alex Certify ಈ ರಾಶಿಯ ವಿದ್ಯಾರ್ಥಿಗಳಿಗಿದೆ ಇಂದು ಗುರುವಿನ ಅನುಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯ ವಿದ್ಯಾರ್ಥಿಗಳಿಗಿದೆ ಇಂದು ಗುರುವಿನ ಅನುಗ್ರಹ

ಮೇಷ : ಸಂಗಾತಿಯು ನಿಮಗೆ ಅತ್ಯಂತ ದುಬಾರಿ ಉಡುಗೊರೆಯನ್ನು ನೀಡಲಿದ್ದಾರೆ. ಇದರಿಂದ ನೀವು ತುಂಬಾನೇ ಸಂತಸಗೊಳ್ಳುವಿರಿ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಇರಲಿದೆ. ಕೋಪ ಬಂದಾಗ ಕೆಟ್ಟ ಪದಗಳ ಬಳಕೆ ಮಾಡಬೇಡಿ. ಇದರಿಂದ ದೊಡ್ಡ ಮನಸ್ತಾಪವೇ ಉಂಟಾಗಬಹುದು.

ವೃಷಭ : ಕಚೇರಿಗೆ ಹೋಗುವ ಮುನ್ನ ಎಲ್ಲಾ ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸಿಕೊಂಡು ಹೋಗಿ. ಇಲ್ಲವಾದಲ್ಲಿ ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವಿರಿ. ಮನೆಯ ಹಿರಿಯ ಸದಸ್ಯರ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಈ ದಿನ ನಿಮ್ಮ ಪಾಲಿಗೆ ಖರ್ಚಿನ ದಿನವಾಗಿರಲಿದೆ.

ಮಿಥುನ: ಇಂದು ಕೆಲಸದಲ್ಲಿ ನಿಮಗೆ ಮಿಶ್ರ ಫಲಿತಾಂಶ ಸಿಗಲಿದೆ. ಕಚೇರಿಯಲ್ಲಿ ನೀವು ಮಾಡುವ ಸಣ್ಣ ತಪ್ಪಿಗೆ ಭಾರೀ ದೊಡ್ಡ ತಲೆದಂಡ ತೆರಬೇಕಾಗಿ ಬರಬಹುದು. ಹೀಗಾಗಿ ಆದಷ್ಟು ಎಚ್ಚರಿಕೆಯಿಂದಿರಿ. ದಾಂಪತ್ಯ ಜೀವನದಲ್ಲಿ ನೆಮ್ಮದಿ. ವಿದ್ಯಾರ್ಥಿಗಳಿಗೆ ಗುರುವಿನ ಅನುಗ್ರಹ ಇರಲಿದೆ.

ಕಟಕ: ಕಂಡಿದ್ದನ್ನೆಲ್ಲ ಕೊಳ್ಳಬೇಕು ಎಂದು ಹೋದರೆ ನೀವು ಹಣ ಉಳಿತಾಯ ಮಾಡಲು ಸಾಧ್ಯವೇ ಇಲ್ಲ. ಆದಷ್ಟು ಹಣವನ್ನು ಕೂಡಿಡಲು ಕಲಿತುಕೊಳ್ಳಿ. ಆರೋಗ್ಯದ ವಿಚಾರದಲ್ಲಿ ಸಣ್ಣ ಸಮಸ್ಯೆಯನ್ನೂ ನಿರ್ಲಕ್ಷ್ಯ ಮಾಡಲೇಬೇಡಿ. ಮಾರ್ಕೆಟಿಂಗ್​ ಕೆಲಸಗಾರರು ಇಂದು ಉತ್ತಮ ಬೆಳವಣಿಗೆ ಕಾಣುತ್ತಾರೆ.

ಸಿಂಹ : ಸಾಮಾಜಿಕ ಜೀವನದಲ್ಲಿ ನಿಮಗೆ ಗೌರವ ಹೆಚ್ಚಾಗಲಿದೆ. ಸಂಗಾತಿಯಿಂದ ಕಿರಿಕಿರಿ ಇರಲಿದೆ. ಆದರೂ ತಾಳ್ಮೆಯನ್ನು ಕಳೆದುಕೊಳ್ಳಬೇಡಿ. ಜಗಳದಿಂದ ಯಾವುದೇ ಮನಸ್ತಾಪವು ಸರಿಯಾಗುವುದಿಲ್ಲ. ಪೋಷಕರ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಹೊಸ ಅತಿಥಿ ಮನೆಗೆ ಆಗಮಿಸಲಿದ್ದಾರೆ.

