alex Certify ಕಳ್ಳತನ ಮಾಡೋಕೆ ಬಂದವನು ದೇವರ ದರ್ಶನವಾಗುತ್ತಿದ್ದಂತೆ ಕೈ ಮುಗಿದು ವಾಪಾಸ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಳ್ಳತನ ಮಾಡೋಕೆ ಬಂದವನು ದೇವರ ದರ್ಶನವಾಗುತ್ತಿದ್ದಂತೆ ಕೈ ಮುಗಿದು ವಾಪಾಸ್….!

 

ಕಳ್ಳತನಕ್ಕೆ ಬಂದರೆ ಒಂದು ಸಣ್ಣ ಸುಳಿವು ಕೊಡದೆ ಸಲೀಸಾಗಿ ಕೆಲಸ ಮುಗಿಸೋ ಮಂದಿ ಇರೋ ಈ ಕಾಲದಲ್ಲಿ ಇಲ್ಲೊಬ್ಬ ಕಳ್ಳ, ಕಳ್ಳತನ ಮಾಡೋಕೆ ದೇವಸ್ಥಾನದ ಬಾಗಿಲೊಡೆದು, ದೇವರ ದರ್ಶನ ಪಡೆದು ವಾಪಸ್ಸಾಗಿದ್ದಾನೆ.

ಹೌದು, ಕಳ್ಳತನಕ್ಕೆ ಬಂದ ಕಳ್ಳ ದೇವರ ದರ್ಶನ ಪಡೆದು ವಾಪಸ್ಸಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಧ್ಯರಾತ್ರಿ ಬೀಗ ಹೊಡೆದು ದೇವಸ್ಥಾನದ ಒಳಗೆ ನುಗ್ಗಿ ಕಳ್ಳತನ ಮಾಡದೆ ವಾಪಸ್ಸಾಗಿದ್ದಾನೆ. ಈ ಘಟನೆ ಬೆಂಗಳೂರಿನ, ತಾವರಕೆರೆಯ ಆರ್ಬಿಐ ಲೇಔಟ್ ನ ಸುಬ್ರಮಣ್ಯಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ.

ನಾನು ಇದುವರೆಗೂ ಭದ್ರತೆ ತೆಗೆದುಕೊಂಡಿಲ್ಲಾ, ಇನ್ಮುಂದೆಯೂ ತೆಗೆದುಕೊಳ್ಳುವುದಿಲ್ಲ-ಅಸಾದುದ್ದೀನ್ ಓವೈಸಿ ಹೇಳಿಕೆ

ಕಳೆದ ರಾತ್ರಿ 2 ಗಂಟೆ ಸಮಯದಲ್ಲಿ ಸುಬ್ರಮಣ್ಯಸ್ವಾಮಿ ದೇವಸ್ಥಾನಕ್ಕೆ ನುಗ್ಗಿರುವ ಅಪರಿಚಿತ ವ್ಯಕ್ತಿ, ರಾಡ್ ನಿಂದ ಗರ್ಭಗುಡಿ ಬೀಗ ಹೊಡೆದು ಒಳ ನುಗ್ಗಿದ್ದಾನೆ. ಆದ್ರೆ ದೇವರ ಮೇಲಿದ್ದ ಅಭರಣ, ಹುಂಡಿ ಹಣ ಯಾವುದನ್ನು ಮುಟ್ಟದ ಖದೀಮ, ಕೆಲ ಕಾಲ ಗರ್ಭಗುಡಿಯಲ್ಲಿದ್ದು ವಾಪಸ್ಸಾಗಿದ್ದಾನೆ.‌

ಅಲ್ಲಿದ್ದ ಸಿಸಿ ಟಿವಿಯಲ್ಲಿ ಈ ಅಪರಿಚಿತನ ಓಡಾಟ ಸೆರೆಯಾಗಿದೆ. ಹಾಗಾದ್ರೆ ಈ ಅಪರಿಚಿತ ವ್ಯಕ್ತಿ ದೇವಸ್ಥಾನಕ್ಕೆ ನುಗ್ಗಿದಾದ್ರು ಏಕೆ, ಕಳ್ಳತನ ಮಾಡೋಕೆ ಬಂದವನಿಗೆ ದೇವರ ದರ್ಶನ ಮಾಡಿ ಜ್ಞಾನೋದಯವಾಯ್ತಾ ? ಅಥವಾ ಅವನ ಉದ್ದೇಶವೇನು ಎಂಬುದೇ ಸಧ್ಯ ಕಾಡುತ್ತಿರುವ ಪ್ರಶ್ನೆ. ಘಟನೆ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ತಾವರೆಕೆರೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...