alex Certify ಕಾಯಿಲೆ ಗುಣಪಡಿಸುತ್ತೇನೆಂದು ಜೀವ ತೆಗೆದ ಅರ್ಚಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಯಿಲೆ ಗುಣಪಡಿಸುತ್ತೇನೆಂದು ಜೀವ ತೆಗೆದ ಅರ್ಚಕ

ಹಾಸನ : ತಲೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ತಲೆ ಶೂಲೆ ಅಂಟಿಕೊಂಡಿದೆ ಎಂದು ಶಂಕೆ ವ್ಯಕ್ತಪಡಿಸಿ ಕೋಲಿನಿಂದ ಹೊಡೆದ ಅರ್ಚಕನೊಬ್ಬ ಕೊಲೆ ಮಾಡಿರುವ ಘಟನೆ ನಡೆದಿದೆ.

ಹೀಗೆ ನೋವು ಅನುಭವಿಸಿ ಸಾವನ್ನಪ್ಪಿದ ಮಹಿಳೆಯನ್ನು ಪಾರ್ವತಿ(37) ಎಂದು ಗುರುತಿಸಲಾಗಿದ್ದು, ಮನು(45) ಕೊಲೆ ಮಾಡಿರುವ ಅರ್ಚಕ ಎನ್ನಲಾಗಿದೆ. ಈ ಘಟನೆ ಚನ್ನರಾಯಪಟ್ಟಣದ ಬೆಕ್ಕ ಗ್ರಾಮದಲ್ಲಿ ನಡೆದಿದೆ. ಪಾರ್ವತಿಯ ಪತಿ ಕಳೆದ 18 ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದರು. ಹೀಗಾಗಿ ಅವರು ತಮ್ಮ ಸಹೋದರಿ ಮಂಜುಳಾ ಅವರ ಮನೆಯಲ್ಲಿಯೇ ವಾಸಿಸುತ್ತಿದ್ದರು.

ಇತ್ತೀಚೆಗೆ ಪಾರ್ವತಿ ಅವರಲ್ಲಿ ತಲೆ ನೋವು ಕಾಣಿಸಿಕೊಳ್ಳುತ್ತಿತ್ತು. ಹೀಗಾಗಿ ಸಹೋದರಿ ಗ್ರಾಮದಲ್ಲಿನ ಪಿರಿಯಾಪಟ್ಟಲದಮ್ಮ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದರು. ಆಗ ಮನು ಪೂಜಾರಿಯನ್ನು ಭೇಟಿ ಮಾಡಿದ್ದರು. ಆಗ ಅವರು ಡಿ. 7ರಂದು ವಿಶೇಷ, ಪೂಜೆ ಇದ್ದು ಬರುವಂತೆ ತಿಳಿಸಿದ್ದರು.

ಅದರಂತೆ ದೇವಸ್ಥಾನಕ್ಕೆ ಪಾರ್ವತಿ ಬಂದಿದ್ದರು. ಆಗ ಅವರ ತಲೆ ನೋವು ಹೆಚ್ಚಾಗಿತ್ತು. ಶೂಲೆ ಅಂಟಿಕೊಂಡಿದೆ ಎಂದಿರುವ ಅರ್ಚಕ, ಕೋಲಿನಿಂದ ಪಾರ್ವತಿಯ ಮೈ, ಕೈಕಾಲು, ತಲೆಗೆ ಹೊಡೆದಿದ್ದಾರೆ. ಇದರಿಂದಾಗಿ ಪಾರ್ವತಿ ನಿತ್ರಾಣರಾಗಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಈ ಕುರಿತು ಮೃತ ಪಾರ್ವತಿಯ ಮಗಳು ಚೈತ್ರಾ ಶ್ರವಣಬೆಳಗೊಳ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...