alex Certify ಈ ರಾಶಿಯವರಿಗೆ ಇಂದು ಶುಭ ಕಾರ್ಯ ಆರಂಭಕ್ಕೆ ಸಮಯ ಅನುಕೂಲಕರವಾಗಿದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಇಂದು ಶುಭ ಕಾರ್ಯ ಆರಂಭಕ್ಕೆ ಸಮಯ ಅನುಕೂಲಕರವಾಗಿದೆ

 

ಮೇಷ : ಇಂದು ನಿಮ್ಮ ತಾಯಿಯ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ. ಇದು ನಿಮ್ಮ ಮನೆಯಲ್ಲಿ ನೆಮ್ಮದಿಯನ್ನು ಹಾಳು ಮಾಡಬಹುದು. ವಿದ್ಯಾರ್ಥಿಗಳಿಗೆ ಈ ದಿನ ಅನುಕೂಲಕಾರಿಯಾಗಿದೆ. ಖರ್ಚಿನ ಮಿತಿಯರಿಲಿ.

ವೃಷಭ : ಮನಸ್ಸು ಮತ್ತು ದೇಹಕ್ಕೆ ಸ್ಪೂರ್ತಿಯ ಕೊರತೆಯಿಲ್ಲ. ಮನೆಯಲ್ಲಿ ಸಂತಸದ ವಾತಾವರಣವಿರುತ್ತದೆ. ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಮಿತ್ರರಿಂದ ಲಾಭವಿದೆ. ಶುಭ ಕಾರ್ಯ ಆರಂಭಕ್ಕೆ ಸಮಯ ಅನುಕೂಲಕರವಾಗಿದೆ.

ಮಿಥುನ : ಕುಟುಂಬ ಸದಸ್ಯರೊಂದಿಗೆ ಸುಖ-ಶಾಂತಿಯಿಂದ ಸಮಯ ಕಳೆಯಲಿದ್ದೀರಿ. ಸ್ತ್ರೀ ಮಿತ್ರರಿಂದ ವಿಶೇಷ ಲಾಭವಾಗಲಿದೆ. ನಿಮ್ಮ ಪ್ರಭಾವಿ ಮಾತುಗಳಿಂದ ಇತರರ ಗಮನ ಸೆಳೆಯಲಿದ್ದೀರಿ.

ಕರ್ಕ : ನಿಮ್ಮ ಮಾತಿನ ಚಮತ್ಕಾರದಿಂದ ಲಾಭವಾಗಲಿದೆ. ಹೊಸ ಸಂಬಂಧಗಳು ಬೆಸೆಯಲಿವೆ. ಶುಭ ಕಾರ್ಯಕ್ಕೆ ಪ್ರೇರಣೆ ಸಿಗಲಿದೆ. ಸಾಹಿತ್ಯ ಕ್ಷೇತ್ರದ ಬಗ್ಗೆ ಆಸಕ್ತಿ ಹೆಚ್ಚಲಿದೆ. ಆದ್ರೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದಿಲ್ಲ.

ಸಿಂಹ : ಮನಸ್ಸು ಗೊಂದಲಮಯವಾಗಿರುತ್ತದೆ, ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅಧಿಕ ಭಾವುಕತೆ ನಿಮ್ಮನ್ನು ದುರ್ಬಲರನ್ನಾಗಿಸುತ್ತದೆ. ಪ್ರವಾಸ ಮುಂದೂಡುವುದು ಸೂಕ್ತ.

ಕನ್ಯಾ : ದೀರ್ಘಾವಧಿ ಆರ್ಥಿಕ ಯೋಜನೆಗೆ ಸಮಯ ಅನುಕೂಲಕರವಾಗಿದೆ. ಇಂದು ಲಾಭದಾಯಕ ದಿನ. ದೇಹ ಮತ್ತು ಮನಸ್ಸು ಉಲ್ಲಾಸದಿಂದಿರುತ್ತದೆ. ಮಿತ್ರರು ಮತ್ತು ಸಂಬಂಧಿಕರಿಂದ ಭೋಜನ ದೊರೆಯಲಿದೆ.

ತುಲಾ : ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭವಾಗಲಿದೆ. ಸ್ನೇಹಿತರ ಭೇಟಿ, ಪ್ರವಾಸದ ಆಯೋಜನೆ ಮಾಡಲಿದ್ದೀರಿ. ವಿವಾಹ ಉತ್ಸುಕರಿಗೆ ಮದುವೆ ಯೋಗವಿದೆ. ಪುತ್ರ ಮತ್ತು ಪತ್ನಿಯಿಂದ ಲಾಭವಾಗಲಿದೆ.

ವೃಶ್ಚಿಕ : ಅನೈತಿಕ ಕೃತ್ಯಗಳಿಂದ ದೂರವಿರಿ. ಮಾತಿನ ಮೇಲೆ ಸಂಯಮವಿರಲಿ. ಮನೆಯಲ್ಲಿ ಘರ್ಷಣೆ ಉಂಟಾಗಬಹುದು. ಖರ್ಚು ಹೆಚ್ಚಾಗಲಿದೆ, ಇದರಿಂದ ಆರ್ಥಿಕ ಮುಗ್ಗಟ್ಟು ಎದುರಾಗಬಹುದು.

ಧನು : ಸಂಯಮ ಕಳೆದುಕೊಳ್ಳಬೇಡಿ. ಅನೈತಿಕ ಕಾರ್ಯಗಳಲ್ಲಿ ತೊಡಗಬೇಡಿ. ದುರ್ಘಟನೆಯಿಂದ ಬಚಾವ್ ಆಗಿ. ಮೋಜು ಮಸ್ತಿ, ಸುತ್ತಾಟಕ್ಕಾಗಿ ಹೆಚ್ಚು ಹಣ ಖರ್ಚಾಗಲಿದೆ.

ಮಕರ : ದೈನಿಕ ಕಾರ್ಯಗಳನ್ನು ಬದಿಗಿಟ್ಟು ಇಂದು ಸುತ್ತಾಡಲಿದ್ದೀರಿ. ಮನರಂಜನೆಗೆ ಸಮಯ ಮೀಸಲಾಗಿಡುತ್ತೀರಿ. ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಸಾಥ್ ಕೊಡಲಿದ್ದಾರೆ. ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ.

ಕುಂಭ : ಇಂದು ಲಾಭದಾಯಕ ದಿನ. ವೈಚಾರಿಕ ಸಮೃದ್ಧಿ ವೃದ್ಧಿಸಲಿದೆ. ಮೃದು ಮಾತುಗಳಿಂದ ಸೌಹಾರ್ದಯುತ ಸಂಬಂಧ ಸೃಷ್ಟಿಯಾಗಲಿದೆ. ಉತ್ತಮ ಭೋಜನ ಪ್ರಾಪ್ತವಾಗಲಿದೆ.

ಮೀನ : ಇವತ್ತು ನಿಮಗೆ ಮಿಶ್ರಫಲವಿದೆ. ಬೌದ್ಧಿಕ ಕಾರ್ಯಗಳಲ್ಲಿ ಹೊಸ ವಿಚಾರಗಳಿಂದ ಪ್ರಭಾವಿತರಾಗುತ್ತೀರಿ, ಅದನ್ನು ಅಳವಡಿಸಿಕೊಳ್ತೀರಿ. ಸೃಜನಾತ್ಮಕ ಶಕ್ತಿಯ ಪರಿಚಯವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...