alex Certify ಒಳ ಚರಂಡಿಯೊಳಗೆ ಬಿದ್ದ ಕರು: 4 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಳ ಚರಂಡಿಯೊಳಗೆ ಬಿದ್ದ ಕರು: 4 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಣೆ

ಒಳಚರಂಡಿ ಚೇಂಬರ್​​ನಲ್ಲಿ ಬಿದ್ದಿದ್ದ ಕರುವನ್ನು ಬರೋಬ್ಬರಿ ನಾಲ್ಕು ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ರಕ್ಷಿಸಿದ ಘಟನೆಯು ದಾದರ್​ನ ಕಬೂತರ್ಖಾನಾ ಎಂಬಲ್ಲಿ ನಿನ್ನೆ ಬೆಳಗ್ಗೆ 6:30ರ ಸುಮಾರಿಗೆ ಸಂಭವಿಸಿದೆ.

ಅಗ್ನಿಶಾಮಕದಳ, ಘನತ್ಯಾಜ್ಯ ನಿರ್ವಹಣೆ, ಒಳಚರಂಡಿ ಹಾಗೂ ವಿಪತ್ತು ನಿರ್ವಹಣಾ ವಿಭಾಗಗಳ ಘಟಕಗಳೊಂದಿಗೆ ಚೇಂಬರ್​ ಒಡೆದು 5.5 ಅಡಿ ಆಳದ ಗುಂಡಿಯನ್ನು ತೋಡಲಾಗಿದೆ. ಕರುವಿಗೆ ಹಗ್ಗವನ್ನು ಕಟ್ಟಿ ಸುರಕ್ಷಿತವಾಗಿ ಮೇಲೆತ್ತಲಾಗಿದೆ. ಕರುವಿಗೆ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಮಾಲೀಕರಿಗೆ ಹಸ್ತಾಂತರಿಸಲಾಗಿದೆ.

ಭವಾನಿ ಶಂಕರ್​ ರಸ್ತೆಯಲ್ಲಿರುವ ರಾಮಮಂದಿರ ಮುಂಭಾಗದ ಒಳಚರಂಡಿ ಚೇಂಬರ್​ನಲ್ಲಿ ಕರುವು ಬಿದ್ದಿದೆ. ಚೇಂಬರ್​ನ್ನು ಸರಿಯಾಗಿ ಮಚ್ಚದೇ ತೆರದಿಟ್ಟಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.

ಈ ವಿಚಾರವಾಗಿ ಮಾತನಾಡಿದ ಅಧಿಕಾರಿಯೊಬ್ಬರು, ನಾವು ಕರುವಿನ ಮಾಲೀಕರಾದ ಗಂಗೂ ಶಿಂಧೆಯನ್ನು ಕೇಳಿದಾಗ ಅವರು ಚೇಂಬರ್​ನ ಮುಚ್ಚಳ ಸಡಿಲವಾಗಿತ್ತು. ಹೀಗಾಗಿ ಕರುವು ತನ್ನ ಕಾಲಿನಿಂದ ಮುಚ್ಚಳವನ್ನು ತಳ್ಳಿರಬಹುದು ಎಂದು ಹೇಳಿದ್ದಾರೆ. ಫುಟ್​ಪಾತ್​​ ಕಾಮಗಾರಿ ನಡೆಯುತ್ತಿರೋದ್ರಿಂದ ಒಳಚರಂಡಿ ಚೇಂಬರ್​ನ ಮುಚ್ಚಳವನ್ನು ಸ್ವಲ್ಪ ತೆರೆಯಲಾಗಿತ್ತು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...