alex Certify ‘ಚುನಾವಣೆ ಸಮೀಪಿಸಿದಾಗ ED ದಾಳಿ ನಡೆಸುವುದು ಬಿಜೆಪಿ ಕಾಯಕ’: ಪಂಜಾಬ್​ ಸಿಎಂ ಚನ್ನಿ ಗಂಭೀರ ಆರೋಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಚುನಾವಣೆ ಸಮೀಪಿಸಿದಾಗ ED ದಾಳಿ ನಡೆಸುವುದು ಬಿಜೆಪಿ ಕಾಯಕ’: ಪಂಜಾಬ್​ ಸಿಎಂ ಚನ್ನಿ ಗಂಭೀರ ಆರೋಪ

ತಮ್ಮ ಸೋದರಳಿಯನ ಮನೆ ಮೇಲೆ ಇಡಿ ನಡೆಸಿದ ದಾಳಿಯನ್ನು ರಾಜಕೀಯ ಪ್ರೇರಿತ ಎಂದು ಪಂಜಾಬ್​ ಮುಖ್ಯಮಂತ್ರಿ ಚರಣ್​ಜೀತ್​ ಸಿಂಗ್​ ಚನ್ನಿ ಆರೋಪಿಸಿದ್ದಾರೆ. ಅಲ್ಲದೆ ರಾಜ್ಯದ ಜನತೆ ಕಾಂಗ್ರೆಸ್​ ಜೊತೆಗಿದ್ದಾರೆ ಎಂದು ಇದೇ ವೇಳೆ ಹೇಳಿದರು.

ನಮ್ಮ ಸೋದರಳಿಯ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಯ ಹಿಂದೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕೈವಾಡವಿದೆ ಎಂದು ಪಂಜಾಬ್​ ಸಿಎಂ ಚರಣ್​ಜೀತ್​ ಸಿಂಗ್​ ಚನ್ನಿ ಆರೋಪ ಮಾಡಿದ್ದಾರೆ.

ಪಶ್ಚಿಮ ಬಂಗಾಳವೇ ಆಗಿರಲಿ ಅಥವಾ ತಮಿಳುನಾಡೇ ಆಗಿರಲಿ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಈ ರೀತಿ ಜಾರಿ ನಿರ್ದೇಶನಾಲಯದ ಕಡೆಯಿಂದ ದಾಳಿಯನ್ನು ನಡೆಸುವುದು ಬಿಜೆಪಿಯ ಕೆಲಸವಾಗಿದೆ. ಆದರೆ ಇದಕ್ಕೆ ನಾವು ಹೆದರುವುದಿಲ್ಲ. ಪಂಜಾಬ್​ನ ಜನತೆ ನಮ್ಮ ಜೊತೆ ಇದ್ದಾರೆ ಎಂದು ಹೇಳಿದರು.

ಮುಂದಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್​ನ ಸಿಎಂ ಅಭ್ಯರ್ಥಿ ಯಾರು ಎಂದು ಕೇಳಲಾದ ಪ್ರಶ್ನೆಗೂ ಇದೇ ವೇಳೆ ಉತ್ತರಿಸಿದ ಅವರು, ನಾನು ಪಂಜಾಬ್​​ನ ಮುಖ್ಯಮಂತ್ರಿ. ಮುಂದಿನ ಚುನಾವಣೆಯಲ್ಲಿ ಯಾರನ್ನು ಸಿಎಂ ಅಭ್ಯರ್ಥಿ ಮಾಡಬೇಕು ಎಂಬುದನ್ನು ಹೈಕಮಾಂಡ್​ ನಿರ್ಧರಿಸುತ್ತದೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...