alex Certify ಈ ರಾಶಿಯವರಿಗೆ ಸಿಗಲಿದೆ ಸಂಗಾತಿಯಿಂದ ಉತ್ತಮ ಉಡುಗೊರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಸಿಗಲಿದೆ ಸಂಗಾತಿಯಿಂದ ಉತ್ತಮ ಉಡುಗೊರೆ

ಮೇಷ : ಕಚೇರಿ ಕೆಲಸದಲ್ಲಿ ಒತ್ತಡ ಹೆಚ್ಚಾಗಲಿದೆ. ಮದುವೆಯಾಗಬೇಕು ಎಂದುಕೊಂಡವರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಯಶಸ್ಸಿನ ಅಲೆಯಲ್ಲಿ ಹೆಚ್ಚು ಸಮಯ ತೇಲಬೇಡಿ. ಶತ್ರುಗಳ ಉಪಟಳ ಕಡಿಮೆಯಾಗಲಿದೆ. ಸಂಗಾತಿಯ ಕೆಲ ಮಾತುಗಳು ನಿಮ್ಮ ಸ್ವಾಭಿಮಾನಕ್ಕೆ ಪೆಟ್ಟು ನೀಡಬಹುದು.

ವೃಷಭ : ಮಾನಸಿಕ ನೋವನ್ನ ಮರೆಯಲು ಕುಟುಂಬಸ್ಥರ ಜೊತೆ ಕಾಲ ಕಳೆಯಲಿದ್ದೀರಿ. ಎಲ್ಲದ್ದಕ್ಕೂ ಇನ್ನೊಬ್ಬರನ್ನ ಅವಲಂಬಿಸುವ ಬುದ್ಧಿಯನ್ನ ಬಿಟ್ಟುಬಿಡಿ. ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡುಬರಲಿದೆ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಕಲಹ ತಾರಕಕ್ಕೇರಲಿದೆ.

ಮಿಥುನ : ಸಂತಾನ ಭಾಗ್ಯವಿದೆ. ಗರ್ಭಿಣಿಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಮನೆಯಲ್ಲಿ ಶುಭ ಕಾರ್ಯ ನಡೆಯುವ ಮುನ್ಸೂಚನೆ ಸಿಗಲಿದೆ. ದೈವಿಕ ಕಾರ್ಯಗಳ ಬಗ್ಗೆ ಹೆಚ್ಚಿನ ಒಲವು ಮೂಡಲಿದೆ. ದ್ವಂದ್ವ ಚಿಂತನೆಯಿಂದ ಸಾಂಸಾರಿಕ ಜೀವನದಲ್ಲಿ ಕೊಂಚ ಕಿರಿಕಿರಿ ಎನಿಸಲಿದೆ.

ಕಟಕ: ಕಚೇರಿ ಕೆಲಸಗಳಿಗೆ ಮೊದಲ ಆದ್ಯತೆಯನ್ನ ನೀಡಿ. ಸರ್ಕಾರಿ ಕೆಲಸಗಾರರಿಗೆ ದೂರ ಪ್ರಯಾಣ ಮಾಡಬೇಕಾದ ಅನಿವಾರ್ಯಕತೆ ಎದುರಾಗಬಹುದು. ಹಿರಿಯರೊಂದಿಗೆ ವಾದ ಮಾಡಬೇಡಿ. ಮಕ್ಕಳಿಂದ ಶುಭಸುದ್ದಿಯನ್ನ ಕೇಳಲಿದ್ದೀರಿ. ಸುಬ್ರಹ್ಮಣ್ಯನ ಆರಾಧನೆ ಮಾಡಿ.

ಸಿಂಹ : ನಿರುದ್ಯೋಗಿಗಳಿಗೆ ಉತ್ತಮ ಅವಕಾಶ ಸಿಗಲಿದೆ. ಸಮಯ ಸಾಧಕರ ಬಗ್ಗೆ ಎಚ್ಚರದಿಂದಿರಿ. ವಿನಾಕಾರಣ ಸಂಗಾತಿಯ ಮೇಲೆ ಸಂಶಯ ಬೇಡ. ಬೇರೆಯವರು ನಿಮ್ಮನ್ನ ದುರುಪಯೋಗಪಡಿಸುವ ಸಾಧ್ಯತೆ ಇದೆ. ವಾಹನ ಚಾಲನೆ ವೇಳೆ ಎಚ್ಚರದಿಂದಿರಿ.

ಕನ್ಯಾ : ಆರ್ಥಿಕ ಸಮಸ್ಯೆಗಳು ಕಡಿಮೆ ಆಗಲಿದೆ. ಯಾರದ್ದೋ ಮಾತನ್ನ ಕೇಳಿ ಸಿಟ್ಟಾಗಿರುವ ಪತ್ನಿಯನ್ನ ಸಾಂತ್ವನಗೊಳಿಸಲು ನಿಮ್ಮ ತಾಳ್ಮೆಯೇ ಪ್ರಮುಖ ಸಾಧನ. ಅಸಹಾಯಕರಿಗೆ ಸಹಾಯ ಮಾಡೋದ್ರಿಂದ ಪುಣ್ಯ ಪ್ರಾಪ್ತಿಯಾಗಲಿದೆ. ಕುಲದೇವರನ್ನ ಆರಾಧಿಸಿ.

