alex Certify ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಸಿದ್ದಿಕಿ ಶ್ರೀರಾಮನ ವಂಶಸ್ಥರು ಎಂದ ಬಿಜೆಪಿ ನಾಯಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಸಿದ್ದಿಕಿ ಶ್ರೀರಾಮನ ವಂಶಸ್ಥರು ಎಂದ ಬಿಜೆಪಿ ನಾಯಕ….!

ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿರುವ ನಡುವೆಯೇ ಬಿಜೆಪಿಯ ನಾಯಕ ಹಾಗೂ ಕೈಸರ್​ಗಂಜ್​​ನ ಸಂಸದ ಬ್ರಿಜ್​ ಭೂಷಣ್​ ಶರಣ್​ ಸಿಂಗ್​​ ಆಲ್​ ಇಂಡಿಯಾ ಮಜ್ಲಿಸ್​​ ಇ ಇತ್ತೆಹಾದುಲ್​​ ಮುಸ್ಲಿಮೀನ್​​ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ಶ್ರೀರಾಮನ ವಂಶಸ್ಥರು ಎಂದು ಹೇಳಿದ್ದಾರೆ.

ಓವೈಸಿ ನನ್ನ ಹಳೆಯ ಸ್ನೇಹಿತರು. ನನಗೆ ತಿಳಿದಿರುವ ಮಾಹಿತಿಯ ಪ್ರಕಾರ ಅವರು ಮೊದಲು ಕ್ಷತ್ರಿಯ(ಹಿಂದೂ)ರಾಗಿದ್ದರು. ಓವೈಸಿ ಭಗವಾನ್​ ಶ್ರೀರಾಮಚಂದ್ರನ ವಂಶಸ್ಥರೇ ಹೊರತು ಇರಾನ್​ಗೆ ಸೇರಿದವರಲ್ಲ ಎಂದು ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ಹೇಳಿದ್ದಾರೆ. ಗೊಂಡಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿರುವ ತಮ್ಮ ಪುತ್ರನ ಪರವಾಗಿ ಪ್ರಚಾರ ಮಾಡುವ ವೇಳೆಯಲ್ಲಿ ಸಿಂಗ್​ ಈ ಹೇಳಿಕೆಯನ್ನು ನೀಡಿದ್ದಾರೆ.

ಎಐಎಂಐಎಂ ಜೊತೆ ಮೈತ್ರಿ ಮಾಡಿಕೊಳ್ಳದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಟೀಕಿಸಿದ ಸಿಂಗ್, ಅಖಿಲೇಶ್ ಮತ್ತು ಓವೈಸಿ ಮುಸ್ಲಿಂ ಸಮುದಾಯದ ನಾಯಕತ್ವವನ್ನು ಪಡೆಯಲು ಹೋರಾಡುತ್ತಿದ್ದಾರೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...