alex Certify ಜೀವವನ್ನೇ ಪಣಕ್ಕಿಟ್ಟು ವ್ಯಕ್ತಿಯನ್ನು ಕಾಪಾಡಿದ ಪೊಲೀಸ್​ ಪೇದೆ: ನೆಟ್ಟಿಗರಿಂದ ಶ್ಲಾಘನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವವನ್ನೇ ಪಣಕ್ಕಿಟ್ಟು ವ್ಯಕ್ತಿಯನ್ನು ಕಾಪಾಡಿದ ಪೊಲೀಸ್​ ಪೇದೆ: ನೆಟ್ಟಿಗರಿಂದ ಶ್ಲಾಘನೆ

ಉತ್ತರ ಪ್ರದೇಶ ಆಗ್ರಾದ ಜೌಗು ಪ್ರದೇಶದಲ್ಲಿ ಕುತ್ತಿಗೆ ಮಟ್ಟದವರೆಗೆ ಮುಳುಗಿದ್ದ 54 ವರ್ಷದ ವ್ಯಕ್ತಿಯನ್ನು ಪೊಲೀಸ್​ ಪೇದೆಯೊಬ್ಬರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕಾಪಾಡಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಈ ಸಾಹಸಮಯ ದೃಶ್ಯವನ್ನು ಕಂಡ ನೆಟ್ಟಿಗರು ಪೊಲೀಸ್​ ಪೇದೆಯ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ್ದಾರೆ. ಆಗ್ರಾದ ಬರ್ಹಾನ್​ ಪೊಲೀಸ್​ ಠಾಣೆಯ ಸ್ಟೇಷನ್​ ಹೌಸ್​ ಅಧಿಕಾರಿ ಶೇರ್​ ಸಿಂಹ್​​ ಶುಕ್ರವಾರ ಮಧ್ಯಾಹ್ನ ಎತ್ಮಾದ್‌ಪುರದ ರೈಲ್ವೆ ನಿಲ್ದಾಣದ ಬಳಿ ಜೌಗು ಪ್ರದೇಶದಲ್ಲಿ ಸಿಲುಕಿರುವ ವ್ಯಕ್ತಿಯ ಬಗ್ಗೆ ಮಾಹಿತಿ ಸ್ವೀಕರಿಸಿದರು.ಆತನನ್ನು ಬ್ರಜೇಶ್ ಕುಮಾರ್ ಎಂದು ಗುರುತಿಸಲಾಗಿದೆ, ಆ ವ್ಯಕ್ತಿಗೆ ಚಲಿಸಲು ಸಾಧ್ಯವಾಗುತ್ತಿಲ್ಲ ಎಂದು ಸಿಂಗ್ ಹೇಳಿದರು.

ಘಟನಾ ಸ್ಥಳವನ್ನು ತಲುಪಿದ ಬಳಿಕ ಪೊಲೀಸ್​ ಪೇದೆ ಸಂದೇಶ್​ ಕುಮಾರ್​ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಜೌಗು ಪ್ರದೇಶದತ್ತ ತೆರಳಿದ್ದಾರೆ. ಆ ವ್ಯಕ್ತಿಯನ್ನು ಹಿಡಿದ ಕುಮಾರ್​​ ಪೊಲೀಸರು ಹಗ್ಗ ಜಗ್ಗುತ್ತಿದ್ದಂತೆಯೇ ಸುರಕ್ಷಿತವಾಗಿ ಈತನನ್ನು ಹೊರಗೆ ಕರೆ ತಂದರು ಎಂದು ಶೇರ್​ ಸಿಂಗ್​ ಹೇಳಿದ್ದಾರೆ. ವ್ಯಕ್ತಿಯನ್ನು ಇದೀಗ ಚಿಕಿತ್ಸೆಗಾಗಿ ಎತ್ಮಾದಪುರದ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ.

— UP POLICE (@Uppolice) July 3, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...