alex Certify ಈ ರಾಶಿಯ ಸರ್ಕಾರಿ ಉದ್ಯೋಗಿಗಳಿಗಿದೆ ಇಂದು ಪದೋನ್ನತಿ ಭಾಗ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯ ಸರ್ಕಾರಿ ಉದ್ಯೋಗಿಗಳಿಗಿದೆ ಇಂದು ಪದೋನ್ನತಿ ಭಾಗ್ಯ

ಮೇಷ : ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿದೆ. ಮನೆಯಲ್ಲಿ ಹಿರಿಯ ವ್ಯಕ್ತಿಯ ಆರೋಗ್ಯದಲ್ಲಿ ಗಂಭೀರ ಏರುಪೇರು ಉಂಟಾಗಲಿದೆ. ದುಃಖದ ವಾರ್ತೆಯನ್ನು ಕೇಳುವಿರಿ. ರಾಜಕಾರಣಿಗಳಿಗೆ ಶುಭ ಯೋಗವಿದೆ.

ವೃಷಭ : ಹಣ ಗಳಿಸಲು ನಿಮಗೆ ಹೊಸ ಮಾರ್ಗವೊಂದು ಸಿಗಲಿದೆ. ಆದಷ್ಟು ತಾಳ್ಮೆ ಕಾಯ್ದುಕೊಳ್ಳಿ. ವ್ಯಾಪಾರ- ವ್ಯವಹಾರದಲ್ಲಿ ಜಯ ಸಿಗಲಿದೆ. ನಿಮಗಿಂತ ಕೆಳಗಿನ ಸ್ಥಾನದಲ್ಲಿ ಇರುವವರ ಮೇಲೆ ದರ್ಪ ತೋರಬೇಡಿ.

ಮಿಥುನ : ಸಾರ್ವಜನಿಕ ಜೀವನದಲ್ಲಿ ಗೌರವ ಗಳಿಸಲಿದ್ದೀರಿ. ಉದ್ಯಮದಲ್ಲಿ ಹೂಡಿಕೆದಾರರ ಸಂಖ್ಯೆ ಹೆಚ್ಚಲಿದೆ. ಹಣ ಸಂಪಾದನೆಗೆಂದು ಅಡ್ಡದಾರಿ ಹಿಡಿಯಬೇಡಿ. ಶಾಂತಿ ಕಾಯ್ದುಕೊಳ್ಳಿ. ಯಾವುದೇ ಸಂದರ್ಭದಲ್ಲೂ ಕೋಪದ ಕೈಗೆ ಬುದ್ಧಿ ನೀಡಬೇಡಿ.

ಕಟಕ : ಅನಿರೀಕ್ಷಿತ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಆರ್ಥಿಕವಾಗಿ ಸದೃಢರಾಗಿ ಇರಬೇಕು ಅಂದರೆ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕದೇ ಬೇರೆ ವಿಧಿಯಿಲ್ಲ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಸಿಗಲಿದೆ.

ಸಿಂಹ : ಕಚೇರಿ ವ್ಯವಹಾರದಲ್ಲಿ ಇರುವ ಕಿರಿಕಿರಿಯು ಶಮನವಾಗಲಿದೆ. ಅನವಶ್ಯಕ ಖರ್ಚುಗಳ ಮೇಲೆ ನಿಯಂತ್ರಣವಿರಲಿ. ಇಂದು ನಿಮಗೆ ಅನಾರೋಗ್ಯದ ಸಮಸ್ಯೆ ಉಂಟಾಗಬಹುದು. ಆದರೆ ಚಿಂತೆ ಬೇಡ. ಮನೆ ಮದ್ದಿನಲ್ಲೇ ಪರಿಹಾರವಿದೆ.

ಕನ್ಯಾ : ಇಂದು ನಿಮಗೆ ವಾಹನ ಪ್ರಯಾಣ ಯೋಗ್ಯವಾಗಿಲ್ಲ. ಹೀಗಾಗಿ ಆದಷ್ಟು ವಾಹನಗಳಿಂದ ದೂರವೇ ಇರಿ. ಸ್ತ್ರೀಯರಿಗೆ ಅನಿರೀಕ್ಷಿತ ಮೂಲದಿಂದ ಹಣವು ಹರಿದುಬರಲಿದೆ. ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ ಕಾದಿದೆ.

