alex Certify ಗಣೇಶ ಚತುರ್ಥಿಯಂದು 3000ಕ್ಕೂ ಹೆಚ್ಚು ಲಡ್ಡುಗಳೊಂದಿಗೆ ಭವ್ಯವಾದ ಮರಳು ಕಲೆಯನ್ನು ರಚಿಸಿದ್ದಾರೆ ಸುದರ್ಶನ್ ಪಟ್ನಾಯಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಣೇಶ ಚತುರ್ಥಿಯಂದು 3000ಕ್ಕೂ ಹೆಚ್ಚು ಲಡ್ಡುಗಳೊಂದಿಗೆ ಭವ್ಯವಾದ ಮರಳು ಕಲೆಯನ್ನು ರಚಿಸಿದ್ದಾರೆ ಸುದರ್ಶನ್ ಪಟ್ನಾಯಕ್

ಜನರ ಮೆಚ್ಚುಗೆ ಪಡೆದ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಗಣೇಶ ಚತುರ್ಥಿಯಂದು ಗಣೇಶನ ಅದ್ಭುತವಾದ ಮರಳಿನ ಶಿಲ್ಪವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ದೇಶದೆಲ್ಲೆಡೆ ಇದನ್ನು ಬಹಳ ಆಡಂಬರ ಮತ್ತು ಸಂತೋಷದಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಈ ಶುಭ ಸಂದರ್ಭದಲ್ಲಿ, ಸುದರ್ಶನ್ ಪಟ್ನಾಯಕ್ ಅವರು ಭಗವಾನ್ ಗಣೇಶನ ಭವ್ಯವಾದ ಮರಳು ಕಲೆಯನ್ನು ರಚಿಸಿದರು ಮತ್ತು ಅದನ್ನು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಹಂಚಿಕೊಂಡಿದ್ದಾರೆ. ಶಿಲ್ಪವು 3,000 ಕ್ಕೂ ಹೆಚ್ಚು ಲಡ್ಡುಗಳು ಮತ್ತು ಹೂವುಗಳಿಂದ ತಯಾರಿಸಿದ ಕಲಾಕೃತಿಯನ್ನು ಒಳಗೊಂಡಿದೆ. ಪುರಿ ಕಡಲತೀರದಲ್ಲಿ ಬೃಹತ್ ಮರಳು ಕಲೆಯನ್ನು ರಚಿಸಲಾಗಿದೆ.

ಗಣೇಶ ಚತುರ್ಥಿಯ ಶುಭಾಶಯಗಳು ಎಂದು ಒಡಿಶಾದ ಪುರಿ ಬೀಚ್‌ನಲ್ಲಿ 3,425 ಮರಳು ಲಡ್ಡುಗಳು ಮತ್ತು ಕೆಲವು ಹೂವುಗಳನ್ನು ಬಳಸಿ ಗಣೇಶನ ಮರಳು ಶಿಲ್ಪ ಕಲಾಕೃತಿಯ ಸುಂದರವಾದ ವಿಡಿಯೋವನ್ನು ಸುದರ್ಶನ್ ಪಟ್ನಾಯಕ್ ಹಂಚಿಕೊಂಡಿದ್ದಾರೆ.

ಗಣೇಶ ಚತುರ್ಥಿಯು ಹತ್ತು ದಿನಗಳ ಆಚರಣೆಯಾಗಿದ್ದು, ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸುವ ಮೊದಲು ಜ್ಞಾನ, ಬುದ್ಧಿವಂತಿಕೆ ಮತ್ತು ಸಮೃದ್ಧಿಯನ್ನು ಪಡೆಯಲು ಭಕ್ತರು ಗಣೇಶನನ್ನು ಪೂಜಿಸುತ್ತಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...