alex Certify ಈ ರಾಶಿಯವರಿಗಿದೆ ಇಂದು ದಾಂಪತ್ಯ ಜೀವನದಲ್ಲಿ ನೆಮ್ಮದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗಿದೆ ಇಂದು ದಾಂಪತ್ಯ ಜೀವನದಲ್ಲಿ ನೆಮ್ಮದಿ

ಮೇಷ: ನೀವು ಉತ್ತಮ ಸಂವಹನಾ ಕೌಶಲ್ಯ ಹೊಂದಿರುವುದೇ ವೃತ್ತಿ ಜೀವನದಲ್ಲಿ ನಿಮ್ಮ ಯಶಸ್ಸಿಗೆ ಮುಖ್ಯ ಕಾರಣವಾಗಿದೆ. ಪರಸ್ತ್ರೀಯರೊಂದಿಗೆ ಅತಿಯಾದ ಸಲುಗೆ ಬೇಡ. ಇದರಿಂದ ಭಾರೀ ಅನಾಹುತಕ್ಕೆ ಒಳಗಾಗುವ ಸಾಧ್ಯತೆ ಇದೆ. ಪೋಷಕರ ಆಶೀರ್ವಾದದಿಂದ ಉತ್ತಮ ಸ್ಥಾನಕ್ಕೆ ಏರಲಿದ್ದೀರಿ.

ವೃಷಭ : ದಾಂಪತ್ಯ ಜೀವನದಲ್ಲಿ ನೆಮ್ಮದಿ ಇರಲಿದೆ. ನೀವು ದುಃಖವನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಕೊರಗುತ್ತಿದ್ದೀರಿ. ಆದರೆ ಈ ರೀತಿ ಮಾಡಿದಲ್ಲಿ ನಿಮಗೆ ನೋವು ಇನ್ನಷ್ಟು ಹೆಚ್ಚಲಿದೆ. ಹೀಗಾಗಿ ಆಪ್ತರೊಂದಿಗೆ ನೋವು ಹಂಚಿಕೊಳ್ಳಿ. ಸಾರ್ವಜನಿಕ ಜೀವನದಲ್ಲಿ ಗೌರವ ಸಿಗಲಿದೆ.

ಮಿಥುನ : ಅಂದುಕೊಂಡಿದ್ದನ್ನು ಸಾಧಿಸಲೇಬೇಕು ಎಂಬ ನಿಮ್ಮ ಛಲ ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯಲಿದೆ. ಸಾದ್ಯವಾದಷ್ಟು ಇನ್ನೊಬ್ಬರ ಬಗ್ಗೆ ಟೀಕೆ ಮಾಡುವುದನ್ನು ನಿಲ್ಲಿಸಿ. ನಿಮ್ಮ ಕೈಯಲ್ಲಿ ಆದಷ್ಟು ದಾನ ಧರ್ಮ ಮಾಡಿ. ಕೆಂಪು ಬಣ್ಣದ ವಸ್ತ್ರ ಧರಿಸಿದಲ್ಲಿ ಶುಭವಿದೆ.

ಕಟಕ : ಶೀಘ್ರದಲ್ಲೇ ನಿಮಗೆ ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಇದರಿಂದ ನಿಮ್ಮ ಆಸೆ ಹಾಗೂ ಆಕಾಂಕ್ಷೆಗಳು ಇನ್ನಷ್ಟು ಹೆಚ್ಚಲಿದೆ. ಸಂಗಾತಿಗೆ ಉತ್ತಮ ಉಡುಗೊರೆ ನೀಡಲಿದ್ದೀರಿ. ಖರ್ಚಿನ ಕಡೆಗೆ ಸ್ವಲ್ಪ ಹಿಡಿತವಿರಲಿ. ಬೆಂಕಿಯ ಸಂಗ ಬೇಡ. ಎಚ್ಚರವಿರಲಿ.

ಸಿಂಹ : ವ್ಯಾಪಾರ – ವ್ಯವಹಾರದಲ್ಲಿ ಮಧ್ಯಾಹ್ನದ ಬಳಿಕ ಲಾಭ ನಿರೀಕ್ಷಿಸಬಹುದಾಗಿದೆ. ಹಣ್ಣು – ತರಕಾರಿ ವ್ಯಾಪಾರಿಗಳಿಗೆ ಇದು ಶುಭದಿನ. ವೈವಾಹಿಕ ಸಂಬಂಧಕ್ಕಾಗಿ ಬಹಳ ವರ್ಷಗಳಿಂದ ಅರಸುತ್ತಿರುವವರಿಗೆ ಇಂದು ಕಂಕಣ ಭಾಗ್ಯ ಕೂಡಿ ಬರಲಿದೆ.

