alex Certify ಈ ರಾಶಿಯವರಿಗೆ ಇದೆ ಇಂದು ವ್ಯಾಪಾರದಲ್ಲಿ ಧನ ಲಾಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಇದೆ ಇಂದು ವ್ಯಾಪಾರದಲ್ಲಿ ಧನ ಲಾಭ

ಮೇಷ : ಪೋಷಕರು ನಿಮ್ಮ ಮೇಲೆ ಬೇಸರ ಉಂಟು ಮಾಡಿಕೊಳ್ಳುವಂತಹ ಘಟನೆಯೊಂದು ಜರುಗಲಿದೆ. ಹಣಕಾಸಿನ ವಿಚಾರದಲ್ಲಿ ಸಹೋದರರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ.

ವೃಷಭ : ಭೂಮಿ ಖರೀದಿ ಮಾಡಬೇಕು ಎಂದುಕೊಂಡವರಿಗೆ ಈ ದಿನ ಶುಭವಾಗಿದೆ. ಮನೆಯಲ್ಲಿ ಇಂದು ಚಿನ್ನಾಭರಣ ಖರೀದಿ ಮಾಡಲಿದ್ದೀರಿ. ವೈವಾಹಿಕ ಸಂಬಂಧಕ್ಕೆಂದು ಅರಸುತ್ತಿರುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.

ಮಿಥುನ : ಮನೆಯ ಕಿರಿಯ ಸದಸ್ಯರು ಇಡೀ ಕುಟುಂಬವೇ ಹೆಮ್ಮೆ ಪಡುವಂತಹ ಸಾಧನೆಯನ್ನು ಮಾಡಲಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ನೀವು ಇಂದು ಇನ್ನಷ್ಟು ಬಳಲಲಿದ್ದೀರಿ. ಆಸ್ಪತ್ರೆಗೂ ಮನೆಗೂ ಅಲೆದಾಟ ತಪ್ಪಿದ್ದಲ್ಲ.

ಕಟಕ : ವ್ಯಾಪಾರದಲ್ಲಿ ನಿಮಗೆ ಧನಲಾಭ ಕಾದಿದೆ. ಕಷ್ಟದ ಸಂದರ್ಭದಲ್ಲಿ ನಿಮಗೆ ಸ್ನೇಹಿತರ ನಿಜಬಣ್ಣ ತಿಳಿಯಲಿದೆ. ಮೇಲಾಧಿಕಾರಿಗಳು ನಿಮಗೆ ನೋವುಂಟಾಗುವಂತೆ ವರ್ತಿಸಲಿದ್ದಾರೆ. ಕಚೇರಿಯಲ್ಲಿ ಹಿತಶತ್ರುಗಳ ಕಾಟ ತಪ್ಪಿದ್ದಲ್ಲ.

ಸಿಂಹ : ಕಚೇರಿಯಲ್ಲಿ ನಿಮಗಿಂತ ಕೆಳದರ್ಜೆಯವರ ಮೇಲೆ ದರ್ಪ ತೋರಬೇಡಿ. ಇದರಿಂದ ನಿಮಗೆ ಒಳಿತಾಗುವುದಿಲ್ಲ. ಸರ್ಕಾರಿ ನೌಕರರು ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡಲಿದ್ದಾರೆ. ಮಕ್ಕಳ ಓದಿನಲ್ಲಿ ಪ್ರಗತಿಯಿದೆ.

ಕನ್ಯಾ: ಅಂದುಕೊಂಡ ಕಾರ್ಯಗಳಲ್ಲಿ ವಿಳಂಬವಾಗಲಿದೆ. ಕೃಷಿಕರಿಗೆ ಈ ದಿನ ಅಷ್ಟೇನು ಯೋಗ್ಯವಾಗಿಲ್ಲ. ಕಲಾವಿದರಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ. ಶತ್ರುಗಳಿಂದ ಕಾಟ ತಪ್ಪಿದ್ದಲ್ಲ. ದಾಯಾದಿ ಕಲಹ ಮುಂದುವರಿಯಲಿದೆ.

