alex Certify ಈ ರಾಶಿಯವರಿಗೆ ಇದೆ ಇಂದು ಒಳ್ಳೆಯ ಯೋಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಇದೆ ಇಂದು ಒಳ್ಳೆಯ ಯೋಗ

ಮೇಷ : ನಿಮ್ಮ ಹಣಕಾಸಿನ ಸ್ಥಿತಿಯು ಇಂದು ಉತ್ತಮವಾಗಿ ಇರಲಿದೆ. ಮನೆಯಲ್ಲಿ ಮನಸ್ಸಿಗೆ ನೋವುಂಟಾಗುವ ಘಟನೆಗಳು ಜರುಗಲಿದೆ. ತಾಯಿಯ ಚುಚ್ಚು ಮಾತುಗಳು ನಿಮಗೆ ಕಿರಿಕಿರಿ ತರಿಸಬಹುದು.

ಎಲ್ಲಾ ಸಂದರ್ಭದಲ್ಲಿಯೂ ತಾಳ್ಮೆ ಕಾಯ್ದುಕೊಳ್ಳಿ.

ವೃಷಭ : ಎಲ್ಲಾ ಮಾತಿಗೂ ಪ್ರತ್ಯುತ್ತರ ನೀಡಬೇಕೆಂದು ಇಲ್ಲ. ಕೆಲವೊಬ್ಬರಿಗೆ ನಿಮ್ಮ ಮೌನವೇ ಉತ್ತಮ ಪ್ರತಿಕ್ರಿಯೆ ಆಗಿದೆ. ಉದ್ಯಮದಲ್ಲಿ ಇರುವವರು ವಿದೇಶಿ ಮೂಲದಿಂದ ಲಾಭ ಸಂಪಾದಿಸಲಿದ್ದೀರಿ. ವೈದ್ಯರಿಗೂ ಈ ದಿನ ಲಾಭದಾಯಕವಾಗಿದೆ.

ಮಿಥುನ : ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಲಾಭವನ್ನೇ ಕಾಣುವ ನೀವು ಸಂಜೆ ವೇಳೆಗೆ ನಷ್ಟ ಅನುಭವಿಸಲಿದ್ದೀರಿ. ವಿದೇಶಿ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಲಾಭವಿದೆ. ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ.

ಕಟಕ : ಈ ದಿನದ ಆರಂಭ ನಿಮ್ಮ ಪಾಲಿಗೆ ಉತ್ತಮವಾಗಿ ಇರಲಿದೆ. ನಿಮಗಿಂತ ಕೆಳದರ್ಜೆಯ ಉದ್ಯೋಗಿಗಳ ಮೇಲೆ ದರ್ಪ ಬೇಡ. ವ್ಯಾಪಾರಸ್ಥರು ಅನಿರೀಕ್ಷಿತ ಲಾಭ ಸಂಪಾದಿಸಲಿದ್ದಾರೆ. ಯಾವುದೇ ಕಾರಣಕ್ಕೂ ದುಡುಕಿ ನಿರ್ಧಾರ ಕೈಗೊಳ್ಳಬೇಡಿ.

ಸಿಂಹ : ಉದ್ಯೋಗಕ್ಕಾಗಿ ಬಹಳ ದಿನಗಳಿಂದ ಅರಸುತ್ತಿದ್ದವರಿಗೆ ಇಂದು ಹೊಸ ಅವಕಾಶಗಳು ಹುಡುಕಿಕೊಂಡು ಬರಲಿದೆ. ಸಾರ್ವಜನಿಕ ಜೀವನದಲ್ಲಿ ನಿಮ್ಮ ಗೌರವ ಹೆಚ್ಚಲಿದೆ. ಹೂಡಿಕೆ ಮಾಡುವ ವಿಚಾರದಲ್ಲಿ ಹೆಚ್ಚು ಜಾಗರೂಕತೆಯಿಂದ ಇರಿ.