ತುಲಾ : ಅಗ್ನಿಯಿಂದ ಅಪಾಯವಿದೆ. ಆದಷ್ಟು ಎಚ್ಚರಿಕೆಯಿಂದಿರಿ. ಕಚೇರಿಯಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆಗಿಟ್ಟಿಸಿಕೊಳ್ಳಲಿದ್ದೀರಿ. ತಂದೆಯಿಂದ ನಿಮ್ಮ ಮನಸ್ಸಿಗೆ ನೋವಾಗುವಂತ ಪ್ರಸಂಗವೊಂದು ನಡೆಯಲಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಒಳಿತಾಗಲಿದೆ.

ವೃಶ್ಚಿಕ : ಹೊಸ ಮೂಲಗಳಿಂದ ನಿಮಗೆ ಧನಾಗಮನವಾಗಲಿದೆ. ಇದರಿಂದ ನೀವಿಂದು ಸಂತಸದಿಂದ ಇರಲಿದ್ದೀರಿ. ವೈದ್ಯಕೀಯ ವೃತ್ತಿಯಲ್ಲಿ ಇರುವವರಿಗೆ ಒತ್ತಡದ ದಿನವಾಗಿದೆ. ತಾಯಿಯ ಆರೋಗ್ಯದ ಮೇಲೆ ಕಾಳಜಿ ಇರಲಿ.

ಧನು : ನಿಮ್ಮ ಸೋಮಾರಿತನದ ಬುದ್ಧಿಯಿಂದ ಒಳ್ಳೆಯ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದೀರಿ. ಐಷಾರಾಮಿ ಜೀವನದಿಂದ ಧನವ್ಯಯವಾಗಲಿದೆ. ಹೀಗಾಗಿ ಹಾಸಿಗೆ ಇದ್ದಷ್ಟೇ ಕಾಲು ಚಾಚಿ. ಸಂಗಾತಿ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ.

ಮಕರ : ಇಂದು ನೀವು ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ವೈವಾಹಿಕ ಸಂಬಂಧಕ್ಕೆ ಅರಸುತ್ತಿದ್ದವರಿಗೆ ಇಂದು ಕಂಕಣ ಭಾಗ್ಯ ಕೂಡಿ ಬರಲಿದೆ. ಸರ್ಕಾರಿ ಉದ್ಯೋಗಿಗಳಿಗೆ ಪದನ್ನೋತಿ ಭಾಗ್ಯವಿದೆ. ಅಡಿಕೆ ವ್ಯಾಪಾರಿಗಳಿಗೆ ಲಾಭವಿದೆ.

ಕುಂಭ : ಕೋರ್ಟ್- ಕಚೇರಿ ವ್ಯವಹಾರಗಳಲ್ಲಿ ನಿಮಗೆ ಜಯ ಲಭಿಸಲಿದೆ. ಗಣ್ಯ ವ್ಯಕ್ತಿಗಳನ್ನು ಇಂದು ಭೇಟಿ ಮಾಡಲಿದ್ದೀರಿ. ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಭೂ ವ್ಯಾಜ್ಯದಿಂದ ಇಂದು ನೀವು ವಿಮುಕ್ತರಾಗಲಿದ್ದೀರಿ. ವಿದ್ಯಾರ್ಥಿಗಳಿಗೆ ಗುರು ಅನುಗ್ರಹವಿದೆ.

ಮೀನ : ಕೃಷಿಕರಿಗೆ ಕೈಕೊಡುತ್ತಿರುವ ಹವಾಮಾನವು ಚಿಂತೆಗೆ ನೂಕಿದೆ. ಸ್ತ್ರೀಯರಿಗೆ ಧನಲಾಭವಿದೆ. ಮೇಲಾಧಿಕಾರಿಗಳ ಜೊತೆ ಉತ್ತಮ ಸಂಬಂಧ ಹೊಂದಲು ಯತ್ನಿಸುವಿರಿ. ವಿದ್ಯಾರ್ಥಿಗಳಿಗೆ ವಿದೇಶಿ ಪ್ರಯಾಣದ ಯೋಗವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...