alex Certify ಈ ರಾಶಿಯವರು ಇಂದು ಕೇಳಲಿದ್ದೀರಿ ಮಕ್ಕಳಿಂದ ʼಶುಭ ಸುದ್ದಿʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರು ಇಂದು ಕೇಳಲಿದ್ದೀರಿ ಮಕ್ಕಳಿಂದ ʼಶುಭ ಸುದ್ದಿʼ

ಮೇಷ: ಉದ್ಯಮದಲ್ಲಿ ಹೂಡಿಕೆ ಮಾಡಬೇಕು ಎಂದುಕೊಂಡಿರುವ ನೀವು ಆಷಾಢ ಮಾಸ ಮುಗಿಯುವವರೆಗೂ ಕಾಯದೇ ಬೇರೆ ಮಾರ್ಗವಿಲ್ಲ. ತಾಯಿಯ ಆರೋಗ್ಯ ಹದಗೆಡೋದ್ರಿಂದ ಆತಂಕಕ್ಕೊಳಗಾಗುವಿರಿ. ಸಾಲಗಾರರ ಕಾಟ ನಿಮ್ಮನ್ನು ಬಿಟ್ಟುಬಿಡದೇ ಕಾಡಲಿದೆ. ಇದರಿಂದ ನೀವು ಒತ್ತಡಕ್ಕೆ ಸಿಲುಕಲಿದ್ದೀರಿ .

ವೃಷಭ: ಉದ್ಯಮದಲ್ಲಿ ಅತಿಯಾದ ಆತ್ಮವಿಶ್ವಾಸ ಕೂಡ ಒಳ್ಳೆಯದಲ್ಲ. ದೂರ ಪ್ರಯಾಣ ಮಾಡುವವರು ಎಚ್ಚರಿಕೆಯಿಂದಿರಿ. ನಿಮ್ಮಿಂದ ಸಾಲ ಪಡೆದವರು ಹಣ ನೀಡದೇ ಸತಾಯಿಸುತ್ತಾರೆ. ಗರ್ಭಿಣಿಯರಿಗೆ ಅನಾರೋಗ್ಯದ ಸಮಸ್ಯೆ ಕಾಡಲಿದೆ.

ಮಿಥುನ : ನೀವಂದುಕೊಂಡ ಕಾರ್ಯಗಳು ನೆರವೇರಲಿದೆ. ಕೋರ್ಟು – ಕಚೇರಿಯ ಕೆಲಸಗಳಲ್ಲಿ ವಿಳಂಬವಾಗಲಿದೆ. ಮಕ್ಕಳಿಂದ ಶುಭ ಸುದ್ದಿಯನ್ನು ಕೇಳುತ್ತೀರಿ. ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಕಟಕ : ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ದಶಕಗಳಿಂದ ಇದ್ದ ವಿವಾದವು ಶಮನವಾಗಲಿದೆ. ಕಲಾವಿದರಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ. ವಿವಾಹ ಸಂಬಂಧಕ್ಕೆ ಅರಸುತ್ತಿರುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ವ್ಯಾಪಾರ ವ್ಯವಹಾರದ ನಿಮಿತ್ತ ದೂರ ಪ್ರಯಾಣ ಮಾಡಲಿದ್ದೀರಿ.

ಸಿಂಹ: ವಿನಾಕಾರಣ ಇನ್ನೊಬ್ಬರ ವಿಚಾರದಲ್ಲಿ ಮೂಗು ತೂರಿಸುವುದನ್ನ ಬಿಟ್ಟುಬಿಡಿ. ತಾಳ್ಮೆಯಿಂದ ಪರಿಸ್ಥಿತಿಗಳನ್ನು ಎದುರಿಸಿ. ಕಚೇರಿಯಲ್ಲಿ ಹಿತಶತ್ರುಗಳ ಕಾಟವಿದೆ. ಆರ್ಥಿಕ ಸ್ಥಿತಿ ಸಾಮಾನ್ಯವಾಗಿ ಇರಲಿದೆ.

ಕನ್ಯಾ: ಮುಂಗೋಪವನ್ನು ನಿಯಂತ್ರಣ ಮಾಡಿಕೊಳ್ಳಿ. ಇಲ್ಲವಾದಲ್ಲಿ ವ್ಯಾಪಾರ – ವ್ಯವಹಾರದಲ್ಲಿ ನಷ್ಟ ಅನುಭವಿಸುತ್ತೀರಿ. ಹಿರಿಯರ ಮಾರ್ಗದರ್ಶನವಿಲ್ಲದೇ ಯಾವುದೇ ಕಾರ್ಯವನ್ನೂ ಮಾಡಬೇಡಿ. ವಿದ್ಯಾರ್ಥಿಗಳಿಗೆ ವಿದೇಶಿ ಪ್ರಯಾಣ ಯೋಗವಿದೆ.

