alex Certify ‘ಕಾಂತಾರ’ ವೀಕ್ಷಿಸಲು ಹೋದ ವೇಳೆ ಗಲಾಟೆ; ಪೊಲೀಸರಿಗೆ ಕರೆ ಮಾಡಿದ ಖ್ಯಾತ ಗಾಯಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕಾಂತಾರ’ ವೀಕ್ಷಿಸಲು ಹೋದ ವೇಳೆ ಗಲಾಟೆ; ಪೊಲೀಸರಿಗೆ ಕರೆ ಮಾಡಿದ ಖ್ಯಾತ ಗಾಯಕ

ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರಾ’ ಸಿನಿಮಾ ಭರ್ಜರಿ ಯಶಸ್ಸು ಗಳಿಸಿದೆ. ಬಿಡುಗಡೆಯಾದ ಎಲ್ಲ ಚಿತ್ರಮಂದಿರಗಳಲ್ಲೂ ಇದು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಕನ್ನಡ ಸಿನಿ ಪ್ರೇಕ್ಷಕರು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ.

‘ಕಾಂತಾರಾ’ ವೀಕ್ಷಣೆಗೆಂದು ಖ್ಯಾತ ಗಾಯಕ ವಾಸುಕಿ ವೈಭವ್ ತಮ್ಮ ಸ್ನೇಹಿತರೊಂದಿಗೆ ತೆರಳಿದ್ದ ವೇಳೆ, ಸೀಟಿನ ವಿಚಾರಕ್ಕೆ ವಾಗ್ವಾದ ನಡೆದಿರುವ ಘಟನೆ ನಡೆದಿದೆ. ಬೆಂಗಳೂರಿನ ಊರ್ವಶಿ ಥಿಯೇಟರ್ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ವಾಸುಕಿ ವೈಭವ್ ಹಾಗೂ ಸ್ನೇಹಿತರು ಚಿತ್ರಮಂದಿರದಲ್ಲಿ ತಮ್ಮ ಸೀಟಿನಲ್ಲಿ ಕುಳಿತಿದ್ದ ವೇಳೆ ಯುವಕರ ಗುಂಪೊಂದು ಆಗಮಿಸಿದೆ. ಆಗ ವಾಸುಕಿ ವೈಭವ್ ಅಡ್ಡ ನಿಲ್ಲಬೇಡಿ ಎಂದು ಹೇಳಿದಾಗ ಯುವಕರ ಗುಂಪು ಗಲಾಟೆ ಶುರು ಮಾಡಿದೆ ಎಂದು ಹೇಳಲಾಗಿದೆ.

ಅಷ್ಟಕ್ಕೆ ಸುಮ್ಮನಾಗದ ಯುವಕರ ಗುಂಪು ಇಂಟರ್ವಲ್ ನಲ್ಲಿ ಮತ್ತೆ ಬಂದು ತಗಾದೆ ತೆಗೆದಿದೆ. ಅಲ್ಲದೆ, ಅಸಭ್ಯ ವರ್ತನೆ ತೋರಿದರು ಎನ್ನಲಾಗಿದೆ. ಇದರಿಂದ ಬೇಸತ್ತ ವಾಸುಕಿ ವೈಭವ್ ಪೊಲೀಸರಿಗೆ ಕರೆ ಮಾಡಿದ್ದು, ಬಳಿಕ ಠಾಣೆಯಲ್ಲಿ ರಾಜಿ ಸಂಧಾನ ನಡೆದು ಯುವಕರ ಗುಂಪು ವಾಸುಕಿ ವೈಭವ್ ಅವರಿಗೆ ಕ್ಷಮೆ ಕೋರಿದ್ದು, ಪ್ರಕರಣ ಮುಕ್ತಾಯವಾಗಿದೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...