alex Certify ಚಿನ್ನದಂಗಡಿಗೆ ಕನ್ನ ಕೊರೆದು ಕೋಟ್ಯಾಂತರ ರೂ. ಮೌಲ್ಯದ ಆಭರಣ ಲೂಟಿ; ಸಿಸಿ ಟಿವಿ ಕ್ಯಾಮೆರಾ ಸಮೇತ ಕಳ್ಳರು ಎಸ್ಕೇಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿನ್ನದಂಗಡಿಗೆ ಕನ್ನ ಕೊರೆದು ಕೋಟ್ಯಾಂತರ ರೂ. ಮೌಲ್ಯದ ಆಭರಣ ಲೂಟಿ; ಸಿಸಿ ಟಿವಿ ಕ್ಯಾಮೆರಾ ಸಮೇತ ಕಳ್ಳರು ಎಸ್ಕೇಪ್

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಚಿನ್ನದ ಅಂಗಡಿಗೆ ಕನ್ನ ಹಾಕಿರುವ ಕಳ್ಳರು ಕೋಟ್ಯಾಂತರ ರೂ. ಮೌಲ್ಯದ ಆಭರಣ ದೋಚಿ ಸಿಸಿ ಟಿವಿ ಕ್ಯಾಮೆರಾ ಸಮೇತ ಪರಾರಿಯಾಗಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.

ಭದ್ರಾವತಿ ಹಳೆ ನಗರದ ಚನ್ನಗಿರಿ ರಸ್ತೆಯಲ್ಲಿರುವ ವಿಕ್ರಂ ಹಾಗೂ ವಿಜಯ್ ಎಂಬ ಸಹೋದರರಿಗೆ ಸೇರಿದ ಎಸ್ ಎಸ್ ಜುವೆಲರ್ಸ್ ಚಿನ್ನಾಭರಣ ಮಳಿಗೆಗೆ ಶನಿವಾರ ತಡರಾತ್ರಿ ಕನ್ನ ಕೊರೆದು ಒಳ ನುಗ್ಗಿರುವ ಕಳ್ಳರು, 1.25 ಕೆಜಿ ತೂಕದ ಚಿನ್ನದ ಆಭರಣ ಹಾಗೂ 50 ಕೆಜಿ ತೂಕದ ಬೆಳ್ಳಿ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.

ಚಿನ್ನಾಭರಣಗಳನ್ನು ಇರಿಸಲಾಗಿದ್ದ ಬೀರುಗಳ ಬೀಗ ಹೊಡೆಯಲು ಗ್ಯಾಸ್ ಕಟರ್ ಹಾಗೂ ದೊಡ್ಡ ರಾಡ್ ಗಳನ್ನು ಕಳ್ಳರು ಬಳಸಿದ್ದು, ಕೃತ್ಯದ ಬಳಿಕ ಅವುಗಳನ್ನು ಅಲ್ಲಿಯೇ ಬಿಟ್ಟಿದ್ದಾರೆ. ಅಲ್ಲದೆ ಅಂಗಡಿಯೊಳಗಿದ್ದ ಸಿಸಿ ಟಿವಿ ಕ್ಯಾಮೆರಾ ಹಾಗೂ ಡಿವಿಆರ್ ಉಪಕರಣವನ್ನು ತೆಗೆದುಕೊಂಡು ಹೋಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹಳೆನಗರ ಠಾಣೆ ಪೊಲೀಸರು ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...