alex Certify ಈ ರಾಶಿಯವರು ಇಂದು ಮುಟ್ಟಿದ್ದೆಲ್ಲ ಚಿನ್ನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರು ಇಂದು ಮುಟ್ಟಿದ್ದೆಲ್ಲ ಚಿನ್ನ

 

ಮೇಷ: ಅಂದುಕೊಂಡ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸಲಿದ್ದೀರಿ. ಬಹಳ ದಿನಗಳ ಬಳಿಕ ಪೋಷಕರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಸಂಗಾತಿಯು ಚಿಕ್ಕ ಚಿಕ್ಕ ವಿಷಯಕ್ಕೆ ನಿಮ್ಮ ಮೇಲೆ ಕಿರಿಕಿರಿ ಮಾಡಬಹುದು. ಭೂಮಿ ಖರೀದಿ ಮಾಡುವವರಿಗೆ ಇದು ಶುಭ ದಿನ.

ವೃಷಭ :  ಎಲ್ಲಾ ವಿಚಾರದಲ್ಲಿಯೂ ಋಣಾತ್ಮಕವಾಗಿ ಯೋಚನೆ ಮಾಡುವುದನ್ನು ಮೊದಲು ಬಿಟ್ಟುಬಿಡಿ. ಇದರಿಂದ ನಿಮ್ಮ ನೆಮ್ಮದಿಯೇ ಹಾಳಾಗಲಿದೆ. ಸಾರ್ವಜನಿಕ ಜೀವನದಲ್ಲಿ ನಿಮ್ಮ ಸಂವಹನ ಕೌಶಲ್ಯವು ಪ್ರಶಂಸೆಗೆ ಪಾತ್ರವಾಗಲಿದೆ.

ಮಿಥುನ : ಕಚೇರಿಗೆ ತೆರಳುವ ಮುನ್ನ ಎಲ್ಲಾ ದಾಖಲೆಗಳನ್ನು ನೂರು ಭಾರಿ ಪರಿಶೀಲನೆ ಮಾಡಿಕೊಳ್ಳಿ. ಇಲ್ಲವಾದಲ್ಲಿ ಇಂದು ನೀವು ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ. ಇಂದು ಯಾರಿಗೂ ಸಾಲ ನೀಡಬೇಡಿ. ಹಣ ಮರಳಿ ಸಿಗೋದಿಲ್ಲ.

ಕಟಕ :  ಉದ್ಯಮವನ್ನು ವಿಸ್ತರಿಸಬೇಕು ಎಂದುಕೊಂಡವರಿಗೆ ಇದು ಸಕಾಲವಾಗಿದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳಲು ಅವಕಾಶ ಕೂಡಿ ಬರಲಿದೆ. ಸ್ತ್ರೀಯರಿಗೆ ಧನಲಾಭವಿದೆ. ಹಿತಶತ್ರುಗಳಿಂದ ಎಚ್ಚರಿಕೆ ಇರಲಿ.

ಸಿಂಹ :  ಆಸ್ತಿ ವಿಚಾರವಾಗಿ ನಿಮಗೆ ಹಾಗೂ ನಿಮ್ಮ ಸಹೋದರನಿಗೂ ಕಲಹ ಉಂಟಾಗಬಹುದು. ಇದರಿಂದ ಕುಟುಂಬದಲ್ಲಿ ಅಸಮಾಧಾನದ ವಾತಾವರಣ ನಿರ್ಮಾಣವಾಗಲಿದೆ. ಬಹಳ ದಿನಗಳಿಂದ ವೈವಾಹಿಕ ಸಂಬಂಧಕ್ಕೆ ಹುಡುಕಾಡುತ್ತಿರುವವರಿಗೆ ಇದು ಸಕಾಲವಾಗಿದೆ.

ಕನ್ಯಾ:  ಸ್ವಂತ ವ್ಯವಹಾರ ಆರಂಭಿಸಬೇಕು ಎಂದುಕೊಂಡವರಿಗೆ ಇದು ಶುಭ ದಿನವಾಗಿದೆ. ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ತಂದೆಯು ಪ್ರಮುಖ ಪಾತ್ರ ವಹಿಸಲಿದ್ದಾರೆ. ಕಲಾವಿದರಿಗೆ ಉತ್ತಮ ಅವಕಾಶ ಹುಡುಕಿಕೊಂಡು ಬರಲಿದೆ.

