ಬೆಂಗಳೂರು: ಗ್ಯಾರಂಟಿ ಯೋಜನೆಗಳನ್ನು ಚುನಾವಣೆ ಗಿಮಿಕ್ ಅಷ್ಟೇ, ಚುನಾವಣೆ ಗೆಲ್ಲಲು ಇಂತಹ ಗಿಮಿಕ್ ಮಾಡಿದ್ದೆವು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ (N. Chaluvarayaswamy) ಹೇಳಿರುವ ವಿಡಿಯೋವೊಂದು ವೈರಲ್ ಆಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು (Minister) ನಾವು ಗಿಮಿಕ್ ಅಂತ ಹೇಳಿಲ್ಲ, ಯಾಕೆ ಸುಮ್ಮನೆ ಏನೇನೊ ಮಾತಾಡುತ್ತೀರಿ. ಬಿಜೆಪಿಯವರು ವೈರಲ್ ಅಲ್ದೇ ಇನ್ನೊಂದು ಮಾಡೋಕೆ ಹೇಳಿ ಎಂದು ತಮ್ಮ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಗ್ಯಾರಂಟಿ ಯೋಜನೆ (Guarantee plans) ಗಳನ್ನು ಚುನಾವಣೆ ಗಿಮಿಕ್ ಅಷ್ಟೇ, ಚುನಾವಣೆ ಗೆಲ್ಲಲು ಇಂತಹ ಗಿಮಿಕ್ ಮಾಡಿದ್ದೇವು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿರುವ ವಿಡಿಯೋವೊಂದು ವೈರಲ್ ಆಗಿದೆ. ಸರ್ಕಾರ ಬಂದ್ರೆ ತಾನೇ ನಾವೇನಾದ್ರೂ ಮಾಡಲು ಸಾಧ್ಯವಾಗುವುದು? ಅಧಿಕಾರ ಸಿಕ್ಕಿದರೆ ತಾನೇ ನಾವು ಕೆಲಸ ಮಾಡಲು ಸಾಧ್ಯವಾಗುವುದು ಅನ್ನುವ ದೃಷ್ಟಿ ಬಂದಾಗ ಚುನಾವಣಾ ಫಲಿತಾಂಶ ಅನಿವಾರ್ಯ ಆಗುತ್ತದೆ. ಫಲಿತಾಂಶ ಬರಬೇಕು ಎಂದಾಗ ಈ ರೀತಿಯ ಚೀಪ್ ಪಾಪ್ಯುಲಾರಿಟಿ, ಇಲ್ಲದ್ದು ಬಲ್ಲದ್ದು ಎಲ್ಲ ಮಾಡ್ತೀವಿ. ಚುನಾವಣೆ ಗೆಲ್ಲಲು ಇಂತಹ ಗಿಮಿಕ್ ಮಾಡಿದ್ದೇವು ಎಂದು ಎನ್.ಚಲುವರಾಯಸ್ವಾಮಿ ಹೇಳಿರುವ ವಿಡಿಯೋವೊಂದು ವೈರಲ್ ಆಗಿದೆ.