alex Certify ಕೂದಲಿನ ಆರೋಗ್ಯ ಕಾಪಾಡಲು ʼಭೃಂಗರಾಜ್ʼ ಸಹಕಾರಿ ಹೇಗೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲಿನ ಆರೋಗ್ಯ ಕಾಪಾಡಲು ʼಭೃಂಗರಾಜ್ʼ ಸಹಕಾರಿ ಹೇಗೆ ಗೊತ್ತಾ….?

ಭೃಂಗರಾಜ್ ಕೂದಲಿಗೆ ತುಂಬಾ ಒಳ್ಳೆಯದು. ಹಾಗಾಗಿ ಆಯುರ್ವೇದದಲ್ಲಿ ಭೃಂಗರಾಜ್ ಗೆ ಕೇಶರಾಜ್ ಎಂದು ಕರೆಯುತ್ತಾರೆ. ಇದರಿಂದ ಕೂದಲಿನ ಹಲವು ಸಮಸ್ಯೆಗಳನ್ನು ನಿವಾರಿಸಬಹುದು. ಇದನ್ನು ಹೇರ್ ಆಯಿಲ್ ಗೆ ಬಳಸುವುದು ಅಥವಾ ಹೇರ್ ಪ್ಯಾಕ್ ರೀತಿ ಕೂಡ ಉಪಯೋಗಿಸಿ ಕೂದಲಿನ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.

* ಭೃಂಗರಾಜ್ ನೆತ್ತಿಯನ್ನು ಆಳವಾಗಿ ತಂಪಾಗಿಸುತ್ತದೆ. ಇದರಿಂದ ಕೂದಲುದುರುವ ಸಮಸ್ಯೆ ನಿವಾರಣೆಯಾಗುತ್ತದೆ.

*ಅಕಾಲಿಕ ಕೂದಲು ಬಿಳಿಯಾಗುವ ಸಮಸ್ಯೆ ಈಗ ಹೆಚ್ಚಾಗಿ ಕಂಡುಬರುತ್ತದೆ. ಹಾಗಾಗಿ ಭೃಂಗರಾಜ್ ಬಳಸುವುದರಿಂದ ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ.

*ಗಾಳಿಯ ತೇವಾಂಶದಿಂದ ಮತ್ತು ನೈರ್ಮಲ್ಯದ ಕೊರತೆಯಿಂದ ನೆತ್ತಿಯಲ್ಲಿ ತುರಿಕೆ ಕಂಡುಬರುತ್ತದೆ. ಇದರಿಂದ ತಲೆಹೊಟ್ಟು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಭೃಂಗರಾಜ್ ತುರಿಕೆ, ತಲೆಹೊಟ್ಟನ್ನು ನಿವಾರಿಸುತ್ತದೆ.

* ಭೃಂಗರಾಜ್ ರಕ್ತಪರಿಚಲನೆಗೆ ಸಹಕಾರಿಯಾಗಿದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಬೊಕ್ಕ ತಲೆ ಸಮಸ್ಯೆಯನ್ನು ನಿವಾರಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...