alex Certify ಈ ರಾಶಿಯ ಕೃಷಿಕರಿಗಿದೆ ಇಂದು ಉತ್ತಮ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯ ಕೃಷಿಕರಿಗಿದೆ ಇಂದು ಉತ್ತಮ ಅವಕಾಶ

ಮೇಷ : ಗೃಹೋಪಯೋಗಿ ವಸ್ತುಗಳಿಗಾಗಿ ವಿಪರೀತ ಖರ್ಚು ಮಾಡಬೇಕಾಗಿ ಬರಬಹುದು. ವ್ಯಾಪಾರ – ವ್ಯವಹಾರ ಕುರಿತಂತೆ ಪರಿಣಿತರು ನಿಮಗೆ ಸೂಕ್ತ ಮಾರ್ಗದರ್ಶನ ಮಾಡಲಿದ್ದಾರೆ, ಹಣ ಮಾಡುವ ಭರದಲ್ಲಿ ದುರಾಲೋಚನೆ ಮಾಡಬೇಡಿ.

ವೃಷಭ : ಯಾವುದೇ ಸಂದರ್ಭದಲ್ಲೂ ಮಾತಿನ ಮೇಲೆ ಹಿಡಿತ ಕಳೆದುಕೊಳ್ಳಬೇಡಿ. ಕುಟುಂಬ ಸದಸ್ಯರಿಂದ ಮಾರ್ಗದರ್ಶನ ಸಿಗಲಿದೆ. ತಂದೆಯು ನಿಮ್ಮ ಮನಸ್ಸಿಗೆ ನೋವಾಗುವಂತೆ ಮಾತನಾಡಲಿದ್ದಾರೆ. ಆದರೂ ಸ್ಥಿಮಿತ ಕಳೆದುಕೊಳ್ಳಬೇಡಿ.

ಮಿಥುನ : ಸಂಗಾತಿಯೊಡನೆ ಇಂದು ಮುಕ್ತವಾಗಿ ಮಾತನಾಡಲಿದ್ದೀರಿ. ಅನಗತ್ಯ ಕೆಲಸಗಳಿಗೆ ಧನಹಾನಿಯಾಗಲಿದೆ. ಮನೆ ನವೀಕರಣ ಕಾರ್ಯದ ಬಗ್ಗೆ ಚರ್ಚೆ ಮಾಡಲಿದ್ದೀರಿ. ಕಲಾವಿದರಿಗೆ ಇಂದು ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ.

ಕಟಕ : ನಿಮ್ಮ ಬಳಿ ಪ್ರತಿಭೆ ಇದೆ. ಆದರೆ ನಿಮ್ಮ ಆಲಸ್ಯ ಮನೋಭಾವದಿಂದ ಅದನ್ನು ಹಾಳು ಮಾಡಿಕೊಳ್ಳುತ್ತಿದ್ದೀರಿ. ಕಚೇರಿ ಕೆಲಸಗಳಲ್ಲಿಯೂ ನಿಮ್ಮ ಸೋಮಾರಿತನವೇ ನಿಮ್ಮ ಯಶಸ್ಸಿಗೆ ಮುಳುವಾಗಿದೆ. ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿದ್ದಾರೆ.

ಸಿಂಹ : ಮಾನಸಿಕವಾಗಿ ನೋವುಂಟಾಗುವಂತಹ ಘಟನೆಯೊಂದು ಜರುಗಲಿದೆ. ಉತ್ತಮ ಆರೋಗ್ಯಕ್ಕಾಗಿ ನೀವು ದೇಹದಂಡನೆ ಮಾಡಲೇಬೇಕು. ಕಚೇರಿಗೆ ತೆರಳುವ ಮುನ್ನ ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಿಕೊಳ್ಳಿ. ಇಲ್ಲವಾದಲ್ಲಿ ಮೇಲಾಧಿಕಾರಿಗಳಿಂದ ಬೈಗುಳ ಕೇಳಬೇಕಾದೀತು.

ಕನ್ಯಾ : ಮನೆ ಕಟ್ಟುವ ಕಾರ್ಯ ಇಂದು ಪೂರ್ಣಗೊಳ್ಳುವುದರಿಂದ ನಿಮಗೆ ನಿರಾಳ ಎನಿಸಲಿದೆ. ಮನೆಯಲ್ಲಿ ವೈವಾಹಿಕ ಸಂಬಂಧದ ಬಗ್ಗೆ ಚರ್ಚೆ ನಡೆಯಲಿದೆ. ಬೆನ್ನು ನೋವಿನ ಸಮಸ್ಯೆ ನಿಮ್ಮನ್ನು ಕಾಡಬಹುದು. ವಾಹನಕ್ಕೆ ರಿಪೇರಿ ಮಾಡಿಸಬೇಕಾಗಿ ಬರಬಹುದು.

