alex Certify ಈ ರಾಶಿಯವರಿಗೆ ಕಾದಿದೆ ಇಂದು ಶುಭ ವಾರ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಕಾದಿದೆ ಇಂದು ಶುಭ ವಾರ್ತೆ

ಮೇಷ : ಇಂದು ನಿಮ್ಮ ಕೌಟುಂಬಿಕ ಪರಿಸ್ಥಿತಿ ಉತ್ತಮವಾಗಿ ಇರಲಿದೆ. ಸಂಗಾತಿಯ ಮೇಲೆ ಬೇಸರ ಮೂಡುವಂತಹ ಘಟನೆಯೊಂದು ನಡೆಯಲಿದೆ. ಮಕ್ಕಳ ಆರೋಗ್ಯದ ಕಡೆಗೆ ಗಮನ ಹರಿಸಿ. ಆಲಸ್ಯವನ್ನು ನಿಯಂತ್ರಿಸಿ.

ವೃಷಭ : ನಿಮ್ಮ ಬಹಳ ವರ್ಷಗಳ ಕಾಯುವಿಕೆಗೆ ಇಂದು ಉತ್ತರ ಸಿಗಲಿದೆ. ಅಂದುಕೊಂಡಿದ್ದನ್ನು ಸಾಧಿಸಿದ ಖುಷಿಯಲ್ಲಿ ತೇಲಲಿದ್ದೀರಿ. ದುರಹಂಕಾರವನ್ನು ನೀವು ಕಡಿಮೆ ಮಾಡಲೇಬೇಕು. ಧಾರ್ಮಿಕ ಕಾರ್ಯ ನಡೆಯಲಿದೆ.

ಮಿಥುನ : ಚಿಕ್ಕ ಚಿಕ್ಕದಕ್ಕೂ ಕೋಪ ಮಾಡಿಕೊಳ್ಳುವುದನ್ನು ನಿಯಂತ್ರಿಸಿ. ಇಲ್ಲವಾದಲ್ಲಿ ಸಾರ್ವಜನಿಕ ಜೀವನದಲ್ಲಿ ನೀವು ಹೊಂದಿಕೊಂಡು ಹೋಗಲು ಸಾಧ್ಯವಿಲ್ಲ. ನೀವು ಅಭಿವೃದ್ಧಿ ಕಾಣಬೇಕು ಅಂದರೆ ಆಲಸ್ಯವನ್ನು ದೂರ ಮಾಡಲೇಬೇಕು.

ಕಟಕ : ನಿಮ್ಮ ಆರ್ಥಿಕ ಸಂಕಷ್ಟಗಳಿಗೆ ಸ್ನೇಹಿತರು ನೆರವಾಗಲಿದ್ದಾರೆ. ಇದರಿಂದ ನಿಮ್ಮ ತಲೆಯ ಮೇಲಿರುವ ಬಹುದೊಡ್ಡ ಭಾರವು ಇಳಿಯಲಿದೆ. ಧಾರ್ಮಿಕ ಕಾರ್ಯಗಳಿಗೆ ಹಣ ಖರ್ಚು ಮಾಡಲಿದ್ದೀರಿ. ಅಲಂಕಾರ ವಸ್ತುಗಳನ್ನು ಖರೀದಿಸುವಿರಿ.

ಸಿಂಹ : ಸಂಗಾತಿಯು ನಿಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಬಿಡುತ್ತಿಲ್ಲವೆಂದು ಕೊರಗಲಿದ್ದೀರಿ. ಇದೇ ನಿಮ್ಮ ದಾಂಪತ್ಯ ಜೀವನದಲ್ಲಿ ಅಂತರ ಉಂಟು ಮಾಡಬಹುದು. ಪೋಷಕರ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಕಂಕಣ ಭಾಗ್ಯವಿದೆ.

ಕನ್ಯಾ : ನಂಬಿಕೆ ಇದೆ ಎಂದ ಮಾತ್ರಕ್ಕೆ ಪ್ರಶ್ನಿಸಲೇಬಾರದು ಎಂದೇನಿಲ್ಲ. ನಿಮಗೆ ತಪ್ಪು ಎನಿಸಿದ್ದನ್ನು ಪ್ರಶ್ನೆ ಮಾಡುವ ಗುಣವನ್ನು ರೂಢಿಸಿಕೊಳ್ಳಿ. ಮಕ್ಕಳಿಂದ ಶುಭ ವಾರ್ತೆಯನ್ನು ಕೇಳಲಿದ್ದೀರಿ. ಅಲಂಕಾರಿಕ ವಸ್ತುಗಳ ಖರೀದಿಗೆ ಹಣ ವ್ಯಯಿಸಲಿದ್ದೀರಿ.

