಾರ್ತಿ, ಒಮ್ಮೆಲೆ ನನ್ನ ಕಣ್ಣನ್ನು ನನಗೆ ನಂಬಲು ಆಗಲಿಲ್ಲ. ನನ್ನ ತಂದೆಯ ಸಾವಿನ ಸುದ್ದಿ ಕೇಳಿ ನನಗೆ ಆಘಾತವಾಗಿತ್ತು. ಇದೀಗ ನನ್ನ ತಂದೆ ಮರಳಿ ಬಂದಿದ್ದನ್ನು ಕಂಡು ಕೂಡ ಅಷ್ಟೇ ಶಾಕ್​ ಆಗಿದೆ ಎಂದಿದ್ದಾರೆ.

ಇದಾದ ಬಳಿಕ ಪೊಲೀಸರು ಅಂತ್ಯಕ್ರಿಯೆ ನಡೆದ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...