ಕನ್ಯಾ : ಮನೆಯಲ್ಲಿ ಇಂದು ಆಸ್ತಿ ವಿಚಾರವಾಗಿ ಕಲಹ ಉಂಟಾಗಲಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಎಣ್ಣೆಯಲ್ಲಿ ಕರಿದ, ಹೊರಗಿನ ಆಹಾರ ಸೇವನೆ ಬೇಡ. ಉದ್ಯಮದ ನಿಮಿತ್ತ ದೂರ ಪ್ರಯಾಣ ಮಾಡುವ ನೀವು ಅತಿಯಾಗಿ ದಣಿಯಲಿದ್ದೀರಿ.

ತುಲಾ : ತಾಯಿಯ ಆರೋಗ್ಯ ಕ್ಷೀಣಿಸುವುದರಿಂದ ಇಂದು ನಿಮ್ಮ ಪಾಲಿಗೆ ಅತ್ಯಂತ ಆತಂಕದ ದಿನ ಎನಿಸಲಿದೆ. ಹಣದ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ. ಪ್ರಭಾವಿ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ. ಸಾಲ ಕೊಡುವುದು ಹಾಗೂ ಪಡೆಯುವುದನ್ನು ತಪ್ಪಿಸಿ.

ವೃಶ್ಚಿಕ : ಆರ್ಥಿಕವಾಗಿ ಇಂದು ನೀವು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಆನ್​ಲೈನ್​ ವ್ಯಾಪಾರಿಗಳು ಇಂದು ಹೆಚ್ಚಿನ ಲಾಭ ಗಳಿಸಲಿದ್ದಾರೆ. ಮನೆಯಲ್ಲಿ ಚಿನ್ನಾಭರಣ ಖರೀದಿ ಮಾಡಲಿದ್ದೀರಿ. ವೈವಾಹಿಕ ಸಂಬಂಧ ಕೂಡಿ ಬರಲಿದೆ. ಗರ್ಭಿಣಿಯರಿಗೆ ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ.

ಧನು : ಮನೆಯಲ್ಲಿ ಶಾಂತಿಗೆ ಭಂಗ ಬರಲಿದೆ. ನಿಮ್ಮ ಇಚ್ಛೆಗಳನ್ನು ಸಂಗಾತಿಯ ಮೇಲೆ ಹೇರುವುದನ್ನು ತಪ್ಪಿಸಿ. ಅವರಿಗೂ ಬದುಕಿನ ಸ್ವಾತಂತ್ರ್ಯ ಇದೆ ಎನ್ನುವುದನ್ನು ಮರೆಯಬೇಡಿ. ತೈಲ ಹಾಗೂ ಜವಳಿ ವ್ಯಾಪಾರಿಗಳಿಗಳಿಗೆ ಇಂದು ಲಾಭವಿದೆ.

ಮಕರ : ರಾಜಕೀಯ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ. ಆಸ್ತಿಯ ವಿಚಾರದಲ್ಲಿ ಉಂಟಾಗಿರುವ ವಿವಾದವನ್ನು ಬಗೆಹರಿಸಲು ಪ್ರಭಾವಿ ವ್ಯಕ್ತಿಯಿಂದ ಸಹಾಯವನ್ನು ಪಡೆಯುವಿರಿ. ಕೃಷಿ ಸಂಬಂಧಿ ಚಟುವಟಿಕೆಗಳಲ್ಲಿ ಇರುವವರಿಗೆ ಲಾಭವಿದೆ. ಯಾವುದೇ ಕಾರಣಕ್ಕೂ ಇಂದು ಬೆಂಕಿಯ ಸಮೀಪ ಹೋಗಲೇಬೇಡಿ. ಪ್ರಯಾಣ ಕೂಡ ಶುಭಕರವಲ್ಲ.

ಕುಂಭ : ವ್ಯಾಪಾರಿಗಳು ಇಂದು ಅಧಿಕ ಲಾಭ ನಿರೀಕ್ಷಿಸಬಹುದು. ಅನುಭವಿಗಳಿಂದ ಮಾರ್ಗದರ್ಶನವನ್ನು ಪಡೆಯಲಿದ್ದೀರಿ. ವಿದ್ಯಾರ್ಥಿಗಳಿಗೆ ವಿದೇಶಿ ಪ್ರಯಾಣದ ಯೋಗ ಕೂಡಿ ಬರಲಿದೆ. ಮನೆಯ ವಾತಾವರಣ ಶಾಂತಿಯುತವಾಗಿ ಇರಲಿದೆ. ತಾಯಿಯ ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ.

ಮೀನ : ಕೊಟ್ಟ ಕೆಲಸವನ್ನು ನಿಗದಿತ ದಿನಾಂಕದ ಒಳಗೆ ಪೂರೈಸುವ ನೀವು ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ಬಹಳ ದಿನಗಳಿಂದ ಕೊಳ್ಳಬೇಕು ಎಂದುಕೊಂಡಿದ್ದ ಆಭರಣ ಖರೀದಿಗೆ ಇಂದು ಮುಹೂರ್ತ ಕೂಡಿ ಬರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...