alex Certify ಟಿಶ್ಯೂ ಪೇಪರ್ ಮೇಲೆ ಶ್ರೀ ಕೃಷ್ಣನ ಫೋಟೋ…..! ಅಂಗಡಿ ಮೇಲೆ ಬಜರಂಗ ದಳ ಕಾರ್ಯಕರ್ತರ ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿಶ್ಯೂ ಪೇಪರ್ ಮೇಲೆ ಶ್ರೀ ಕೃಷ್ಣನ ಫೋಟೋ…..! ಅಂಗಡಿ ಮೇಲೆ ಬಜರಂಗ ದಳ ಕಾರ್ಯಕರ್ತರ ದಾಳಿ

ಗದಗ: ಕೃಷ್ಣನ ಆರಾಧಕರು ಯಾರಿಲ್ಲ ಹೇಳಿ. ಕೃಷ್ಣಂ ವಂದೇ ಜಗದ್ಗುರುಂ ಎಂಬ ಸಂಪ್ರದಾಯ ನಮ್ಮದು. ಇಂತಹ ಸಂಪ್ರದಾಯಕ್ಕೆ ಯಾರಾದರೂ ಅವಮಾನ ಮಾಡಿದರೆ ಹೇಗೆ. ಇಲ್ಲೊಂದು ಕಡೆ ಕೈ ಒರೆಸುವ ಟಿಶ್ಯೂ ಮೇಲೆ ಕೃಷ್ಣನ ಫೋಟೋ ಹಾಕಲಾಗಿದೆ.

ಹೌದು, ಈ ಘಟನೆ ನಡೆದಿರೋದು ಗದಗ-ಬೆಟಗೇರಿ ಅವಳಿ ನಗರದಲ್ಲಿ. ಇಲ್ಲಿನ ಒಂದಿಷ್ಟು ಭಾಗದಲ್ಲಿ ಕೃಷ್ಣನ ಫೋಟೋ ಪ್ರಿಂಟ್ ಆಗಿರುವ ಟಿಶ್ಯೂವನ್ನು ಗ್ರಾಹಕರಿಗೆ ನೀಡುತ್ತಿದ್ದಾರೆಂದು ತಿಳಿದ ವಿ.ಎಚ್.ಪಿ. ಹಾಗೂ ಭಜರಂಗದಳ ಕಾರ್ಯಕರ್ತರು ಇದು ಎಲ್ಲಿಂದ ಬರುತ್ತಿದೆ ಎಂದು ಪತ್ತೆ ಮಾಡಿದ್ದಾರೆ. ರಾಜ್ ಟ್ರೇಡರ್ಸ್ ಎಂಬ ಕಂಪನಿ ಈ ಕೆಲಸ ಮಾಡ್ತಾ ಎಂದು ಗೊತ್ತಾಗಿದೆ. ಇಲ್ಲಿನ ಬಸವೇಶ್ವರ ಸರ್ಕಲ್ ಬಳಿಯ ಈ ಟ್ರೇಡರ್ಸ್ ಮೇಲೆ ದಾಳಿ ಮಾಡಿದ್ದಾರೆ.

ದಾಳಿ ವೇಳೆ ಅಪಾರ ಪ್ರಮಾಣದ ಕೃಷ್ಣನ ಫೋಟೋ ಇರುವ ಟಿಶ್ಯೂ ಪೇಪರ್ ಪತ್ತೆಯಾಗಿವೆ. ಇದನ್ನು ನೋಡಿದ ಬಳಿಕ ವಿ.ಎಚ್.ಪಿ ಹಾಗೂ ಭಜರಂಗದಳ ಕಾರ್ಯಕರ್ತರು ಈ ಕಂಪನಿ ಮಾಲೀಕ ಇಂದ್ರಮಲ್ಲ ಜೈನ್​ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಇನ್ನು ವಿಷಯ ತಿಳಿದ ಶಹರ ಪೊಲೀಸರು ಭೇಟಿ ನೀಡಿ ಅಂಗಡಿ ಬೀಗ ಹಾಕಿಸೋದ್ರ ಜೊತೆಗೆ ಮಾಲೀಕ ಇಂದ್ರಮಲ್ಲನ್ನು ಠಾಣೆಗೆ ಕರೆದ್ಯೊಯ್ದಿದ್ದಾರೆ. ಈ ಬಗ್ಗೆ ಮಾತನಾಡಿರುವ ರಾಜ್ ಟ್ರೇಡರ್ಸ್ ಮಾಲೀಕ ಇಂದ್ರಮಲ್ಲ, ಲಾಟ್​​ನಲ್ಲಿ ತರಿಸಿದ್ದೇವೆ ನಾನು ಕೃಷ್ಣನ ಫೋಟೋ ಇದ್ದಿದ್ದು ನೋಡಿಲ್ಲ. ಈ ಲಾಟ್ ಬೆಂಗಳೂರಿನಿಂದ ತರಿಸಲಾಗಿದೆ. ಇದರಲ್ಲಿ ನಮ್ಮದೇನು ತಪ್ಪಿಲ್ಲ ಅಂತ ಕ್ಷಮೆ ಕೇಳಿದ್ದಾನೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...