alex Certify ಎಲ್ಲಾ ಕ್ಷೇತ್ರಕ್ಕೂ 50:50 ಯಿಂದ ವಿನಾಯ್ತಿ; ಥಿಯೇಟರ್ ಗಳಿಗೆ ಮಾತ್ರ ಯಾಕಿಲ್ಲ..? ಸರ್ಕಾರಕ್ಕೆ ನಟ ಶಿವರಾಜ್ ಕುಮಾರ್ ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಲಾ ಕ್ಷೇತ್ರಕ್ಕೂ 50:50 ಯಿಂದ ವಿನಾಯ್ತಿ; ಥಿಯೇಟರ್ ಗಳಿಗೆ ಮಾತ್ರ ಯಾಕಿಲ್ಲ..? ಸರ್ಕಾರಕ್ಕೆ ನಟ ಶಿವರಾಜ್ ಕುಮಾರ್ ಪ್ರಶ್ನೆ

ಮೈಸೂರು: ನಾಳೆಯಿಂದ ನೈಟ್ ಕರ್ಫ್ಯೂ, 50:50 ರೂಲ್ಸ್ ತೆರವುಗೊಳ್ಳಲಿದ್ದು, ಆದರೆ ಚಿತ್ರಮಂದಿರಗಳಿಗೆ ಮಾತ್ರ ನಿಯಮದಿಂದ ವಿನಾಯಿತಿ ಸಿಕ್ಕಿಲ್ಲ. ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಸರ್ಕಾರ ಹೀಗೆ ಮಾಡಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಶಿವರಾಜ್ ಕುಮಾರ್, ನಾವು ಕೊರೊನಾ ಜೊತೆ ಜೊತೆಯೇ ಬದುಕಬೇಕಾಗಿದೆ. ಎಲ್ಲಾ ಕ್ಷೇತ್ರಕ್ಕೂ 50:50 ವಿನಾಯಿತಿ ಸಿಕ್ಕಿದೆ. ಆದರೆ ಥಿಯೇಟರ್ ಗಳಿಗೆ ಮಾತ್ರ ರಿಲ್ಯಾಕ್ಸ್ ಕೊಟ್ಟಿಲ್ಲ. ಯಾಕೆಂದು ಗೊತ್ತಾಗುತ್ತಿಲ್ಲ ಎಂದರು.

ಚಿತ್ರಮಂದಿರಗಳಿಗೂ ವಿನಾಯಿತಿ ಕೊಡುವಂತೆ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವಿ ಮಾಡುತ್ತೇನೆ. ಅವರು ಯಾವಾಗಲೂ ಚಿತ್ರರಂಗದ ಪರ ಇದ್ದಾರೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...