alex Certify ಗುಂಬಜ್ ಮಾದರಿಯ ಬಸ್ ನಿಲ್ದಾಣ ವಿವಾದ; ರಾತ್ರೋರಾತ್ರಿ ಎರಡು ಗುಂಬಜ್ ಗಳ ತೆರವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಂಬಜ್ ಮಾದರಿಯ ಬಸ್ ನಿಲ್ದಾಣ ವಿವಾದ; ರಾತ್ರೋರಾತ್ರಿ ಎರಡು ಗುಂಬಜ್ ಗಳ ತೆರವು

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಗುಂಬಜ್ ಮಾದರಿಯ ಬಸ್ ನಿಲ್ದಾಣಕ್ಕೆ ಈಗ ತೆರೆ ಬಿದ್ದಂತಾಗಿದೆ. ಬಸ್ ನಿಲ್ದಾಣದ ಮೇಲೆ ನಿರ್ಮಾಣವಾಗಿದ್ದ ಮೂರು ಗುಂಬಜ್ ಗಳಲ್ಲಿ ಇದೀಗ ಎರಡು ಗುಂಬಜ್ ಗಳು ತೆರಳುಗೊಂಡಿವೆ.

ನಿನ್ನೆಯಷ್ಟೇ ಬಸ್ ನಿಲ್ದಾಣದ ಮೇಲೆ ಇದ್ದ ಗುಂಬಜ್ ಗಳು ಇಂದು ಬೆಳಗಾಗುವಷ್ಟರಲ್ಲಿ ತೆರವುಗೊಂಡಿದ್ದು, ಅಚ್ಚರಿಗೆ ಕಾರಣವಾಗಿದೆ.

ಮೈಸೂರಿನ ಊಟಿ ರಸ್ತೆಯಲ್ಲಿರುವ ಬಸ್ ನಿಲ್ದಾಣದ ಮೇಲೆ ಗುಂಬಜ್ ಗಳನ್ನು ನಿರ್ಮಿಸಲಾಗಿತ್ತು. ಇದು ಶಾಸಕ ಎಸ್.ಎ ರಾಮದಾಸ್ ಹಾಗೂ ಸಂಸದ ಪ್ರತಾಪ್ ಸಿಂಹ ನಡುವಿನ ಜಟಾಪಟಿಗೂ ಕಾರಣವಾಗಿತ್ತು. ಜಿಲ್ಲಾಡಳಿತ ಗುಂಬಜ್ ತೆರವುಗೊಳಿಸದಿದ್ದರೆ ಸ್ವtH ತಾವೇ ತೆರವು ಗೊಳಿಸುವುದಾಗಿ ಸಂಸದರು ಎಚ್ಚರಿಕೆ ಕೊಟ್ಟಿದ್ದರು.

ಇದೀಗ ಬಸ್ ನಿಲ್ದಾಣದ ಮೇಲೆ ನಿರ್ಮಾಣಗೊಂಡಿದ್ದ ಮೂರು ಗುಂಬಜ್ ಗಳ ಪೈಕಿ ಎರಡು ಗುಂಬಜ್ ಗಳನ್ನು ಶಾಸಕರ ಅಣತಿ ಮೇರೆಗೆ ತೆರವುಗೊಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...