alex Certify ʼಕಾರ್ತಿಕ ಮಾಸʼದಲ್ಲಿ ಈ ನಿಯಮಗಳನ್ನು ಅವಶ್ಯಕವಾಗಿ ಪಾಲಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕಾರ್ತಿಕ ಮಾಸʼದಲ್ಲಿ ಈ ನಿಯಮಗಳನ್ನು ಅವಶ್ಯಕವಾಗಿ ಪಾಲಿಸಿ

ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸಕ್ಕೆ ಮಹತ್ವದ ಸ್ಥಾನವಿದೆ. ಈ ತಿಂಗಳನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ. ಈ ತಿಂಗಳಲ್ಲಿ ಉಪವಾಸ ಮತ್ತು ಜಪ ಮಾಡಬೇಕು ಎನ್ನಲಾಗುತ್ತದೆ.

ಧರ್ಮಗ್ರಂಥಗಳ ಪ್ರಕಾರ, ಈ ತಿಂಗಳಲ್ಲಿ ಸಂಯಮದಿಂದ ನಿಯಮಗಳನ್ನು ಅನುಸರಿಸುವ ವ್ಯಕ್ತಿಗೆ ಮೋಕ್ಷ ಸಿಗುತ್ತದೆ. ಕಾರ್ತಿಕ ತಿಂಗಳಲ್ಲಿ ಏಳು ನಿಯಮಗಳನ್ನು ಪಾಲಿಸುವುದು ಅವಶ್ಯಕ. ವಿಷ್ಣು ಮತ್ತು ಲಕ್ಷ್ಮಿ ಸಂತೋಷಗೊಂಡು ಭಕ್ತರು ಬೇಡಿದ್ದನ್ನು ನೀಡುತ್ತಾರೆ.

ಕಾರ್ತಿಕ ಮಾಸದಲ್ಲಿ ತುಳಸಿ ಸಸ್ಯವನ್ನು ಪೂಜಿಸುವುದು ಮತ್ತು ಬೆಳೆಸುವುದು ಪವಿತ್ರವೆಂದು ಪರಿಗಣಿಸಲಾಗಿದೆ. ಕಾರ್ತಿಕ ತಿಂಗಳಲ್ಲಿ ತುಳಸಿ ಪೂಜೆಗೆ ಹೆಚ್ಚು ಮಹತ್ವವಿದೆ.

ಕಾರ್ತಿಕ ತಿಂಗಳಲ್ಲಿ ನೆಲದ ಮೇಲೆ ಮಲಗಬೇಕು. ನೆಲದ ಮೇಲೆ ಮಲಗುವುದು ಸಕಾರಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ.

ಕಾರ್ತಿಕ ಮಾಸದಲ್ಲಿ ದೇಹಕ್ಕೆ ಎಣ್ಣೆಯನ್ನು ಹಚ್ಚಬಾರದು. ಕೇವಲ ನರಕ ಚತುರ್ಥಿ ದಿನ ಮಾತ್ರ ಎಣ್ಣೆ ಹಚ್ಚಿಕೊಳ್ಳಬೇಕು.

ಕಾರ್ತಿಕ ಮಾಸದಲ್ಲಿ ದೀಪದಾನ ಮಾಡಬೇಕು. ಈ ತಿಂಗಳಲ್ಲಿ ತುಳಸಿ ಗಿಡದ ಕೆಳಗೆ, ಮನೆಯ ಮುಖ್ಯ ದ್ವಾರದ ಮುಂದೆ ದೀಪ ಹಚ್ಚಬೇಕು.

ಕಾರ್ತಿಕ ಮಾಸದಲ್ಲಿ ಬೇಳೆಗಳನ್ನು ತಿನ್ನಬಾರದು. ಉದ್ದಿನ ಬೇಳೆ, ಹೆಸರು ಬೇಳೆ, ಬಟಾಣಿ  ಇತ್ಯಾದಿಗಳನ್ನು ತಿನ್ನಬಾರದು.

ಕಾರ್ತಿಕ ಮಾಸದಲ್ಲಿ ಬ್ರಹ್ಮಚರ್ಯವನ್ನು ಅನುಸರಿಸಬೇಕು. ಈ ತಿಂಗಳಲ್ಲಿ ಬ್ರಹ್ಮಚರ್ಯವನ್ನು ಅನುಸರಿಸದಿರುವುದು ಅಶುಭವೆಂದು ಪರಿಗಣಿಸಲಾಗಿದೆ.

ಕಾರ್ತಿಕ ಮಾಸದಲ್ಲಿ ಶಾಂತವಾಗಿ ನಡೆದುಕೊಳ್ಳಬೇಕು. ಯಾವುದೇ ಜಗಳ ಅಥವಾ ವಿವಾದ ಮಾಡಬಾರದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...