alex Certify ಕನಕದಾಸರ ಕೀರ್ತನೆ ಮೂಲಕ ವಿರೋಧಿಗಳಿಗೆ ಟಾಂಗ್ ನೀಡಿದ್ರಾ ಡಾಲಿ ಧನಂಜಯ್ ? ಕುತೂಹಲ ಮೂಡಿಸಿದೆ ಈ ಪೋಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕನಕದಾಸರ ಕೀರ್ತನೆ ಮೂಲಕ ವಿರೋಧಿಗಳಿಗೆ ಟಾಂಗ್ ನೀಡಿದ್ರಾ ಡಾಲಿ ಧನಂಜಯ್ ? ಕುತೂಹಲ ಮೂಡಿಸಿದೆ ಈ ಪೋಸ್ಟ್

ನಟ ಡಾಲಿ ಧನಂಜಯ್ ಕನಕದಾಸರ ಜಯಂತಿಯಂದು ಕನಕದಾಸರ ಕೀರ್ತನೆ ಮೂಲಕ ವಿರೋಧಿಗಳಿಗೆ ಟಾಂಗ್ ನೀಡಿದ್ದಾರಾಾ ? ಹೀಗೊಂದು ಪ್ರಶ್ನೆ ಮೂಡಲು ಕಾರಣ ಡಾಲಿ ಧನಂಜಯ್ ಹಾಕಿರುವ ಪೋಸ್ಟ್. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕನಕದಾಸರ ರಚನೆಯ ಕೀರ್ತನೆಯ ಸಾಲುಗಳನ್ನು ಹಾಕಿದ್ದು ಅದು ವಿರೋಧಿಗಳಿಗೆ ತಿರುಗೇಟು ನೀಡಿದಂತಿದೆ.

ಹಿಂದೆ ನನ್ನ ಬೈದವರೆಲ್ಲ ಚೆಂದಾಗಿರಲಿ
ಮುಂದೆ ನನ್ನ ಬಯ್ಯುವರೆಲ್ಲ ಅಂದಣವೇರಲಿ
ಕುಂದು ಇಟ್ಟವರೆಲ್ಲ ಕುದುರೆಯ ಕಟ್ಟಿ ಬಾಳಲಿ
ಬಂದು ಒದ್ದವರಿಗೆ ಭತ್ತದ ಗದ್ದೆ ಬೆಳೆಯಲಿ

ಜನರೊಳಗೆ ಮಾನಭಂಗ ಮಾಡಿದವರಿಗೆ
ಜೇನುತುಪ್ಪ ಸಕ್ಕರೆ ಊಟ ಆಗಲಿ ಅವರಿಗೆ
ಹಾನಿ ಬಾರದಂತಹ ಲೋಕ ಆಗಲಿ ಅವರಿಗೆ
ಮಹಾನುಭಾವ ಮುಕ್ತಿಯ ಕೊಡುವ
ನೆಲೆಯಾದಿಕೇಶವ – ಕನಕದಾಸರು

ಎಂದು ಪೋಸ್ಟ್ ಮಾಡಿದ್ದಾರೆ. ಇತ್ತೀಚೆಗೆ ಧನಂಜಯ್ ನಟನೆಯ ಹೆಡ್ ಬುಷ್ ಚಿತ್ರದಲ್ಲಿ ಕರಗ ಸೇರಿದಂತೆ ವೀರಗಾಸೆ ಕಲೆಗೆ ಅವಮಾನ ಮಾಡಲಾಗಿದೆ ಎಂದು ಭಾರೀ ವಿವಾದವೆದ್ದಿತು. ಚಿತ್ರದಿಂದ ಆಕ್ಷೇಪಿತ ದೃಶ್ಯವನ್ನು ತೆಗೆಯುವಂತೆ ಚಿತ್ರತಂಡವನ್ನು ಒತ್ತಾಯಿಸಲಾಗಿತ್ತು.

ಧನಂಜಯ್ ಬೆಳವಣಿಗೆ ಸಹಿಸದೇ ಕೆಲವರು ಈ ರೀತಿ ಮಾಡುತ್ತಿದ್ದಾರೆಂದು ಅವರ ಅಭಿಮಾನಿಗಳು ‘ಬಡವರ ಮಕ್ಕಳು ಬೆಳೀಬೇಕು ಕಣ್ರಯ್ಯಾ’ ಎಂಬ ಧನಂಜಯ್ ಅವರ ಹಳೆಯ ಹೇಳಿಕೆಯನ್ನೇ ಟ್ರೆಂಡ್ ಮಾಡಿ ಅಭಿಯಾನ ಮಾಡಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...