ತುಲಾ :  ಸಂದರ್ಶನ ನೀಡಿ ಉದ್ಯೋಗಕ್ಕಾಗಿ ಕಾಯುತ್ತಿರುವ ನೀವಿಂದು ಶುಭ ಸುದ್ದಿಯನ್ನೇ ಕೇಳಲಿದ್ದೀರಿ. ಸಂಗಾತಿಯು ನಿಮಗೆ ಬೆಲೆ ಬಾಳುವ ಆಭರಣವನ್ನು ಉಡುಗೊರೆ ರೂಪದಲ್ಲಿ ನೀಡಲಿದ್ದಾರೆ. ಸ್ವಂತ ವ್ಯವಹಾರ ಆರಂಭಿಸಲಿದ್ದೀರಿ.

ವೃಶ್ಚಿಕ : ಸ್ತ್ರೀಯರಿಗೆ ಈ ದಿನವು ಹೆಚ್ಚು ಮಂಗಳಕರವಾಗಿದೆ. ಈ ದಿನ ನೀವು ಮುಟ್ಟಿದ್ದೆಲ್ಲ ಚಿನ್ನವೇ ಆಗಲಿದೆ. ಸಂಘ ಸಂಸ್ಥೆಗಳನ್ನು ನಡೆಸುತ್ತಿರುವವರು ಸಾರ್ವಜನಿಕ ಜೀವನದಲ್ಲಿ ಮತ್ತಷ್ಟು ಗೌರವ ಸಂಪಾದಿಸಲಿದ್ದಾರೆ. ಸಂತಾನ ಭಾಗ್ಯವಿದೆ.

ಧನು : ವೃತ್ತಿ ಕ್ಷೇತ್ರದಲ್ಲಿ ನೀವು ಮಾಡಿದ ಸಾಧನೆಯು ನಿಮ್ಮ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಲಿದೆ. ದಿನನಿತ್ಯದ ಚಟುವಟಿಕೆಗಳಲ್ಲಿ ಭಾರೀ ಬದಲಾವಣೆ ಉಂಟಾಗಲಿದೆ. ಕೃಷಿಕರಿಗೆ ಅನಿರೀಕ್ಷಿತ ಲಾಭ ಕಾದಿದೆ. ಕಂಕಣ ಭಾಗ್ಯವಿದೆ.

ಮಕರ : ಕೋರ್ಟ್ – ಕಚೇರಿ ವ್ಯವಹಾರಗಳಲ್ಲಿ ನಿಮಗೆ ಮುನ್ನಡೆ ಕಾದಿದೆ. ನಿಮ್ಮ ಹೊಸ ಪ್ರಯತ್ನಗಳಿಗೆ ಸ್ನೇಹಿತರು ಬೆಂಬಲ ನೀಡಲಿದ್ದಾರೆ. ದಾಂಪತ್ಯ ಜೀವನದಲ್ಲಿನ ಬಿಕ್ಕಟ್ಟುಗಳು ಶಮನವಾಗಲಿದೆ. ಮಕ್ಕಳ ಆರೋಗ್ಯದ ಮೇಲೆ ಜಾಗ್ರತೆ ಇರಲಿ.

ಕುಂಭ : ಬಹಳ ದಿನಗಳ ಬಳಿಕ ನೀವಿಂದು ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಇಡೀ ದಿನ ನೀವು ಉಲ್ಲಾಸದಾಯಕವಾಗಿ ಕಳೆಯಲಿದ್ದೀರಿ. ವ್ಯಾಪಾರ ವ್ಯವಹಾರಗಳಲ್ಲಿ ನೆಮ್ಮದಿ ಕಾದಿದೆ. ಸಂಬಂಧಿಕರಿಗೆ ನಿಮ್ಮ ಮೇಲೆ ಉತ್ತಮ ಭಾವನೆ ಮೂಡಲಿದೆ.

ಮೀನ :  ಆಸ್ತಿ ವಿಚಾರವಾಗಿ ಕುಟುಂಬಸ್ಥರ ಜೊತೆ ದೊಡ್ಡ ಕಲಹ ಉಂಟಾಗಲಿದೆ. ವ್ಯಾಪಾರದಲ್ಲಿ ಏರಿಳಿತ ಉಂಟಾಗಲಿದೆ. ಗಡಿಬಿಡಿಯಲ್ಲಿ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಇದರಿಂದ ಹೆಚ್ಚಿನ ನಷ್ಟವನ್ನು ಅನುಭವಿಸಲಿದ್ದೀರಿ. ಪರಿಸ್ಥಿತಿಯನ್ನು ಚಾಣಾಕ್ಷತನದಿಂದ ಎದುರಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...