ತುಲಾ : ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ. ಇದರಿಂದ ನಿಮ್ಮ ಮನಸ್ಸಿಗೆ ನೋವಾಗಲಿದೆ. ಮಕ್ಕಳ ಒತ್ತಾಯಕ್ಕೆ ಮಣಿದು ವಾಹನ ಖರೀದಿ ಮಾಡುವಿರಿ. ಜವಳಿ ವ್ಯಾಪಾರಿಗಳಿಗೆ ಲಾಭವಿದೆ. ಶೀತ ಸಂಬಂಧಿ ಕಾಯಿಲೆ ನಿಮ್ಮನ್ನು ಭಾದಿಸಲಿದೆ.

ವೃಶ್ಚಿಕ : ನೀವು ಅಂದುಕೊಂಡ ಕಾರ್ಯ ಪೂರ್ಣ ಪ್ರಮಾಣದಲ್ಲಿ ಅಲ್ಲದೇ ಹೋದರೂ ಸಹ ಅಲ್ಪ ಪ್ರಮಾಣದಲ್ಲಿ ಈಡೇರಲಿದೆ. ಅನೇಕ ಗೊಂದಲಗಳು ನಿಮ್ಮ ಮನಸ್ಸಿನಲ್ಲಿ ಗೂಡು ಮಾಡಿದೆ.ಇದು ಹೆಮ್ಮರವಾಗುವ ಮುನ್ನ ಬಗೆಹರಿಸಿಕೊಳ್ಳಲು ಯತ್ನಿಸಿ.

ಧನು : ಇಂದು ನಿಮಗೆ ಹೊಸ ಸ್ನೇಹಿತರ ಪರಿಚಯವಾಗಲಿದೆ. ಮನೆಯಲ್ಲಿ ನಿಮ್ಮ ವೈವಾಹಿಕ ಸಂಬಂಧದ ಬಗ್ಗೆ ಹಿರಿಯರು ಚರ್ಚೆ ನಡೆಸಲಿದ್ದಾರೆ. ಕೃಷಿಕರಿಗೆ ಇಂದು ಎಲ್ಲಾ ಕಾರ್ಯಗಳಲ್ಲಿ ಲಾಭವಿದೆ.

ಮಕರ : ಕೋರ್ಟ್ – ಕಚೇರಿ ವ್ಯವಹಾರಗಳಲ್ಲಿ ಜಯ ನಿಮ್ಮದಾಗಲಿದೆ. ಉದ್ಯಮಗಳಿಗೆ ಇಂದು ಅಲ್ಪಲಾಭವಿದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ನಿಮ್ಮ ಉದಾರ ಗುಣವು ನಿಮಗೆ ಪ್ರಶಂಸೆ ತಂದುಕೊಡಲಿದೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಕುಂಭ : ಉದ್ಯಮದ ವಿಚಾರದಲ್ಲಿ ನಿಮಗೂ ಹಾಗೂ ನಿಮ್ಮ ತಂದೆ ನಡುವೆ ವಾದ ಉಂಟಾಗಬಹುದು. ತಾಳ್ಮೆಯಿಂದ ಈ ಪರಿಸ್ಥಿತಿಯನ್ನು ನಿಭಾಯಿಸಿ. ತಾಯಿ ನಿಮಗೆ ಬೆಂಬಲ ನೀಡುತ್ತಾರೆ. ಆತ್ಮೀಯರೊಂದಿಗೆ ಪ್ರೀತಿಯಿಂದ ವರ್ತಿಸಿ.

ಮೀನ : ಎಷ್ಟು ಸಂಪಾದನೆ ಮಾಡಿದರೂ ಆರ್ಥಿಕ ಸ್ಥಿತಿ ಸುಧಾರಿಸುತ್ತಿಲ್ಲ ಎಂದು ಕೊರಗುವ ಮುನ್ನ ಎಲ್ಲೆಲ್ಲಿ ಹಣ ಪೋಲಾಗುತ್ತಿದೆ ಎಂಬುದರ ಬಗ್ಗೆ ಗಮನ ಹರಿಸಿ. ಆಸ್ತಿ ವಿಚಾರದಲ್ಲಿ ಕುಟುಂಬಸ್ಥರ ನಡುವೆ ಕಲಹ ಉಂಟಾಗಬಹುದು. ಅಪರಿಚಿತರಿಂದ ದೂರವಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...