ತುಲಾ: ಪದೇ ಪದೇ ತಾಳ್ಮೆ ಕಳೆದುಕೊಳ್ಳುವ ಮೂಲಕ ಕುಟುಂಬಸ್ಥರ ಅಸಮಾಧಾನಕ್ಕೆ ನೀವೇ ಕಾರಣರಾಗುತ್ತೀರಿ. ಇದರಿಂದ ನೀವು ಸ್ನೇಹಿತರನ್ನೂ ಕಳೆದುಕೊಳ್ಳುತ್ತೀರಿ. ಮನೆಯಲ್ಲಿ ಶೀಘ್ರದಲ್ಲೇ ಶುಭ ಕಾರ್ಯ ನಡೆಯಲಿದೆ.

ವೃಶ್ಚಿಕ : ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ನಿಮಗೆ ಹಿನ್ನಡೆಯಾಗಲಿದೆ. ಕಚೇರಿ ಕೆಲಸದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ ಗಳಿಸಲಿದ್ದೀರಿ. ಸಂಗಾತಿಯ ಸಲಹೆಯಿಂದ ಕಠಿಣ ಸವಾಲೊಂದು ಮಂಜಿನಂತೆ ಕರಗಲಿದೆ. ಹಿರಿಯರ ಆಶೀರ್ವಾದದಿಂದ ಕಷ್ಟದ ಕೆಲಸವನ್ನು ಪೂರೈಸಲಿದ್ದೀರಿ.

ಧನು : ಅನಿರೀಕ್ಷಿತ ಮೂಲದಿಂದ ಧನಾಗಮನವಾಗಲಿದೆ. ಸಂಗಾತಿಯಿಂದ ದುಬಾರಿ ಉಡುಗೊರೆಯೊಂದು ನಿಮ್ಮ ಕೈ ಸೇರಲಿದೆ. ಇದರಿಂದ ನೀವು ಸಂತಸಗೊಳ್ಳುತ್ತೀರಿ. ಹೋಟೆಲ್​ ಉದ್ಯಮಿಗಳು ನಷ್ಟ ಅನುಭವಿಸಲಿದ್ದಾರೆ. ಸ್ತ್ರೀಯರ ಮಹತ್ತರ ಆಸೆ ನೆರವೇರಲಿದೆ.

ಮಕರ : ಕಚೇರಿ ಕೆಲಸಕ್ಕೆ ಹೋಗುವ ಮುನ್ನ ಎಲ್ಲಾ ಕಾಗದ ಪತ್ರಗಳನ್ನು ಸರಿಯಾಗಿ ಜೋಡಿಸಿಕೊಳ್ಳಿ. ಇಲ್ಲವಾದಲ್ಲಿ ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ. ಮನೆಯಿಂದ ಹೊರಡುವ ಮುನ್ನ ಪೋಷಕರ ಆಶೀರ್ವಾದ ಪಡೆದುಕೊಳ್ಳಿ. ಕುಲದೇವತೆಯನ್ನು ಆರಾಧಿಸಿ.

ಕುಂಭ : ಕಚೇರಿ ಕೆಲಸದಲ್ಲಿ ಅತಿಯಾದ ಉತ್ಸಾಹ ತೋರಲಿದ್ದೀರಿ. ಸಹೋದ್ಯೋಗಿಗಳ ವರ್ತನೆ ನಿಮ್ಮ ಅಸಮಾಧಾನಕ್ಕೆ ಕಾರಣವಾಗಲಿದೆ. ನವವಿವಾಹಿತರಿಗೆ ಸಂತಾನ ಭಾಗ್ಯವಿದೆ. ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶ ಕೂಡಿ ಬರಲಿದೆ.

ಮೀನ : ಕಾಲು ನೋವಿನ ಸಮಸ್ಯೆ ನಿಮ್ಮನ್ನು ಬಿಟ್ಟುಬಿಡದೆ ಕಾಡುತ್ತಿದೆ. ಇದರಿಂದ ನಿಮಗೆ ಮೊದಲಿನಂತೆ ಚೈತನ್ಯದಲ್ಲಿ ಇರಲು ಆಗುತ್ತಿಲ್ಲ. ಮನೆಗೆ ನಿಮಗೆ ಇಷ್ಟವಿಲ್ಲದ ನೆಂಟರು ಬರೋದ್ರಿಂದ ಕೊಂಚ ಕಿರಿಕಿರಿ ಅನುಭವಿಸುತ್ತೀರಿ. ಶೀಘ್ರದಲ್ಲೇ ಮನೆಯಲ್ಲಿ ಪೂಜಾ ಕಾರ್ಯ ನಡೆಯುವ ಹಿನ್ನೆಲೆ ಕೆಲಸದ ಒತ್ತಡ ಹೆಚ್ಚಿರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...