alex Certify ಟೀ ಬೇಡವೆಂದ ಜಿಲ್ಲಾಧಿಕಾರಿಗೆ ಮದ್ಯ ಸೇವಿಸುತ್ತೀರಾ ಎಂದು ಪ್ರಶ್ನಿಸಿದ ಕೃಷಿ ಸಚಿವ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೀ ಬೇಡವೆಂದ ಜಿಲ್ಲಾಧಿಕಾರಿಗೆ ಮದ್ಯ ಸೇವಿಸುತ್ತೀರಾ ಎಂದು ಪ್ರಶ್ನಿಸಿದ ಕೃಷಿ ಸಚಿವ…!

ಅತಿವೃಷ್ಟಿಯಿಂದಾಗಿರುವ ಬೆಳೆ ಹಾನಿಯನ್ನು ಪರಿಶೀಲಿಸಲು ಅಧಿಕಾರಿಗಳೊಂದಿಗೆ ತೆರಳಿದ್ದ ಮಹಾರಾಷ್ಟ್ರದ ಕೃಷಿ ಸಚಿವರು, ಎಲ್ಲರಿಗೂ ಟೀ ನೀಡುವ ವೇಳೆ ಜಿಲ್ಲಾಧಿಕಾರಿ ತಮಗೆ ಬೇಡವೆಂದಾಗ ಹಾಗಾದ್ರೆ ಮದ್ಯ ಸೇವಿಸುತ್ತೀರಾ ಎಂದು ಕೇಳಿ ಇದೀಗ ಪೇಚಿಗೆ ಸಿಲುಕಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ.

ಕೃಷಿ ಸಚಿವ ಅಬ್ದುಲ್ ಸತ್ತಾರ್ ಬೆಳೆ ಹಾನಿಯನ್ನು ಪರಿಶೀಲಿಸಲು ಬೀಡ್ ಜಿಲ್ಲೆಗೆ ತೆರಳಿದ್ದು ಈ ವೇಳೆ ಅವರೊಂದಿಗೆ ಜಿಲ್ಲಾಧಿಕಾರಿ ರಾಧಾ ಬಿನೋದ್ ಶರ್ಮಾ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು. ಬಳಿಕ ಕೊಠಡಿಯೊಂದರಲ್ಲಿ ಕುಳಿತಿದ್ದ ವೇಳೆ ಈ ಘಟನೆ ನಡೆದಿದೆ.

ಅಲ್ಲಿ ಕುಳಿತಿದ್ದ ಎಲ್ಲರಿಗೂ ವ್ಯಕ್ತಿಯೊಬ್ಬರು ಟೀ ನೀಡಲು ಮುಂದಾಗಿದ್ದು, ಸಚಿವರು ಅದನ್ನು ಸ್ವೀಕರಿಸಿದ್ದಾರೆ. ಬಳಿಕ ಜಿಲ್ಲಾಧಿಕಾರಿಗಳಿಗೆ ಟೀ ನೀಡಲು ಹೋದಾಗ ಅವರು ತಮಗೆ ಬೇಡವೆಂದು ಹೇಳಿದ್ದಾರೆ. ಆಗ ಪಕ್ಕದಲ್ಲಿಯೇ ಕುಳಿತಿದ್ದ ಅಬ್ದುಲ್ ಸತ್ತಾರ್, ಹಾಗಾದರೆ ಮಧ್ಯೆ ಸೇವಿಸುತ್ತೀರಾ ಎಂದು ಕೇಳಿದ್ದು, ಇದೇ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರತಿಪಕ್ಷದ ನಾಯಕರು ಗರಂ ಆಗಿದ್ದು, ಸಚಿವ ಅಬ್ದುಲ್ ಸತ್ತಾರ್ ಬೆಳೆ ಹಾನಿ ಪರಿಶೀಲನೆಗೆ ತೆರಳಿದ್ದರೋ ಅಥವಾ ಮದ್ಯದ ಪಾರ್ಟಿ ಮಾಡಲು ಹೋಗಿದ್ದರೋ ಎಂದು ಟೀಕಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...