alex Certify ಈ ರಾಶಿಯವರ ಮನೆಯಲ್ಲಿ ನೆಲೆಸಲಿದೆ ನೆಮ್ಮದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರ ಮನೆಯಲ್ಲಿ ನೆಲೆಸಲಿದೆ ನೆಮ್ಮದಿ

ಮೇಷ : ಈ ದಿನ ನಿಮಗೆ ಶುಭ ದಿನ. ವ್ಯಾಪಾರ ಹಾಗೂ ವ್ಯವಹಾರದಲ್ಲಿ ನಿಮಗೆ ನಿರೀಕ್ಷಿತ ಲಾಭ ಸಿಗಲಿದೆ. ವೈವಾಹಿಕ ಸಂಬಂಧಕ್ಕೆ ಹುಡುಕಾಟ ನಡೆಸುತ್ತಿರುವವರಿಗೆ ಕಂಕಣಭಾಗ್ಯ ಸಿಗಲಿದೆ. ಕೆಲಸ ಕಾರ್ಯದಲ್ಲಿ ಪ್ರಗತಿ ಕಾಣುವಿರಿ.

ವೃಷಭ: ಮಕ್ಕಳ ಶೈಕ್ಷಣಿಕ ಪ್ರಗತಿಯಿಂದ ಸಂತುಷ್ಟರಾಗುವಿರಿ. ದವಸ ಧಾನ್ಯಗಳನ್ನು ದಾನ ಮಾಡೋದ್ರಿಂದ ಮನೆಯಲ್ಲಿ ನೆಮ್ಮದಿ ನೆಲೆಸಲಿದೆ. ಪೋಷಕರ ಸಲಹೆಯನ್ನು ಪಡೆಯದೇ ಯಾವುದೇ ನಿರ್ಧಾರ ಕೈಗೊಳ್ಳಬೇಡಿ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಇದೆ.

ಮಿಥುನ: ಶಿವನ ದೇವಸ್ಥಾನಕ್ಕೆ ಭೇಟಿ ನೀಡಿ ಬಿಲ್ವ ಪತ್ರೆಯನ್ನು ಅರ್ಪಿಸಿ. ಮಕ್ಕಳಾಗಿಲ್ಲದವರಿಗೆ ಮಕ್ಕಳಾಗಿಲ್ಲ ಎಂಬ ಚಿಂತೆ ಇನ್ನಷ್ಟು ಕಾಡಲಿದೆ. ಸಾಲದ ಭಾದೆಯಿಂದ ಬೇಯಲಿದ್ದೀರಿ. ಜವಳಿ ಉದ್ಯಮಿಗಳಿಗೆ ಲಾಭವಿದೆ.

ಕಟಕ: ಅಂದುಕೊಂಡ ಕಾರ್ಯದಲ್ಲಿ ಜಯ ಸಾಧಿಸಲಿದ್ದೀರಿ. ವಿದ್ಯಾರ್ಥಿಗಳು ಸಾಧನೆಯಿಂದ ಶಿಕ್ಷಣ ಸಂಸ್ಥೆಗೆ ಗೌರವ ಸಿಗಲಿದೆ. ವೈದ್ಯಕೀಯ ರಂಗದವರಿಗೆ ಒತ್ತಡ ಎದುರಾಗಲಿದೆ.

ಸಿಂಹ : ಅನಗತ್ಯ ಖರ್ಚು ಮಾಡಬೇಡಿ. ಇದರಿಂದ ಆರ್ಥಿಕವಾಗಿ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದ್ದೀರಿ. ಮನೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಪಿಠೋಪಕರಣಗಳ ಖರೀದಿ ಮಾಡಲಿದ್ದೀರಿ.