ಕನ್ಯಾ: ಕುಟುಂಬದಲ್ಲಿ ಶುಭ ವಾರ್ತೆಯೊಂದನ್ನು ಕೇಳಲಿದ್ದೀರಿ. ಒಡಹುಟ್ಟಿದವರ ಜೊತೆ ಸಂಬಂಧ ಸುಧಾರಿಸಲಿದೆ. ವಿದ್ಯಾರ್ಥಿಗಳಿಗೆ ಅಂದುಕೊಂಡ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಹೊಸ ಯೋಜನೆಗಳಿಗೆ ಹೂಡಿಕೆ ಮಾಡಲಿದ್ದೀರಿ.

ತುಲಾ: ಭೂಮಿ ಖರೀದಿ ಮಾಡಬೇಕು ಎಂದುಕೊಂಡವರಿಗೆ ಈ ದಿನ ಶುಭವಾಗಿದೆ. ವೈವಾಹಿಕ ಜೀವನದಲ್ಲಿ ಸಂಬಂಧ ಸುಧಾರಿಸಲಿದೆ. ಅಂದುಕೊಂಡ ಕೆಲಸ ಪೂರ್ಣಗೊಳಿಸಲಿದ್ದೀರಿ.

ವೃಶ್ಚಿಕ: ಕಚೇರಿಯಲ್ಲಿ ನೀಡಿದ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲರಾಗಲಿದ್ದೀರಿ. ಇದು ನಿಮ್ಮ ವೃತ್ತಿಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹೆಸರು ಬೇಳೆಯನ್ನು ದಾನ ಮಾಡಿ.

ಧನು: ಮಾನಸಿಕವಾಗಿ ನೀವು ಕುಗ್ಗಿ ಹೋಗುವಂತ ಘಟನೆಯೊಂದು ಜರುಗಲಿದೆ. ಲೇವಾದೇವಿ ವ್ಯವಹಾರದಲ್ಲಿ ನಿಮಗೆ ಲಾಭ ಕಾದಿದೆ. ಮನೆಯಲ್ಲಿ ಚಿನ್ನಾಭರಣ ಖರೀದಿ ಮಾಡಲಿದ್ದಾರೆ. ಮನೆಯ ಕಿರಿಯ ಸದಸ್ಯರು ಸಾಧನೆ ಮಾಡಲಿದ್ದಾರೆ.

ಮಕರ: ಧನಾಗಮನವಾಗಲಿದೆ, ಸಹೋದ್ಯೋಗಿಗಳು ನಿಮ್ಮ ಜೊತೆ ಅತ್ಯಂತ ಪ್ರೀತಿ ಹಾಗೂ ವಿಶ್ವಾಸದಿಂದ ಇರಲಿದ್ದಾರೆ. ಆಧ್ಯಾತ್ಮಿಕ ಕ್ಷೇತ್ರದತ್ತ ನಿಮ್ಮ ಮನಸ್ಸು ವಾಲಲಿದೆ. ತಂದೆಯೊಂದಿಗೆ ನಿಮ್ಮ ಸಂಬಂಧ ಸುಧಾರಿಸಲಿದೆ.

ಕುಂಭ: ನಿಮ್ಮ ಮನಸ್ಸಿನಲ್ಲಿರುವ ನೋವನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಲಿದ್ದೀರಿ. ಇದರಿಂದ ನಿಮಗೆ ನಿರಾಳ ಎನಿಸಲಿದೆ. ಸಾಲಗಾರರಿಂದ ಕಿರಿಕಿರಿ ಅನುಭವಿಸಲಿದ್ದೀರಿ. ತಂದೆಯು ನಿರ್ಣಾಯಕ ಪಾತ್ರವನ್ನು ವಹಿಸಲಿದ್ದಾರೆ.

ಮೀನ: ನಿಮ್ಮ ಆರೋಗ್ಯದ ಬಗ್ಗೆ ನೀವು ಕಾಳಜಿ ವಹಿಸಲೇಬೇಕು. ಹೊರಗಡೆ ಆಹಾರವನ್ನು ಸೇವನೆ ಮಾಡಬೇಡಿ. ಭೂ ವ್ಯವಹಾರದಲ್ಲಿ ಮೋಸ ಹೋಗುವ ಸಾಧ್ಯತೆ ಇದೆ. ಸಂಗೀತಗಾರರಿಗೆ ಒಳ್ಳೆಯ ಯೋಗವಿದೆ. ವ್ಯಾಪಾರಸ್ಥರಿಗೆ ಲಾಭವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...