alex Certify ಈ ರಾಶಿಯ ಕೃಷಿಕರಿಗಿದೆ ಇಂದು ಲಾಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯ ಕೃಷಿಕರಿಗಿದೆ ಇಂದು ಲಾಭ

ಮೇಷ : ವೃತ್ತಿ ಜೀವನದಲ್ಲಿ ಮುನ್ನಡೆ ಕಾದಿದೆ. ಇದರಿಂದ ನೀವು ಸಖತ್​ ಖುಷಿಯಾಗಿ ಇರಲಿದ್ದೀರಿ.

ವಿದ್ಯಾರ್ಥಿಗಳಿಗೆ ಅಂದುಕೊಂಡಿದ್ದು ಈಗ ದಕ್ಕದೇ ಇದ್ದರೂ ಮುಂದಿನ ದಿನಗಳಲ್ಲಿ ನೀವು ಅಂದುಕೊಂಡಿದ್ದನ್ನು ಸಾಧಿಸುವಿರಿ. ಕುಟುಂಬದಲ್ಲಿ ಶಾಂತಿಯಿದೆ.

ವೃಷಭ : ಪುತ್ರಿಗೆ ವೈವಾಹಿಕ ಸಂಬಂಧ ಕೂಡಿ ಬಂದಿಲ್ಲ ಎಂದು ಅನೇಕ ವರ್ಷಗಳಿಂದ ತಲೆಕೆಡಿಸಿಕೊಂಡಿದ್ದ ನಿಮಗೆ ಇಂದು ಶುಭ ಸುದ್ದಿ ಕಾದಿದೆ. ನಿಮ್ಮ ಪುತ್ರಿಗೆ ಸೂಕ್ತ ವರನ ಅನ್ವೇಷಣೆ ಆಗಲಿದೆ. ಪೋಷಕರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ.

ಮಿಥುನ : ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ. ಇದರಿಂದ ನಿಮಗೆ ಬೆನ್ನು ನೋವಿನ ಸಮಸ್ಯೆ ಭಾದಿಸಬಹುದು. ಆರ್ಥಿಕ ಸಂಕಷ್ಟದಿಂದ ಪಾರಾಗಲು ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ.

ಕಟಕ : ಉದ್ಯಮದ ನಿಮಿತ್ತ ದೂರ ಪ್ರಯಾಣ ಮಾಡುವಿರಿ. ಸಂಬಂಧಿಗಳು ಔತಣ ಕೂಟಕ್ಕೆ ನಿಮ್ಮನ್ನು ಆಹ್ವಾನಿಸಲಿದ್ದಾರೆ. ವೃತ್ತಿ ರಂಗದಲ್ಲಿ ಮೇಲಾಧಿಕಾರಿಗಳಿಂದ ಮೆಚ್ಚುಗೆಯ ಮಾತುಗಳನ್ನು ಕೇಳುವಿರಿ. ಕೃಷಿಕರಿಗೆ ಲಾಭ ಕಾದಿದೆ.

ಸಿಂಹ : ಅನೇಕ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಮನೆ ನಿರ್ಮಾಣ ಕಾರ್ಯವು ಇಂದಿನಿಂದ ಮತ್ತೆ ಚುರುಕುಗೊಳ್ಳಲಿದೆ. ಸಂಗಾತಿ ನಿಮಗೆ ಅನಿರೀಕ್ಷಿತ ಉಡುಗೊರೆಯನ್ನು ನೀಡಲಿದ್ದಾರೆ. ಸೂಪರ್​ ಮಾರ್ಕೆಟ್​​ ಮಾಲೀಕರಿಗೆ ಇಂದು ಬಂಪರ್​ ಲಾಭವಿದೆ.

ಕನ್ಯಾ : ಮನೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ಕೆ ಅಡ್ಡಿ ಆತಂಕಗಳು ಎದುರಾಗುವ ಸಾಧ್ಯತೆ ಇದೆ. ಪ್ರೀತಿ ಪಾತ್ರರಿಗೆ ಅನಿರೀಕ್ಷಿತ ಉಡುಗೊರೆಯನ್ನು ನೀಡುವಿರಿ. ಬೆನ್ನಿಗೆ ಚೂರಿ ಹಾಕುವವರಿಂದ ಎಚ್ಚರಿಕೆಯಿಂದಿರಿ. ಕಂಕಣ ಭಾಗ್ಯವಿದೆ.

