alex Certify ಈ ರಾಶಿಯವರಿಗೆ ಇದೆ ಇಂದು ಎಲ್ಲಾ ಕರ್ಯಗಳಲ್ಲೂ ಯಶಸ್ಸು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಇದೆ ಇಂದು ಎಲ್ಲಾ ಕರ್ಯಗಳಲ್ಲೂ ಯಶಸ್ಸು

ಮೇಷ : ಇಂದು ನೀವು ಮಾನಸಿಕವಾಗಿ ಇನ್ನಷ್ಟು ಸದೃಢವಾಗರಲಿದ್ದೀರಿ. ದಾಂಪತ್ಯ ಜೀವನದಲ್ಲಿ ವಿರಸಗಳೆಲ್ಲವೂ ದೂರಾಗಲಿದೆ. ಆಧ್ಯಾತ್ಮದತ್ತ ನಿಮ್ಮ ಮನಸ್ಸು ವಾಲಬಹುದು. ಹಳೆಯ ಕಹಿ ಘಟನೆಯೊಂದು ನಿಮ್ಮನ್ನು ಮತ್ತೆ ಮತ್ತೆ ಕಾಡಲಿದೆ.

ವೃಷಭ : ಅಂದುಕೊಂಡ ಕಾರ್ಯಗಳಲ್ಲಿ ಇಂದು ನೀವು ಯಶಸ್ಸನ್ನು ಸಾಧಿಸುವಿರಿ. ಇದರಿಂದ ನಿಮ್ಮ ಮನಸ್ಸಿಗೆ ಅತ್ಯಂತ ಸಂತೋಷವಾಗಲಿದೆ. ನಿಮ್ಮ ಆರೋಗ್ಯವು ಉತ್ತಮವಾಗಿ ಇರಲಿದೆ. ಸುಲಭವಾಗಿ ಜೀರ್ಣವಾಗುವ ಆಹಾರವನ್ನೇ ಹೆಚ್ಚು ಸೇವಿಸಿ.

ಮಿಥುನ : ಮಕ್ಕಳು ಓದಿನತ್ತ ಕಡಿಮೆ ಗಮನ ಹರಿಸಲಿದ್ದಾರೆ. ಇದರಿಂದ ಪೋಷಕರಾಗಿ ನೀವು ಅತ್ಯಂತ ಚಿಂತೆಗೆ ಒಳಗಾಗಲಿದ್ದೀರಿ. ಹಣಕಾಸಿನ ವಿಚಾರವಾಗಿ ಸ್ನೇಹಿತರ ಜೊತೆಯಲ್ಲಿ ವೈಮನಸ್ಯ ಮೂಡಬಹುದು. ಹಸುವಿಗೆ ಆಹಾರವನ್ನು ಅರ್ಪಿಸಿ.

ಕಟಕ : ಕುಟುಂಬಸ್ಥರ ಜೊತೆ ಸೇರಿ ಧಾರ್ಮಿಕ ಚಟುವಟಿಕೆಗಳನ್ನು ಮಾಡಲಿದ್ದೀರಿ. ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ವಿದೇಶ ಪ್ರಯಾಣ ಕೈಗೊಳ್ಳಲಿದ್ದಾರೆ. ವೈದ್ಯಕೀಯ ವೃತ್ತಿಯಲ್ಲಿ ಇರುವವರಿಗೆ ಇಂದು ಲಾಭ ಕಾದಿದೆ.

ಸಿಂಹ : ಕಲಾವಿದರಿಗೆ ಇಂದು ಹೊಸ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿದೆ. ಸ್ತ್ರೀಯರಿಗೆ ಇಂದು ಅನಿರೀಕ್ಷಿತ ಮೂಲಗಳಿಂದ ಹಣ ಹರಿದು ಬರಲಿದೆ. ಇಂದು ನೀವು ದೊಡ್ಡ ಚಿಂತೆಯಿಂದ ಹೊರಬರಲಿದ್ದೀರಿ.

ಕನ್ಯಾ : ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಇದರಿಂದ ನೀವು ಧೈರ್ಯ ಕಳೆದುಕೊಳ್ಳಲಿದ್ದೀರಿ. ಆದರೆ ಸಂಜೆಯ ವೇಳೆಗೆ ಎಲ್ಲವೂ ಸರಿಯಾಗಲಿದೆ. ಮಕ್ಕಳಿಗೆ ವೈವಾಹಿಕ ಸಂಬಂಧ ಕೂಡಿ ಬರಲಿದೆ. ತಂದೆಯು ನಿಮಗೆ ಮಾರ್ಗದರ್ಶನ ನೀಡುವರು.

