alex Certify ಎಮ್ಮೆ ಮೇಲೆ ಸವಾರಿ ಮಾಡಲು ಹೋಗಿ ನಡುರಸ್ತೆಯಲ್ಲಿ ಬಿದ್ದ ಐವರು: ಕರ್ಮಕ್ಕೆ ತಕ್ಕ ಪ್ರತಿಫಲ ಅಂದ್ರು ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಮ್ಮೆ ಮೇಲೆ ಸವಾರಿ ಮಾಡಲು ಹೋಗಿ ನಡುರಸ್ತೆಯಲ್ಲಿ ಬಿದ್ದ ಐವರು: ಕರ್ಮಕ್ಕೆ ತಕ್ಕ ಪ್ರತಿಫಲ ಅಂದ್ರು ನೆಟ್ಟಿಗರು

ಅನೇಕ ಜನರು ಕರ್ಮದ ಪರಿಕಲ್ಪನೆಯನ್ನು ನಂಬುತ್ತಾರೆ. ಪ್ರತಿಯೊಬ್ಬರು ತಮ್ಮ ಕ್ರಿಯೆಗಳ ಪರಿಣಾಮಗಳನ್ನು ಅಂತಿಮವಾಗಿ ಎದುರಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಂತಹ ಒಂದು ತ್ವರಿತ ಕರ್ಮದ ಉದಾಹರಣೆಯ ಹಳೆ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ವಿಡಿಯೋ ಹಂಚಿಕೊಂಡಿದ್ದಾರೆ. ಐವರು ಎಮ್ಮೆ ಹಿಂದೆ ಗಾಡಿ ಕಟ್ಟಿ ಅದರಲ್ಲಿ ಕುಳಿತು ಸವಾರಿ ಮಾಡಿದ್ದಾರೆ. ಕುದುರೆ ಗಾಡಿಯಲ್ಲಿ ಸವಾರಿ ಮಾಡುತ್ತಿದ್ದ ಮತ್ತಿಬ್ಬರು ಪುರುಷರೊಂದಿಗೆ ಈ ಐವರು ರೇಸ್‌ನಲ್ಲಿರುವಂತೆ ತೋರುತ್ತಿದೆ. ಬೈಕ್‌ನಲ್ಲಿ ಬಂದ ಇನ್ನೂ ಕೆಲವರು ಹಾರ್ನ್ ಮಾಡುತ್ತಾ ಇವರನ್ನು ಹಿಂಬಾಲಿಸಿದ್ದಾರೆ.

ಎಮ್ಮೆಯನ್ನು ಮತ್ತಷ್ಟು ವೇಗವಾಗಿ ಓಡಲು ಪ್ರಯತ್ನಿಸುವ ಸಲುವಾಗಿ ಪ್ರಾಣಿಗೆ ಹೊಡೆದಿದ್ದಾನೆ. ಮತ್ತಷ್ಟು ಹೊಡೆತಗಳನ್ನು ನೀಡಿದಾಗ ಏಕಾಏಕಿ ಎಮ್ಮೆ ವೇಗವಾಗಿ ಬಲಕ್ಕೆ ತಿರುಗಿದೆ. ಈ ವೇಳೆ ಒಂದು ಚಕ್ರವು ರಸ್ತೆ ವಿಭಜಕವನ್ನು ಹೊಡೆದಿದೆ. ಈ ವೇಳೆ ಸವಾರಿ ಮಾಡುತ್ತಿದ್ದ ಐವರೂ ಕೂಡ ರಸ್ತೆಯ ಮಧ್ಯದಲ್ಲಿ ಬಿದ್ದಿದ್ದಾರೆ. ಭಯದಿಂದ ಎಮ್ಮೆ ಅಲ್ಲಿಂದ ಓಡಿ ಹೋಗಿದೆ.

ಈ ಹಳೆ ವಿಡಿಯೋ ಮತ್ತೆ ವೈರಲ್ ಆಗಿದ್ದು, ಅವರು ಮಾಡಿದ ಕರ್ಮಕ್ಕೆ ತಕ್ಕ ಶಿಕ್ಷೆಯನ್ನು ಪಡೆದಿದ್ದಾರೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋವನ್ನು ಮತ್ತೆ ಮತ್ತೆ ನೋಡಲು ತೃಪ್ತಿ ಸಿಗುತ್ತದೆ ಅಂತಾ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ತನ್ನ ಜೀವನದಲ್ಲಿ ನಾನು ನೋಡಿದ ಅತ್ಯುತ್ತಮ ಅಂತ್ಯವಾಗಿದೆ ಕರ್ಮ ಹಿಟ್ಸ್ ಬ್ಯಾಕ್ ಅಂತಾ ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

— Susanta Nanda IFS (@susantananda3) March 28, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...