alex Certify ಈ ರಾಶಿಯವರಿಗಿದೆ ಇಂದು ಮಕ್ಕಳಿಂದ ಶುಭ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗಿದೆ ಇಂದು ಮಕ್ಕಳಿಂದ ಶುಭ ಸುದ್ದಿ

ಮೇಷ : ನಿಮ್ಮ ದುಃಖಕ್ಕೆ ಸಂಗಾತಿ ಹೆಗಲಾಗಲಿದ್ದಾರೆ. ಸಂಗಾತಿಯ ಸಮಾಧಾನದ ಮಾತುಗಳು ನಿಮ್ಮ ಉತ್ಸಾಹವನ್ನ ಹೆಚ್ಚಿಸಲಿದೆ. ಕಚೇರಿ ಕೆಲಸದಲ್ಲಿ ಕೊಂಚ ನಿರಾಶೆ ಆಗಲಿದೆ. ನಿಧಾನವಾಗಿ ಮನಸ್ಸು ಶಾಂತವಾಗಲಿದೆ.

ವೃಷಭ : ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ಹಣಕಾಸಿನ ತೊಂದರೆಗಳು ಕಾಡಬಹುದು. ಅನಿರೀಕ್ಷಿತ ಕಾರ್ಯಗಳು ನಿಮ್ಮ ಖರ್ಚನ್ನ ಇನ್ನಷ್ಟು ಹೆಚ್ಚಿಸಬಹುದು. ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ.

ಮಿಥುನ : ಕಚೇರಿ ಕೆಲಸಕ್ಕಾಗಿ ದೂರ ಪ್ರಯಾಣ ಮಾಡಲಿದ್ದೀರಿ. ನಿಮ್ಮ ಜೀವನದ ಅತ್ಯಮೂಲ್ಯ ವಸ್ತುವೊಂದು ಕಳೆದುಹೋಗುವ ಸಾಧ್ಯತೆ ಇದೆ. ಎಚ್ಚರದಿಂದಿರಿ. ವಿವಾಹವಾಗಲು ಬಯಸುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.

ಕಟಕ : ನೋವನ್ನ ನುಂಗಿಕೊಂಡು ಮನಸ್ಸನ್ನು ಭಾರ ಮಾಡಿಕೊಳ್ಳದಿರಿ. ಆಪ್ತರಲ್ಲಿ ಹೇಳಿಕೊಂಡು ಮನಸ್ಸನ್ನ ಹಗುರ ಮಾಡಿಕೊಳ್ಳಿ. ಆರ್ಥಿಕ ಸ್ಥಿತಿಯಲ್ಲಿ ಯಾವುದೇ ಅಡಚಣೆ ಕಂಡು ಬರೋದಿಲ್ಲ. ಕೌಟುಂಬಿಕ ಜೀವನ ಸುಖಮಯವಾಗಿರಲಿದೆ.

ಸಿಂಹ : ಸಕಾರಾತ್ಮಕ ಆಲೋಚನೆಯನ್ನ ರೂಢಿಸಿಕೊಳ್ಳಿ. ಜೊತೆಯಲ್ಲಿ ಇದ್ದವರೇ ಬೆನ್ನಿಗೆ ಚೂರಿ ಹಾಕಬಹುದು ಹುಷಾರಾಗಿರಿ. ಮನೆಯಲ್ಲಿ ಖುಷಿಯ ವಾರ್ತೆ ಕೇಳಿ ಬರಲಿದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಗಣಪತಿಯನ್ನ ಧ್ಯಾನಿಸಿ.

ಕನ್ಯಾ : ವ್ಯಾಪಾರ ಕ್ಷೇತ್ರದಲ್ಲಿ ವಿರೋಧಿಗಳ ಕಾಟವಿದೆ. ಸಣ್ಣ ಸಣ್ಣ ವಿಚಾರಕ್ಕೂ ಅನಗತ್ಯ ಕೋಪ ಒಳ್ಳೆಯದಲ್ಲ. ಕಚೇರಿಯಲ್ಲಿ ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಲಿದ್ದೀರಿ. ಮನೆಯಲ್ಲಿ ಶಾಂತಿ ಇರಲಿದೆ. ನಿಮ್ಮೆಲ್ಲರ ಕಾರ್ಯಕ್ಕೆ ಸಂಗಾತಿ ಬೆಂಬಲವಿದೆ.