ತುಲಾ : ಕಷ್ಟದ ಸಂದರ್ಭದಲ್ಲಿ ಪತ್ನಿ ಮನೆ ಕಡೆಯಿಂದ ಬಂದ ಆಸ್ತಿಯು ಸಹಾಯ ಮಾಡಲಿದೆ. ತಂದೆಯ ಆರೋಗ್ಯದಲ್ಲಿ ಗಮನಾರ್ಹವಾದ ಸುಧಾರಣೆ ಕಂಡು ಬರಲಿದೆ. ಕುಟುಂಬಸ್ಥರ ಜೊತೆ ಧಾರ್ಮಿಕ ಕ್ಷೇತ್ರಗಳಿಗೆ ಪ್ರಯಾಣ ಬೆಳಸುವಿರಿ.

ವೃಶ್ಚಿಕ : ಮನೆಯ ಪೀಠೋಪಕರಣಗಳ ಖರೀದಿಗೆ ಇಂದು ಹೆಚ್ಚಿನ ಖರ್ಚು ಮಾಡಬೇಕಾಗಿ ಬರಬಹುದು. ಸಾರ್ವಜನಿಕ ಜೀವನದಲ್ಲಿ ಮಾತನಾಡುವಾಗ ನಾಲಗೆ ಮೇಲೆ ಹಿಡಿತವಿರಲಿ. ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರಬಲ್ಲ ಮಾತು ಸಲ್ಲದು.

ಧನು : ಸಾಲಗಾರರ ಕಾಟದಿಂದ ಇಂದು ನೀವು ಮುಕ್ತಿ ಪಡೆಯಲಿದ್ದೀರಿ. ಬೆಳಗ್ಗೆ ನಿಮ್ಮ ವ್ಯಾಪಾರದಲ್ಲಿ ಉತ್ತಮ ಬೆಳವಣಿಗೆ ಇರಲಿದೆ. ಆದರೆ ಸಂಜೆ ವೇಳೆಗೆ ನಷ್ಟ ಉಂಟಾಗಲಿದೆ. ಮನೆ ನವೀಕರಣ ಕಾರ್ಯ ಕೈಗೊಳ್ಳುವಿರಿ.

ಮಕರ : ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡಬೇಕಾಗಿ ಬರಬಹುದು. ಇದರಿಂದ ನೀವು ಅತಿಯಾಗಿ ದಣಿಯಲಿದ್ದೀರಿ. ಆದಷ್ಟು ಅಗ್ನಿಯಿಂದ ಅಂತರ ಕಾಯ್ದುಕೊಳ್ಳಿ. ಕಣ್ಣಿನ ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ. ಸಂಗಾತಿಗೆ ಹೆಚ್ಚಿನ ಸಮಯ ಮೀಸಲಿಡಿ.

ಕುಂಭ : ಬಹಳ ದಿನಗಳ ಬಳಿಕ ಇಂದು ನೀವು ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಈ ವೇಳೆ ನಿಮಗೆ ಹೊಸ ಸ್ನೇಹಿತರೂ ಸಹ ಸಿಗಲಿದ್ದಾರೆ. ವೈದ್ಯಕೀಯ ರಂಗದಲ್ಲಿ ಇರುವವರಿಗೆ ಇದು ಮಹತ್ವದ ದಿನ. ಹಣ್ಣಿನ ವ್ಯಾಪಾರಿಗಳಿಗೆ ಲಾಭವಿದೆ.

ಮೀನ : ಭೂ ವ್ಯಾಜ್ಯದಿಂದ ಮುಕ್ತಿಯನ್ನು ಸಾಧಿಸಲು ಇಂದು ನೀವು ಪ್ರಭಾವಿ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ. ಇದರಿಂದ ನಿಮ್ಮ ಸಮಸ್ಯೆಗಳು ದೂರಾಗಲಿದೆ. ಸಂಗಾತಿಯು ನಿಮಗೆ ದುಬಾರಿ ಉಡುಗೊರೆ ನೀಡಲಿದ್ದಾರೆ. ಮಕ್ಕಳು ಓದಿನ ಮೇಲೆ ಗಮನ ಹರಿಸಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...