ತುಲಾ : ವಿದ್ಯಾರ್ಥಿಗಳು ಗುರಿಯ ವಿಚಾರದಲ್ಲಿ ಗೊಂದಲಕ್ಕೀಡಾಗುವಂತ ಪ್ರಸಂಗವೊಂದು ಎದುರಾಗಲಿದೆ. ಈ ಸಂಧರ್ಭದಲ್ಲಿ ನಿಮ್ಮ ಪೋಷಕರು ನಿರ್ಣಾಯಕ ಸ್ಥಾನದಲ್ಲಿ ನಿಂತು ನಿಮಗೆ ಮಾರ್ಗದರ್ಶನ ನೀಡುವರು. ಪರರಿಂದ ನಿಮಗೆ ಧನ ಸಹಾಯವಾಗಲಿದೆ.

ವೃಶ್ಚಿಕ : ವಿದ್ಯಾರ್ಥಿಗಳು ಅಂದುಕೊಂಡ ಗುರಿಯನ್ನು ಸಾಧಿಸಲಿದ್ದಾರೆ. ಮೆಡಿಕಲ್​ ನಡೆಸುತ್ತಿರುವವರಿಗೆ ಇಂದು ಅಭೂತಪೂರ್ವ ಲಾಭ ಕಾದಿದೆ. ರಫ್ತು ಮಾರಾಟಗಾರರೂ ಸಹ ನಿರೀಕ್ಷಿತ ಲಾಭ ಹೊಂದುವವರು. ಮನೆ ನಿರ್ಮಾಣ ಕಾರ್ಯದ ಬಗ್ಗೆ ಯೋಚಿಸಲಿದ್ದೀರಿ.

ಧನು : ಕಚೇರಿ ಕೆಲಸ ಮಾತ್ರವಲ್ಲದೇ ವೈಯಕ್ತಿಕ ಜೀವನದ ಕಡೆಯೂ ನೀವು ಗಮನ ಹರಿಸಬೇಕಿದೆ. ವ್ಯಾಪಾರದಲ್ಲಿ ಚೇತರಿಕೆ ಕಾಣಲಿದೆ. ಸಂಬಂಧಿಗಳು ನಿಮಗೆ ಸಹಾಯ ಮಾಡಲಿದ್ದಾರೆ. ಹೊಸ ಪ್ರಯತ್ನಗಳಿಗೆ ಸಂಗಾತಿಯ ಬೆಂಬಲ ಇರಲಿದೆ.

ಮಕರ : ಜಾಗ ಖರೀದಿ ವಿಚಾರದಲ್ಲಿ ಲಾಭ ಗಳಿಸಲಿದ್ದೀರಿ. ವೈವಾಹಿಕ ಸಂಬಂಧವೊಂದು ನಿಮ್ಮನ್ನು ಅರಸಿ ಬರಲಿದೆ.

ಕುಂಭ : ಅಂದುಕೊಂಡ ಕಾರ್ಯಗಳಲ್ಲಿ ಅತಿಯಾದ ವಿಳಂಬ ಉಂಟಾಗಲಿದೆ. ಕುಟುಂಬಸ್ಥರ ಜೊತೆ ಸೇರಿ ತೀರ್ಥಯಾತ್ರೆಗೆ ತೆರಳುವಿರಿ. ಉದ್ಯಮದಲ್ಲಿ ಶತ್ರುಬಾಧೆ ತಪ್ಪಿದ್ದಲ್ಲ. ದಾಂಪತ್ಯದಲ್ಲಿ ವಿರಸ ಇರಲಿದೆ.

ಮೀನ : ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳವು ದಶಕಗಳ ಗೆಳೆತನವನ್ನು ಹಾಳು ಮಾಡಬಹುದು. ಮಾತಿನಲ್ಲಿ ಎಚ್ಚರಿಕೆ ಇರಲಿ. ಆಪ್ತರಿಂದ ನಿಮ್ಮ ಕಷ್ಟಕ್ಕೆ ಸಹಾಯವಾಗಲಿದೆ. ದೂರ ಪ್ರಯಾಣ ಮಾಡಲಿದ್ದೀರಿ. ಷೇರು ವ್ಯವಹಾರಗಳಲ್ಲಿ ಲಾಭವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...