alex Certify ಕೆಟ್ಟ ದಿನಗಳನ್ನು ದೂರ ಮಾಡುತ್ತೆ ಕಪ್ಪು ಎಳ್ಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಟ್ಟ ದಿನಗಳನ್ನು ದೂರ ಮಾಡುತ್ತೆ ಕಪ್ಪು ಎಳ್ಳು

ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ವಸ್ತುಗಳ ಬಳಕೆ ಬಗ್ಗೆ ಹೇಳಲಾಗಿದೆ. ಇದ್ರಲ್ಲಿ ಒಂದು ಕಪ್ಪು ಎಳ್ಳು. ಇದು ಶನಿಗೆ ಸಂಬಂಧಿಸಿದ ವಸ್ತು. ಪೂಜೆ-ಪುನಸ್ಕಾರದಲ್ಲಿ ಇದನ್ನು ಬಳಸಲಾಗುತ್ತದೆ. ಇದು ರಾಹು-ಕೇತು ದೋಷವನ್ನೂ ತೊಡೆದು ಹಾಕುತ್ತದೆ.

ಒಂದು ಲೋಟದಲ್ಲಿ ಶುದ್ಧ ನೀರಿಗೆ ಕಪ್ಪು ಎಳ್ಳನ್ನು ಹಾಕಿ. ಈ ನೀರನ್ನು ಶಿವಲಿಂಗಕ್ಕೆ ಓಂ ನಮಃ ಶಿವಾಯ ಮಂತ್ರವನ್ನು ಜಪಿಸುತ್ತ ಅರ್ಪಿಸಿ. ಜಲ ಅರ್ಪಿಸಿ ನಂತ್ರ ಬಿಲ್ವ ಪತ್ರೆ ಹಾಗೂ ಹೂವನ್ನು ಅರ್ಪಿಸಿ.

ಕಪ್ಪು ಎಳ್ಳನ್ನು ದಾನವಾಗಿ ನೀಡಿ. ಇದ್ರಿಂದ ರಾಹು-ಕೇತು-ಶನಿಯ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬೀಳುವುದಿಲ್ಲ. ಕಾಳಸರ್ಪ ದೋಷ, ಸಾಡೆ ಸಾಥ್, ಪಿತೃ ದೋಷ ಎಲ್ಲ ಪರಿಹಾರವಾಗುತ್ತದೆ.

ಹಾಲಿಗೆ ಕಪ್ಪು ಎಳ್ಳನ್ನು ಬೆರೆಸಿ ಅಶ್ವತ್ಥ ಗಿಡಕ್ಕೆ ಅರ್ಪಿಸಿ. ಇದ್ರಿಂದ ಕೆಟ್ಟ ಸಮಯ ದೂರವಾಗುತ್ತದೆ. ಇದನ್ನು ಪ್ರತಿ ಶನಿವಾರ ಮಾಡಬೇಕು.

ಪ್ರತಿ ಶನಿವಾರ ಕಪ್ಪು ಎಳ್ಳು ಹಾಗೂ ಕಪ್ಪು ಉದ್ದನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಬಡವರಿಗೆ ದಾನ ನೀಡಿ. ಇದ್ರಿಂದ ಹಣದ ಸಮಸ್ಯೆ ದೂರವಾಗುತ್ತದೆ.

ಪ್ರತಿ ಶನಿವಾರ ಕಪ್ಪು ಎಳ್ಳನ್ನು ಅರ್ಪಿಸಿ. ಇದ್ರಿಂದ ಶನಿ ದೋಷ ದೂರವಾಗುತ್ತದೆ. ವೃದ್ಧಾಪ್ಯದಲ್ಲಿ ಕಾಡುವ ರೋಗ ಕೂಡ ದೂರವಾಗುತ್ತದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...