ತುಲಾ : ಆಪ್ತರು ಹೇಳಿದ್ದಾರೆ ಎಂದ ಮಾತ್ರಕ್ಕೆ ಸುಳ್ಳು ಸತ್ಯವಾಗಲು ಸಾಧ್ಯವಿಲ್ಲ. ವಾಸ್ತವದಲ್ಲಿ ನಿಂತು ಯೋಚಿಸಿ. ವ್ಯಾಪಾರಿಗಳಿಗೆ ಮಿಶ್ರ ಫಲ ದೊರೆಯಲಿದೆ. ಕಚೇರಿ ಕೆಲಸದಲ್ಲಿ ನೆಮ್ಮದಿ ಇದೆ. ವಿದ್ಯಾರ್ಥಿಗಳಿಗೆ ಉತ್ತಮ ದಿನ ಇದಾಗಿದೆ.

ವೃಶ್ಚಿಕ : ಹಳೆಯ ಸಾಲಗಳು ತೀರೋದ್ರಿಂದ ಮನಸ್ಸಿಗೆ ನೆಮ್ಮದಿ ಇರಲಿದೆ. ಪೋಷಕರು ನಿಮ್ಮೊಡನೆ ಉತ್ತಮ ಸಂಬಂಧ ಹೊಂದಿರುತ್ತಾರೆ. ಕಚೇರಿ ಕೆಲಸಗಳನ್ನ ಮಾಡುವಾಗ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಸುಬ್ರಹ್ಮಣ್ಯನನ್ನ ಆರಾಧಿಸಿ.

ಧನು : ಹಾಸಿಗೆ ಇದ್ದಷ್ಟೇ ಕಾಲು ಚಾಚು ಎಂಬ ಗಾದೆ ಮಾತು ತಲೆಯಲ್ಲಿರಲಿ. ಇನ್ಯಾರಿಗೋ ತೋರಿಸಬೇಕು ಅಂತಾ ವ್ಯರ್ಥ ಖರ್ಚು ಬೇಡ. ಪೋಷಕರ ಆರೋಗ್ಯದ ಬಗ್ಗೆ ಗಮನವಿರಲಿ. ಜವಳಿ ಉದ್ಯಮಿಗಳಿಗೆ ಉತ್ತಮ ಲಾಭವಿದೆ. ವಿದ್ಯಾರ್ಥಿಗಳಿಗೆ ಇದು ಸಾಮಾನ್ಯ ದಿನವಾಗಿದೆ.

ಮಕರ : ನಿಮ್ಮ ಮಾತುಗಳ ಮೇಲೆ ಹಿಡಿತ ಕಳೆದುಕೊಳ್ಳಬೇಡಿ. ಪೋಷಕರ ಆಲೋಚನೆಗಳಿಗೂ ಬೆಲೆ ನೀಡಿ. ಕಚೇರಿಯಲ್ಲಿ ಶಾಂತಚಿತ್ತರಾಗಿರಿ. ವಿರೋಧಿಗಳಿಗೆ ಅಂತರ ಕಾಪಾಡಿಕೊಳ್ಳಿ. ಹಿತಶತ್ರುಗಳ ಕಾಟವಿದೆ.

ಕುಂಭ : ಉನ್ನತಾಧಿಕಾರಿಗಳಿಂದ ಪ್ರಶಂಸೆಯ ಮಾತುಗಳನ್ನ ಕೇಳಲಿದ್ದೀರಿ. ಹಿಡಿದ ಕೆಲಸ ಕೈಗೂಡಲಿದೆ. ಹೂಡಿಕೆ ಮಾಡುವವರಿಗೆ ಇದು ಒಳ್ಳೆಯ ದಿನ. ಪಿತ್ರಾರ್ಜಿತ ಆಸ್ತಿಯಲ್ಲಿ ಕಿರಿಕಿರಿ ಮುಂದುವರಿಯಲಿದೆ. ಮಕ್ಕಳಿಂದ ಶುಭ ಸುದ್ದಿ ಕೇಳಲಿದ್ದೀರಿ.

ಮೀನ : ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸರ್ಕಾರಿ ನೌಕರರಿಗೆ ಇದು ಸಾಮಾನ್ಯ ದಿನವಾಗಿದೆ. ಮನೆಯ ವಾತಾವರಣ ಚೆನ್ನಾಗಿ ಇರಲಿದೆ. ಭವಿಷ್ಯದ ಬಗ್ಗೆ ಅತಿಯಾದ ಚಿಂತೆ ಬೇಡ. ಕೌಟುಂಬಿಕ ಜೀವನದಲ್ಲಿ ಬಿರುಕು ಕಾಣಿಸಿಕೊಳ್ಳಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...