alex Certify ಟವರ್​ ನಿರ್ಮಾಣ ಮಾಡಿಸಿಕೊಡದ ಶಾಸಕನಿಗೆ ಗ್ರಾಮಸ್ಥರಿಂದ ತಕ್ಕ ಶಾಸ್ತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟವರ್​ ನಿರ್ಮಾಣ ಮಾಡಿಸಿಕೊಡದ ಶಾಸಕನಿಗೆ ಗ್ರಾಮಸ್ಥರಿಂದ ತಕ್ಕ ಶಾಸ್ತಿ..!

ಮೊಬೈಲ್​ ಫೋನ್​ ಟವರ್​ ಸ್ಥಾಪಿಸುತ್ತೇನೆ ಎಂದು ಭರವಸೆ ನೀಡಿ ಬಳಿಕ ತಮ್ಮ ಆಶ್ವಾಸನೆಯನ್ನು ಈಡೇರಿಸದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಓಡಿಶಾದ ಕಾಳಹಂಡಿ ಜಿಲ್ಲೆಯ ಬಂಧಪರಿ ಪಂಚಾಯ್​ ನಿವಾಸಿಗಳು ಬಿದಿರಿನಿಂದ ಸಾಂಕೇತಿಕವಾಗಿ ಟವರ್​ ನಿರ್ಮಾಣ ಮಾಡಿ ಇದರ ಉದ್ಘಾಟನೆಗೆ ಶಾಸಕರಿಗೆ ಆಹ್ವಾನ ನೀಡುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಬಂಧಪರಿ ಪಂಚಾಯತ್​ ವ್ಯಾಪ್ತಿಯಲ್ಲಿ ಒಂದು ಮೊಬೈಲ್​ ಟವರ್​ ನಿರ್ಮಾಣ ಮಾಡಬೇಕು ಎಂಬುದು ಇಲ್ಲಿನ ಜನತೆಯ ಕನಸಾಗಿತ್ತು. ಹೀಗಾಗಿ ನಮ್ಮ ಗ್ರಾಮಕ್ಕೆ ಬಿಎಸ್​ಎನ್​ಎಲ್​​ ಟವರ್​ ನಿರ್ಮಾಣ ಮಾಡಿಕೊಡಿ ಎಂದು ಲಾಂಜಿಗಢ ಶಾಸಕ ಪ್ರದೀಪ್​ ಕುಮಾರ್​ ಬಳಿ ಮನವಿ ಮಾಡಿದ್ದರು. ಸಾಕಷ್ಟು ಬಾರಿ ಮನವಿ ಮಾಡಿದರೂ ಸಹ ಶಾಸಕ ಪ್ರದೀಪ್​ ಕುಮಾರ್​ ಗ್ರಾಮಸ್ಥರ ಮನವಿಗೆ ಸ್ಪಂದನೆ ನೀಡಿರಲಿಲ್ಲ.

ಮೊನ್ನೆ ಶಾಸಕ ಪ್ರದೀಪ್​ ಕುಮಾರ್​ ತಮ್ಮ ಪಂಚಾಯತ್​ಗೆ ಭೇಟಿ ನೀಡಲಿದ್ದಾರೆ ಎಂಬ ವಿಚಾರವನ್ನು ಅರಿತ ಗ್ರಾಮಸ್ಥರು ತಾವೇ ಬಿದಿರಿನ ಕಡ್ಡಿಯನ್ನು ಬಳಸಿ ಸಾಂಕೇತಿಕವಾಗಿ ಮೊಬೈಲ್​ ಟವರ್​ ನಿರ್ಮಾಣ ಮಾಡಿದ್ದಾರೆ. ಟವರ್ ಉದ್ಘಾಟನೆ ಕಾರ್ಯಕ್ರಮಕ್ಕೆ ಶಾಸಕರು ಆಗಮಿಸುತ್ತಿದ್ದಾರೆ ಎಂದು ಗ್ರಾಮದ ತುಂಬೆಲ್ಲ ಬ್ಯಾನರ್​ ಅಂಟಿಸಿದ್ದರು.

ಇನ್ನು ಈ ವಿಚಾರವಾಗಿ ಮಾತನಾಡಿದ ಗ್ರಾಮಸ್ಥರೊಬ್ಬರು, ನಮ್ಮ ಗ್ರಾಮಕ್ಕೊಂದು ಮೊಬೈಲ್​ ಟವರ್​ ನಿರ್ಮಿಸಿಕೊಡಿ ಎಂದು ಸಾಕಷ್ಟು ಬಾರಿ ಶಾಸಕರ ಬಳಿ ಮನವಿ ಮಾಡಿದ್ದೆವು. ಆದರೆ ಅವರು ಈ ಬೇಡಿಕೆಯನ್ನು ಈಡೇರಿಸಿಲ್ಲ. ಹೀಗಾಗಿ ಅವರು ನಮ್ಮ ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆಯೇ ಬಿದಿರಿನಿಂದ ಸಾಂಕೇತಿಕವಾಗಿ ಟವರ್​ ನಿರ್ಮಾಣ ಮಾಡಿದ್ದೇವೆ. ನಮ್ಮ ಗ್ರಾಮಕ್ಕೆ ಟವರ್​ ನಿರ್ಮಾಣ ಆಗುವವರೆಗೂ ನಾವು ಯಾವುದೇ ಶಾಸಕರು ಹಾಗೂ ಸಚಿವರು ಗ್ರಾಮಕ್ಕೆ ಪ್ರವೇಶ ನೀಡಲು ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...