alex Certify ಕಾಡಿಗೆ ಕಟ್ಟಿಗೆ ತರಲು ಹೋಗಿದ್ದ ಮಹಿಳೆಗೆ ಖುಲಾಯಿಸ್ತು ಅದೃಷ್ಟ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಡಿಗೆ ಕಟ್ಟಿಗೆ ತರಲು ಹೋಗಿದ್ದ ಮಹಿಳೆಗೆ ಖುಲಾಯಿಸ್ತು ಅದೃಷ್ಟ…!

ಅದೃಷ್ಟ ಅಂದ್ರೇನೆ ಹಾಗೆ ಯಾವಾಗ ಯಾರನ್ನು ಬೇಕಾದ್ರೂ ಹುಡುಕಿಕೊಂಡು ಬರಬಹುದು. ಮಧ್ಯಪ್ರದೇಶದ ಪನ್ನಾದಲ್ಲಿ ಕಾಡಿಗೆ ಕಟ್ಟಿಗೆ ತರಲು ಹೋಗಿದ್ದ ಬಡ ಮಹಿಳೆಗೆ 4.39 ಕ್ಯಾರೆಟ್‌ ತೂಕದ ವಜ್ರ ಸಿಕ್ಕಿದೆ. ಹರಾಜು ಹಾಕಿದ್ರೆ ಈ ವಜ್ರ 20 ಲಕ್ಷ ರೂಪಾಯಿಗೆ ಬಿಕರಿ ಆಗಬಹುದೆಂದು ಅಂದಾಜಿಸಲಾಗಿದೆ.

ಪುರುಷೋತ್ತಮಪುರದ ಮಹಿಳೆ ಗೆಂಡಾ ಬಾಯಿ ಬುಧವಾರ ಕಟ್ಟಿಗೆ ತರಲು ಕಾಡಿಗೆ ಹೋಗಿದ್ದಾಳೆ. ಅಲ್ಲಿ ಆಕೆಗೆ ವಜ್ರ ಸಿಕ್ಕಿದೆ. ಅದನ್ನು ಡೈಮಂಡ್‌ ಆಫೀಸ್‌ನಲ್ಲಿ ಡೆಪಾಸಿಟ್‌ ಮಾಡಿದ್ದಾಳೆ. ಮಾಹಿತಿ ಪಡೆದ ಅಧಿಕಾರಿಗಳು ವಜ್ರವನ್ನು ಹರಾಜು ಹಾಕಿ ಆ ಮೊತ್ತದಲ್ಲಿ ತೆರಿಗೆ ಹಾಗೂ ರಾಯಲ್ಟಿಯನ್ನು ಕಡಿತ ಮಾಡಿಕೊಂಡು ಉಳಿದ ಹಣವನ್ನು ಮಹಿಳೆಗೆ ಕೊಡುವುದಾಗಿ ತಿಳಿಸಿದ್ದಾರೆ.

ಬಡತನದಲ್ಲೇ ಬದುಕ್ತಾ ಇರೋ ಗೆಂಡಾ ಬಾಯಿ ಕಾಡಿನಿಂದ ಕಟ್ಟಿಗೆ ತಂದು ಅದನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ಲು. ಆಕೆಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ನಾಲ್ವರು ಗಂಡು ಮಕ್ಕಳಿದ್ದಾರೆ. ವಜ್ರ ಮಾರಿ ಬಂದ ಹಣದಲ್ಲಿ ಪುಟ್ಟ ಮನೆ ಕಟ್ಟಿಕೊಂಡು ಹೆಣ್ಣು ಮಕ್ಕಳ ಮದುವೆ ಮಾಡುವುದಾಗಿ ತಿಳಿಸಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...