alex Certify ಈ ರಾಶಿಯವರಿಗೆ ಇಂದು ಒಲಿಯಲಿದ್ದಾಳೆ ʼಲಕ್ಷ್ಮಿʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಇಂದು ಒಲಿಯಲಿದ್ದಾಳೆ ʼಲಕ್ಷ್ಮಿʼ

ಮೇಷ : ಕಚೇರಿಯಲ್ಲಿ ಗೊಂದಲದ ವಾತಾವರಣ ಕಾಡಲಿದೆ. ವಿದ್ಯಾರ್ಥಿಗಳು ಅಂದುಕೊಂಡ ಗುರಿಯನ್ನು ಸಾಧಿಸಲಿದ್ದಾರೆ. ವ್ಯಾಪಾರ – ವ್ಯವಹಾರಗಳಲ್ಲಿ ಲಾಭವಿದೆ. ಕುಟುಂಬದಲ್ಲಿ ಅಶಾಂತಿ ಇರಲಿದೆ. ಕುಲದೇವರನ್ನು ಪ್ರಾರ್ಥಿಸಿ.

ವೃಷಭ : ನಿಮ್ಮ ಮನಸ್ಸಿನಲ್ಲಿದ್ದ ಎಲ್ಲಾ ಕಳವಳಗಳು ದೂರಾಗಲಿವೆ. ನಿಮ್ಮ ಕೋಪದಿಂದ ಇತರರ ಮನಸ್ಸಿಗೆ ನೋವಾಗದಂತೆ ವರ್ತಿಸಿ. ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಕಡಿಮೆಯಾಗಬಹುದು.

ಮಿಥುನ : ಮಾನಸಿಕವಾಗಿ ಧೈರ್ಯ ಕಳೆದುಕೊಂಡ ನಿಮಗೆ ಸಂಗಾತಿಯು ಹೆಗಲಾಗಲಿದ್ದಾರೆ. ಇಂದು ನಿಮ್ಮ ಆರೋಗ್ಯದಲ್ಲಿ ವೈಪರಿತ್ಯ ಉಂಟಾಗಲಿದೆ. ಹೀಗಾಗಿ ಹೊರಗಿನ ಆಹಾರವನ್ನು ಸೇವನೆ ಮಾಡಬೇಡಿ. ದುರ್ಗಾಸ್ತ್ರೋತ್ರ ಪಠನೆ ಮಾಡಿ.

ಕಟಕ : ಹೊಸದಾಗಿ ವ್ಯವಹಾರ ಆರಂಭಿಸುವವರಿಗೆ ಇದು ಶುಭ ದಿನವಾಗಿದೆ. ಕುಟುಂಬಸ್ಥರ ಜೊತೆ ಇಂದು ಉತ್ತಮ ಸಮಯ ಕಳೆಯಲಿದ್ದೀರಿ. ನಿಮ್ಮ ಕೋಪದ ಬುದ್ಧಿಯು ಒಳ್ಳೆಯ ವಾತಾವರಣವನ್ನು ಹಾಳು ಮಾಡಿಬಿಡಬಹುದು. ಕ್ರೀಡಾಪಟುಗಳಿಗೆ ಸೂಕ್ತ ಅವಕಾಶ ಹುಡುಕಿಕೊಂಡು ಬರಲಿದೆ.

ಸಿಂಹ : ಸಾಲಭಾದೆಯಲ್ಲಿ ಸಿಲುಕಿ ಒದ್ದಾಡಲಿದ್ದೀರಿ. ಇನ್ನಾದರೂ ಅನಗತ್ಯ ಖರ್ಚಿನ ಕಡೆಗೆ ಸ್ವಲ್ಪ ಕಡಿವಾಣ ಹಾಕಿ. ಆಂತಕದ ವಾತಾವರಣ ದೂರಾಗಲಿದೆ. ಅನಿರೀಕ್ಷಿತ ಅತಿಥಿಯ ಆಗಮನದಿಂದ ಮನೆಯ ವಾತಾವರಣವೇ ಬದಲಾಗಲಿದೆ.

ಕನ್ಯಾ : ಮನೆಯಲ್ಲಿ ಸಮಾಧಾನದ ವಾತಾವರಣ ಇರಲಿದೆ. ಕೆಲವೊಮ್ಮೆ ಆತಂಕದ ಪರಿಸ್ಥಿತಿಯೂ ಇರಲಿದೆ. ಎಲ್ಲಾ ಸಂದರ್ಭಗಳಲ್ಲಿಯೂ ತಾಳ್ಮೆಯನ್ನು ಕಾಯ್ದುಕೊಳ್ಳಿ. ಆರೋಗ್ಯದ ಕಡೆಗೆ ಗಮನ ಇರಲಿ. ಪೋಷಕರಿಗೆ ನಿಮ್ಮಿಂದ ಬೇಸರವಾಗುವಂತಹ ಘಟನೆಯೊಂದು ನಡೆಯಲಿದೆ.