ತುಲಾ : ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ಲತ್ತೆಯ ಪೆಟ್ಟು ಎಂಬ ಮಾತಿದೆ. ಮೇಲಾಧಿಕಾರಿಗಳು ನಿಮ್ಮ ತಪ್ಪುಗಳನ್ನು ಪದೇ ಪದೇ ಎಚ್ಚರಿಸುತ್ತಿದ್ದಾರೆ. ಇನ್ನೂ ಎಚ್ಚೆತ್ತುಕೊಳ್ಳದೇ ಹೋದಲ್ಲಿ ನಿಮ್ಮ ಕೆಲಸಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಗರ್ಭಿಣಿಯರ ಆರೋಗ್ಯದಲ್ಲಿ ಜಾಗೃತೆ ಇರಲಿ.

ವೃಶ್ಚಿಕ : ಮನಸ್ಸಿನ ಮಾತಿಗೆ ಬೆಲೆ ನೀಡಿ ನಿರ್ಧಾರಗಳನ್ನು ತೆಗೆದುಕೊಳ್ಳಿ. ಪ್ರತಿ ಬಾರಿಯೂ ನೀವು ಅಂದುಕೊಂಡಂತೆ ಪರಿಸ್ಥಿತಿ ಇರಲೇಬೇಕು ಎಂದೇನಿಲ್ಲ. ಹೀಗಾಗಿ ಯಾವುದೇ ಸ್ಥಿತಿಯಲ್ಲೂ ತಾಳ್ಮೆಯನ್ನು ಕಳೆದುಕೊಳ್ಳಬೇಡಿ.

ಧನು : ಅಕ್ಕನ ಚಾಳಿ ಮನೆಮಂದಿಗೆಲ್ಲ ಎಂಬಂತೆ ಮನೆಯ ಹಿರಿಯರು ತುಳಿದ ತಪ್ಪು ದಾರಿಯನ್ನೇ ನೀವು ತುಳಿಯುತ್ತಿದ್ದೀರಿ. ಇದು ಒಳ್ಳೆಯದಲ್ಲ. ಆದಷ್ಟು ತಪ್ಪನ್ನು ತಿದ್ದಿಕೊಳ್ಳಿ. ಸಂಗಾತಿಯು ನಿಮ್ಮೆಲ್ಲ ಕಾರ್ಯಗಳಿಗೆ ಬೆನ್ನೆಲುಬಿನಂತೆ ನಿಲ್ಲಲಿದ್ದಾರೆ. ಕೃಷಿಕರಿಗೆ ಲಾಭವಿದೆ.

ಮಕರ : ಕೋರ್ಟ್ – ಕಚೇರಿ ವ್ಯವಹಾರಗಳಲ್ಲಿ ನಿಮಗೆ ಮುನ್ನಡೆಯಿದೆ. ಆರೋಗ್ಯದಲ್ಲಿ ಏರು ಪೇರು ಉಂಟಾಗಬಹುದು. ಆದರೆ ಚಿಂತೆ ಬೇಡ. ಮನೆ ಮದ್ದಿನ ಮೂಲಕ ಪರಿಹಾರ ಸಿಗಲಿದೆ. ನವವಿವಾಹಿತರ ನಡುವೆ ಭಿನ್ನಾಭಿಪ್ರಾಯ ಮೂಡಬಹುದು.

ಕುಂಭ : ಕಚೇರಿ ವಿಚಾರದಲ್ಲಿ ಅಡಚಣೆ ಇದ್ದರೂ ಸಹ ಎಲ್ಲವನ್ನೂ ನಿಭಾಯಿಸಲಿದ್ದೀರಿ. ಎಲ್ಲಾ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಿರಿ. ಹಳೆಯ ಸಾಲಗಳು ತೀರಲಿವೆ.

ಮೀನ : ನಿಮ್ಮ ಎದುರು ಒಳ್ಳೆಯ ಮಾತುಗಳನ್ನಾಡಿ ಹಿಂದೆ ನಿಮ್ಮದೇ ಚಾಡಿ ಹೇಳುವವರ ವಿರುದ್ಧ ಅಂತರ ಕಾಯ್ದುಕೊಳ್ಳಿ. ರಾಜಕೀಯ ವ್ಯಕ್ತಿಗಳಿಗೆ ಇಂದು ಉನ್ನತ ಸ್ಥಾನ ಲಭಿಸಲಿದೆ. ವಿವಿಧ ಮೂಲಗಳಿಂದ ಧನ ಸಂಪತ್ತು ಹರಿದು ಬರಲಿದೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...