alex Certify ಕೈನಲ್ಲಿ ಹಣ ನಿಲ್ಲದಿರಲು ಇದೇ ಕಾರಣವಂತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೈನಲ್ಲಿ ಹಣ ನಿಲ್ಲದಿರಲು ಇದೇ ಕಾರಣವಂತೆ

ಮನೆ, ಮನೆಯಲ್ಲಿರುವ ಎಲ್ಲ ವಸ್ತುಗಳ ಬಗ್ಗೆ ಗಮನ ನೀಡುವುದು ಬಹಳ ಮುಖ್ಯ. ಮನೆಯ ನಿರ್ವಹಣೆ ಸರಿಯಿಲ್ಲವಾದಲ್ಲಿ ನೀರು ಹರಿದಂತೆ ಹಣ ಹರಿದು ಹೋಗುತ್ತೆ. ಮನೆಯಲ್ಲಿರುವ ಕೆಲವೊಂದು ವಸ್ತುಗಳು ಮನೆಯ ಸಂತೋಷವನ್ನು ಕಸಿದುಕೊಳ್ಳುತ್ತೆ. ವಾಸ್ತುಶಾಸ್ತ್ರ ಹೇಳುವ ಕೆಲ ವಸ್ತುಗಳು ಮನೆಯಲ್ಲಿ ಕಂಡು ಬಂದ್ರೆ ತಕ್ಷಣ ಮನೆಯ ಹೊರಗೆ ಹಾಕಿ.

ಮನೆಯೊಳಗೆ ಪಾರಿವಾಳ ಗೂಡು ಕಟ್ಟುವುದು ಅಶುಭದ ಸಂಕೇತ. ಇದ್ರಿಂದ ದೊಡ್ಡ ತೊಂದರೆ ಬರುತ್ತೆ ಎಂಬ ನಂಬಿಕೆ ಇದೆ. ಹಾಗಾಗಿ ಪಾರಿವಾಳದ ಗೂಡ ಕಂಡಲ್ಲಿ ತಕ್ಷಣ ತೆಗೆದು ಹಾಕಿ.

ಮನೆಯೊಳಗೆ ಜೇನು ಗೂಡುಕಟ್ಟಲು ಪ್ರಾರಂಭಿಸಿದರೆ ಅದು ಅಮಂಗಲ. ಕುಟುಂಬಸ್ಥರಿಗೆ ಅಪಘಾತವಾಗುವ ಸಂಭವವಿರುತ್ತದೆ.

ಜೇಡದ ಬಲೆಯನ್ನು ಆಗಾಗ ತೆಗೆದು ಹಾಕ್ತಾ ಇರಿ. ಇದರಿಂದ ತೊಡಕು ಹಾಗೂ ತೊಂದರೆಗಳು ಎದುರಾಗುತ್ತವೆ.

ಒಡೆದ ಗ್ಲಾಸುಗಳನ್ನು ಮನೆಯಲ್ಲಿಡಬೇಡಿ. ನಕಾರಾತ್ಮಕ ಶಕ್ತಿಗಳ ಬಲ ಹೆಚ್ಚಾಗುತ್ತದೆ.

ಮನೆಯೊಳಗೆ ಬಾವಲಿಗಳು ಬಂದ್ರೆ ತಕ್ಷಣ ಹೊರಗೆ ದಬ್ಬಿ.

ಮನೆಯ ಛಾವಣಿ ಮೇಲೆ ಬಟ್ಟೆ ಅಥವಾ ಅನುಪಯುಕ್ತ ವಸ್ತುಗಳನ್ನು ಇಡಬೇಡಿ.

ದೇವರ ಮನೆಯಲ್ಲಿ ಹಳೆ ಹೂವುಗಳನ್ನಿಡಬೇಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...