ತುಲಾ : ಜವಳಿ ಉದ್ಯಮಿಗಳಿಗೆ ಲಾಭವಿದೆ. ಮಕ್ಕಳ ಒತ್ತಾಯಕ್ಕೆ ಮಣಿದು ವಾಹನ ಕೊಳ್ಳಲಿದ್ದೀರಿ. ಖಾಸಗಿ ನೌಕರಿ ಮಾಡುವವರಿಗೆ ಕೊಂಚ ಹಿನ್ನಡೆಯಿದೆ. ಮಕ್ಕಳ ನಡವಳಿಕೆಯಲ್ಲಿ ವ್ಯತ್ಯಾಸ ಕಂಡುಬರಲಿದೆ. ಅಹಂಕಾರ ಒಳ್ಳೆಯದಲ್ಲ.

ವೃಶ್ಚಿಕ : ಬೇರೆಯವರು ನಿಮ್ಮ ಮುಗ್ದತೆಯ ಲಾಭ ಪಡೆಯವ ಸಾಧ್ಯತೆ ಇದೆ. ಆಸ್ತಿ ವಿಚಾರದಲ್ಲಿ ಅಣ್ಣ – ತಮ್ಮಂದಿರ ನಡುವೆ ಸಂಘರ್ಷ ಉಂಟಾಗಬಹುದು. ಅಗ್ನಿಯಿಂದ ಅಂತರ ಕಾಪಾಡಿ. ಬಂಡವಾಳ ಹೂಡಬೇಡಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಮನೆಯಲ್ಲಿ ತಯಾರಿಸಿದ ಆಹಾರವನ್ನೇ ಸೇವನೆ ಮಾಡಿ.

ಧನು : ದುರಂಹಕಾರಿ ಎಂಬ ಪಟ್ಟ ನಿಮಗೆ ಸಿಗಲಿದೆ. ಹೊಂದಾಣಿಕೆ ಮಾಡಿಕೊಂಡಷ್ಟೂ ಕುಟುಂಬದಲ್ಲಿ ನೆಮ್ಮದಿ ನೆಲೆಸಲಿದೆ. ಸಂಚಾರ ಅತಿಯಾದ ಪರಿಣಾಮ ಧನವ್ಯಯವಾಗಲಿದೆ. ಸಂಗಾತಿಯಿಂದ ಉತ್ತಮ ಉಡುಗೊರೆ ಸಿಗಲಿದೆ.

ಮಕರ : ಆಸ್ತಿ ವಿಚಾರದಲ್ಲಿ ಸಹೋದರರಲ್ಲಿ ಭಿನ್ನಾಭಿಪ್ರಾಯ ಕಂಡುಬರಲಿದೆ. ಸಾಂಸಾರಿಕ ಜೀವನದಲ್ಲಿ ನೆಮ್ಮದಿ ಇರಲಿದೆ. ವೈಯಕ್ತಿಕ ಸಮಸ್ಯೆಗಳನ್ನ ಸಮಾಧಾನದಿಂದ ಎದುರಿಸಿ. ಅಗ್ನಿಯಿಂದ ದೂರವಿರಿ. ಹಿಡಿದ ಕೆಲಸವನ್ನ ಅರ್ಧಕ್ಕೆ ನಿಲ್ಲಿಸುವ ಅಭ್ಯಾಸವನ್ನ ಬಿಡಿ.

ಕುಂಭ : ಅನಾವಶ್ಯಕ ಋಣಾತ್ಮಕ ಚಿಂತನೆ ಬೇಡ. ಕಾರ್ಯಕ್ಷೇತ್ರಗಳಲ್ಲಿ ವಿರೋಧಿಗಳ ಕಾಟ ಹೆಚ್ಚಲಿದೆ. ಕೌಟುಂಬಿಕ ಜೀವನದಲ್ಲಿ ಹಂತಹಂತವಾಗಿ ನೆಮ್ಮದಿ ಸಿಗಲಿದೆ. ರಾಜಕೀಯ ವ್ಯಕ್ತಿಗಳಿಗೆ ದುರಂಹಕಾರಿ ಎಂಬ ಪಟ್ಟ ಸಿಗಬಹುದು. ಉದ್ಯೋಗಕ್ಕೆ ಅರಸುತ್ತಿರುವವರಿಗೆ ಅವಕಾಶ ಹುಡುಕಿಕೊಂಡು ಬರಲಿದೆ.

ಮೀನ : ಅಂದುಕೊಂಡ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸಲಿದ್ದೀರಿ. ಕಲಾವಿದರಿಗೆ ಇಂದು ಹೊಸ ಅವಕಾಶಗಳು ಹುಡುಕಿಕೊಂಡು ಬರಲಿದೆ. ಸ್ತ್ರೀಯರ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಆದಷ್ಟು ಜಾಗೃತೆ ಇರಲಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...