alex Certify ತಂದೆಯ ಕತ್ತು ಸೀಳಿ ಕೊಲೆ ಮಾಡಿದ ಪಾಪಿ ಮಗ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆಯ ಕತ್ತು ಸೀಳಿ ಕೊಲೆ ಮಾಡಿದ ಪಾಪಿ ಮಗ….!

ರಾಂಚಿ : ಪಾಪಿ ಮಗನೊಬ್ಬ ತಂದೆಯನ್ನೇ ಕೊಲೆ ಮಾಡಿರುವ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಆಸ್ತಿ ವಿವಾದದಿಂದಾಗಿ ಮಗನೊಬ್ಬ ವಯೋವೃದ್ಧ ತಂದೆಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ನಡೆದಿದ್ದು, ಇದು ಜಾರ್ಖಂಡ್ ನ ಗೊಡ್ಡಾದಲ್ಲಿ ನಡೆದಿದೆ.

70 ವರ್ಷದ ತಂದೆಯನ್ನೇ ಕೊಲೆ ಮಾಡಿರುವ ಆರೋಪಿಯನ್ನು ಸುಬೋಧ್ ಎಂದು ಗುರುತಿಸಲಾಗಿದೆ. ಭೂಮಿ ಹಂಚುವ ವಿಚಾರದಲ್ಲಿ ತಂದೆಯೊಂದಿಗೆ ವಿವಾದ ಹೊಂದಿದ್ದ. ಹೀಗಾಗಿ ತಂದೆಯ ಜೊತೆಗೆ ಜಗಳ ಮಾಡಿದ್ದಾನೆ. ಜಗಳ ವಿಕೋಪಕ್ಕೆ ತೆರಳಿ ತಂದೆಯ ಕತ್ತನ್ನೇ ಸೀಳಿ ಕೊಲೆ ಮಾಡಿದ್ದಾನೆ.

ತಂದೆಯು ಕಿರಿಯ ಸಹೋದರನಿಗೆ ಹೆಚ್ಚು ಆಸ್ತಿ ನೀಡಿದ್ದಾನೆ. ಭೂಮಿ ಹಂಚಿಕೆಯಲ್ಲಿ ನನಗೆ ತಂದೆಯಿಂದ ಅನ್ಯಾಯವಾಗಿದೆ ಎಂದು ಭಾವಿಸಿ ಬೇಸರಗೊಂಡಿದ್ದಾನೆ. ಹೀಗಾಗಿಯೇ ತಂದೆಯೊಂದಿಗೆ ಆಗಾಗ ಜಗಳ ಮಾಡುತ್ತಿದ್ದ ಎನ್ನಲಾಗಿದೆ.

ಅಲ್ಲದೇ, ಮತ್ತೊಮ್ಮೆ ಆಸ್ತಿ ಹಂಚಿಕೆ ಮಾಡುವಂತೆ ತಂದೆಗೆ ಹೇಳಿದ್ದಾನೆ. ಈ ವಿಷಯವಾಗಿಯೇ ಇಬ್ಬರ ಮಧ್ಯೆ ಜಗಳ ಆರಂಭವಾಗಿದೆ. ಈ ಜಗಳ ಕೊನೆಗೆ ಕೊಲೆಯಲ್ಲಿಯೇ ಅಂತ್ಯವಾಗಿದ್ದು, ಪಾಪಿ ಮಗ ಆಸ್ತಿಗಾಗಿ ತಂದೆಯನ್ನೇ ಹತ್ಯೆ ಮಾಡಿದ್ದಾನೆ. ಈ ಪ್ರಕರಣ ದಾಖಲಾಗುತ್ತಿದ್ದಂತೆ, ಮಗ ಕಥೆ ಕಟ್ಟಿದ್ದಾನೆ. ಆ ನಂತರ ಪೊಲೀಸರು ಸಾಕ್ಷಿ ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...