ಕನ್ಯಾ: ಮನೆಯಲ್ಲಿ ಚಿನ್ನಾಭರಣ ಖರೀದಿ ಮಾಡಲಿದ್ದೀರಿ.ಧಾರ್ಮಿಕ ಕಾರ್ಯದ ಮುನ್ಸೂಚನೆ ಸಿಗಲಿದೆ. ಕಚೇರಿಯಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆಗಿಟ್ಟಿಸಲಿದ್ದೀರಿ. ಬೆನ್ನು ನೋವಿನ ಸಮಸ್ಯೆ ನಿಮ್ಮನ್ನು ಕಾಡಲಿದೆ. ಹೀಗಾಗಿ ವಾಹನ ಸಂಚಾರ ಮಾಡದೆ ಇರೋದೇ ಒಳ್ಳೆಯದು.

ತುಲಾ : ಕುಟುಂಬದಲ್ಲಿ ದೊಡ್ಡ ಜವಾಬ್ದಾರಿಯ ಕಾರ್ಯವೊಂದು ನಿಮ್ಮ ಹೆಗಲೇರಲಿದೆ. ಹೀಗಾಗಿ ಖರ್ಚು ವೆಚ್ಚ ಕೂಡ ಹೆಚ್ಚಾಗಲಿದೆ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಇದೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಹುಡುಕಿಕೊಂಡು ಬರಲಿದೆ.

ವೃಶ್ಚಿಕ : ಸಾಲ ಕೊಟ್ಟವರು ಪದೇ ಪದೇ ನಿಮ್ಮನ್ನು ಕಾಡಲಿದ್ದಾರೆ. ಹೀಗಾಗಿ ಮಾನಸಿಕವಾಗಿ ನೀವು ಒತ್ತಡ ಅನುಭವಿಸಲಿದ್ದೀರಿ. ರಾಜಕೀಯ ರಂಗದವರಿಗೆ ಸಾರ್ವಜನಿಕ ಜೀವನದಲ್ಲಿ ಮನ್ನಣೆ ಸಿಗಲಿದೆ.

ಧನು : ಕೃಷಿಕರಿಗೆ, ಜವಳಿ ವ್ಯಾಪಾರಿಗಳು ಹಾಗೂ ಎಲೆಕ್ಟ್ರಾನಿಕ್​ ಉದ್ಯಮಿಗಳಿಗೆ ಲಾಭ ಸಿಗಲಿದೆ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಸಂಗಾತಿಯಿಂದ ಸಲಹೆಗಳನ್ನು ಸ್ವೀಕರಿಸಿ. ದುಡುಕಿ ಯಾವುದೇ ನಿರ್ಧಾರ ಕೈಗೊಳ್ಳಬೇಡಿ.

ಮಕರ : ನವದಂಪತಿಗೆ ಸಂತಾನ ಭಾಗ್ಯವಿದೆ. ಕೋರ್ಟ್​ – ವ್ಯವಹಾರದ ವಿಚಾರದಲ್ಲಿ ವಿಪರೀತ ಕಿರಿಕಿರಿ ಎದುರಿಸುತ್ತೀರಿ. ಕಚೇರಿ ಕೆಲಸದಲ್ಲಿ ಹಿತಶತ್ರುಗಳ ಕಾಟವಿದೆ. ಹೀಗಾಗಿ ಎಚ್ಚರಿಕೆಯಿಂದಿರಿ.

ಕುಂಭ : ಸಂಗಾತಿ ವಿಚಾರದಲ್ಲಿ ನಿಮಗೆ ಅಭದ್ರತೆ ಭಾವನೆ ಕಾಡಲಿದೆ. ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬೇಡಿ. ಶಿವನನ್ನು ಆರಾಧಿಸಿ. ಎಲ್ಲಾ ಸಂಕಷ್ಟಗಳಿಂದ ಮುಕ್ತಿ ಸಿಗಲಿದೆ. ಮಕ್ಕಳ ಅನಾರೋಗ್ಯದಿಂದ ಚಿಂತೆಗೀಡಾಗುವಿರಿ.

ಮೀನ : ತಾಳ್ಮೆ ಕಳೆದುಕೊಂಡು ಪೋಷಕರ ಎದುರೇ ವಾದಕ್ಕೆ ಇಳಿಯುವ ಸಾಧ್ಯತೆ ಇದೆ. ನಾಲಗೆ ಮೇಲೆ ಹಿಡಿತವಿರಿಲಿ. ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲಲಿದ್ದೀರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...