ತುಲಾ : ಕ್ಷುಲ್ಲಕ ಕಾರಣಕ್ಕೆ ದಂಪತಿಯ ನಡುವೆ ವಿರಸ ಉಂಟಾಗಲಿದೆ. ಇದರಿಂದ ಮಾನಸಿಕವಾಗಿ ಕುಗ್ಗಲಿದ್ದೀರಿ. ವಿದ್ಯಾರ್ಥಿಗಳು ಅಂದುಕೊಂಡ ಗುರಿಯನ್ನು ತಲುಪುವ ದಿನ ಹತ್ತಿರವಾಗಲಿದೆ. ಹೊಸ ಮನೆ ನಿರ್ಮಾಣ ಮಾಡುವ ಬಗ್ಗೆ ಚರ್ಚೆ ನಡೆಸಲಿದ್ದೀರಿ.

ವೃಶ್ಚಿಕ : ನಿರಂತರ ಪ್ರಯಾಣದಿಂದ ಆರೋಗ್ಯದ ಸಮಸ್ಯೆ ಎದುರಾಗಲಿದೆ. ಬೆಲ್ಲವನ್ನು ದಾನ ಮಾಡಿ. ಇದರಿಂದ ನಿಮ್ಮ ಕುಟುಂಬದಲ್ಲಿನ ಕಿರಿಕಿರಿಗೆ ಪರಿಹಾರ ಸಿಗಲಿದೆ. ಪೋಷಕರಿಂದ ಮಾರ್ಗದರ್ಶನ ಪಡೆದು ಉದ್ಯಮದಲ್ಲಿ ಬದಲಾವಣೆ ಮಾಡಲಿದ್ದೀರಿ.

ಧನು : ಸಹೋದರಿಯು ನಿಮ್ಮ ಆರ್ಥಿಕ ಸಂಕಷ್ಟಕ್ಕೆ ಹೆಗಲು ನೀಡಲಿದ್ದಾರೆ. ವಾಹನ ಸವಾರಿ ಮಾಡುವಾಗ ಆದಷ್ಟು ಎಚ್ಚರಿಕೆಯಿಂದಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ಪತ್ನಿಯಿಂದ ಕೊಂಚ ಕಿರಿಕಿರಿ ಇರಲಿದೆ.

ಮಕರ : ವೈವಾಹಿಕ ಸಂಬಂಧಕ್ಕೆಂದು ಅರಸುತ್ತಿರುವವರಿಗೆ ಇಂದು ಶುಭ ಸುದ್ದಿ ಕಾದಿದೆ. ವೃತ್ತಿ ಜೀವನದಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಪದೇ ಪದೇ ಕೆಟ್ಟ ಕನಸು ಬೀಳುವುದರಿಂದ ಬೇಸತ್ತಿದ್ದೀರಾ. ಸೋಮವಾರದಂದು ಶಿವನಿಗೆ ರುದ್ರಾಭಿಷೇಕ ಮಾಡಿಸಿ. ಸಾರ್ವಜನಿಕ ಜೀವನದಲ್ಲಿ ಮೆಚ್ಚುಗೆ ಪಡೆಯುವಿರಿ.

ಕುಂಭ : ಸಂಗಾತಿಯೊಡನೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ಮಕ್ಕಳಿಂದ ನಿಮ್ಮ ಮನಸ್ಸಿಗೆ ನೋವುಂಟಾಗಲಿದೆ. ನಿಮ್ಮ ಸ್ನೇಹಿತರೇ ನಿಮಗೆ ಶತ್ರು ಆಗಬಹುದು. ಆರೋಗ್ಯದಲ್ಲಿ ವೈಪರಿತ್ಯ ಉಂಟಾಗಲಿದೆ.

ಮೀನ : ಕೃಷಿಕರಿಗೆ ಈ ದಿನ ಅಷ್ಟೊಂದು ಶುಭಕರವಾಗಿಲ್ಲ. ಜವಳಿ ಉದ್ಯಮಿಗಳು ಇಂದು ಅನಿರೀಕ್ಷಿತ ಲಾಭ ಗಳಿಸಲಿದ್ದೀರಿ. ನಾಗ ದೇವರನ್ನು ಪ್ರಾರ್ಥಿಸಿ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ. ಪ್ರಯಾಣ ಮಾಡುವ ಮುನ್ನ ಎಚ್ಚರಿಕೆ ಇರಲಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...