ತುಲಾ : ಕೊಟ್ಟ ಮಾತಿಗೆ ಕಟ್ಟು ಬಿದ್ದು ನಿಮ್ಮಿಷ್ಟಗಳನ್ನು ಬಲಿಕೊಡುವ ಪ್ರಸಂಗ ಎದುರಾದೀತು. ಇಂದು ಹಲ್ಲು ನೋವಿನ ಸಮಸ್ಯೆ ನಿಮ್ಮನ್ನು ಅತಿಯಾಗಿ ಭಾದಿಸಲಿದೆ. ಇಂದು ವಿದ್ಯಾರ್ಥಿಗಳಿಗೆ ಮಿಶ್ರ ಫಲ ದೊರಕಲಿದೆ.

ವೃಶ್ಚಿಕ : ಕಚೇರಿ ಕೆಲಸದ ನಿಮಿತ್ತ ನಿಮಗೆ ವಿದೇಶ ಪ್ರಯಾಣದ ಅವಕಾಶ ಎದುರಾಗಲಿದೆ. ಪೋಷಕರು ತೀರ್ಥಯಾತ್ರೆಗೆ ತೆರಳುವ ಬಗ್ಗೆ ಇಂದು ನಿಮ್ಮೊಡನೆ ಚರ್ಚಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ಶುಭ ಕಾದಿದೆ. ದೇವರನ್ನು ನಂಬಿ.

ಧನು : ಕೆಲವೊಂದು ಪ್ರಯಾಣ ನಿಮಗೆ ಉಪಯುಕ್ತ ಎಂದು ಸಾಬೀತಾಗಲಿದೆ. ಆರ್ಥಿಕ ಸಂಕಷ್ಟಗಳನ್ನು ನಿವಾರಿಸಲು ಹೊಸ ಮಾರ್ಗಗಳನ್ನು ಹುಡುಕಲಿದ್ದೀರಿ. ಉದ್ಯಮದಲ್ಲಿ ಲಾಭ ಕಾದಿದೆ. ಇದರಿಂದ ಸಂತೋಷಗೊಳಗಾಗುವಿರಿ.

ಮಕರ : ಲೌಕಿಕ ಜೀವನಕ್ಕಿಂತ ಆಧ್ಯಾತ್ಮ ಜೀವನದ ಕಡೆ ನಿಮ್ಮ ಮನಸ್ಸು ವಾಲಲಿದೆ. ಆಸೆ ಈಡೇರಿಸದ ಹಿನ್ನೆಲೆಯಲ್ಲಿ ನಿಮ್ಮ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಊಹಾಪೋಹಗಳನ್ನು ನಂಬಬೇಡಿ.

ಕುಂಭ : ಇಂದು ನೀವು ಕಚೇರಿಯನ್ನು ಬದಲಾಯಿಸುತ್ತಿದ್ದೀರಿ. ಇದರಿಂದ ನಿಮಗೆ ಮುಂದಿನ ದಿನಗಳಲ್ಲಿ ಒಳಿತೇ ಆಗಲಿದೆ. ವೈವಾಹಿಕ ಜೀವನವು ಆಹ್ಲಾದಕರವಾಗಿ ಇರಲಿದೆ. ವಿದ್ಯಾರ್ಥಿಗಳಿಗೆ ಲಾಭ ಕಾದಿದೆ. ಶಿಕ್ಷಕರಿಗೆ ಉತ್ತಮ ಅವಕಾಶವಿದೆ.

ಮೀನ : ಸಂಬಳ ಪಡೆಯುವ ಜನರು ಇಂದು ಒಳ್ಳೆಯ ಸುದ್ದಿಯನ್ನು ಕೇಳಲಿದ್ದೀರಿ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಆದರೆ ಚಿಂತೆಬೇಡ . ಮನೆ ಮದ್ದಿನ ಮೂಲಕವೇ ಹುಷಾರಾಗುತ್ತಾರೆ. ಹೊಸ ಆದಾಯದ ಮೂಲವನ್ನು ಹುಡುಕಿಕೊಳ್ಳಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...