ಕನ್ಯಾ : ವಿದ್ಯಾರ್ಥಿಗಳಿಗೆ ವಿದೇಶಿ ಪ್ರಯಾಣದ ಅವಕಾಶ ಕೂಡಿ ಬರಲಿದೆ. ಇದು ನಿಮ್ಮ ಮನೆಯಲ್ಲಿ ಸಡಗರಕ್ಕೆ ಕಾರಣವಾಗಲಿದೆ. ಕಚೇರಿ ಕೆಲಸದಲ್ಲಿ ಇನ್ನಷ್ಟು ಏಕಾಗ್ರತೆ ತೋರಿದಲ್ಲಿ ಮಾತ್ರ ಯಶಸ್ಸು ಸಿಗುವ ಸಾಧ್ಯತೆ ಇದೆ. ನವವಿವಾಹಿತರಿಗೆ ಸಂತಾನ ಭಾಗ್ಯವಿದೆ. ಗುರುರಾಘವೇಂದ್ರರನ್ನು ಧ್ಯಾನಿಸಿ.

ತುಲಾ : ಸಂಗಾತಿಯೊಂದಿಗೆ ಪದೇ ಪದೇ ಕೋಪ ಮಾಡಿಕೊಳ್ಳಬೇಡಿ. ಇದರಿಂದ ಮುಂದೊಂದು ದಿನ ನಿಮ್ಮ ದಾಂಪತ್ಯದಲ್ಲಿ ವಾಸಿ ಆಗದಂತಹ ಬಿರುಕು ಮೂಡುವ ಸಾಧ್ಯತೆ ಇದೆ. ರಾಜಕೀಯ ರಂಗದವರಿಗೆ ಸಾರ್ವಜನಿಕ ಜೀವನದಲ್ಲಿ ಮನ್ನಣೆ ಸಿಗಲಿದೆ. ಮನೆ ಮಂದಿಯೆಲ್ಲ ಸೇರಿ ಕುಲದೇವರ ದರ್ಶನ ಮಾಡುವ ಬಗ್ಗೆ ಇಂದು ಚರ್ಚಿಸಲಿದ್ದೀರಿ.

ವೃಶ್ಚಿಕ : ಬೆನ್ನು ನೋವಿನ ಸಮಸ್ಯೆಯು ನಿಮ್ಮ ಕಚೇರಿ ಕೆಲಸಕ್ಕೆ ಕಿರಿಕಿರಿ ತಂದೊಡ್ಡುತ್ತಿದೆ. ಇದರಿಂದ ನಿಮಗೆ ಕೆಲಸದ ಕಡೆಗೆ ಏಕಾಗ್ರತೆ ಕೊಡಲು ಸಾಧ್ಯವಾಗುತ್ತಿಲ್ಲ. ಮನೆಯಲ್ಲಿ ಇಂದು ಚಿನ್ನಾಭರಣ ಖರೀದಿ ಮಾಡುವ ಸಾಧ್ಯತೆ ಇದೆ. ಪೋಷಕರ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ಇರಲಿ.

ಧನು : ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಹಿರಿಯರ ಮಾತನ್ನು ತಲೆಯಲ್ಲಿ ಇಟ್ಟುಕೊಳ್ಳಿ. ಅತಿಯಾದ ಖರ್ಚಿನಿಂದಾಗಿ ನಿಮ್ಮ ಆರ್ಥಿಕ ಜೀವನ ಸುಧಾರಿಸೋದೇ ಇಲ್ಲ. ನಿಮ್ಮ ಅತಿಯಾದ ಮೌನವು ಬೇರಯವರಿಂದ ನಿಮ್ಮನ್ನು ದೂರ ಮಾಡಲಿದೆ. ಆದಷ್ಟು ಜನರೊಡನೆ ಬೆರೆಯುವುದನ್ನು ಕಲಿತುಕೊಳ್ಳಿ.

ಮಕರ : ಯಾರೋ ಮಾಡಿದ ತಪ್ಪಿಗೆ ನೀವು ದಂಡ ತೆರೋದನ್ನು ನಿಲ್ಲಿಸಿ. ತಪ್ಪು ನಂದಲ್ಲ ಎಂದು ಧೈರ್ಯವಾಗಿ ಹೇಳಲು ಯತ್ನಿಸಿ. ಆರೋಗ್ಯದ ಕಡೆ ಗಮನ ಇರಲಿ. ಹೊರಗಿನ ಆಹಾರ ಸೇವನೆ ಸೂಕ್ತವಲ್ಲ. ಇಂದು ನಿಮಗೆ ಪ್ರಯಾಣ ಒಳ್ಳೆಯದಲ್ಲ. ಹೀಗಾಗಿ ಆದಷ್ಟು ವಾಹನದಿಂದ ದೂರವೇ ಇರಿ.

ಕುಂಭ : ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡಲಿದ್ದೀರಿ. ಇದರಿಂದ ಇಂದು ನಿಮ್ಮ ಇಡೀ ದಿನ ಆಯಾಸ ಅನುಭವಿಸಲಿದ್ದೀರಿ. ಸ್ನೇಹಿತರೊಬ್ಬರು ಪರ ಊರಿನಿಂದ ನಿಮ್ಮನ್ನು ಕಾಣಲೆಂದೇ ಬರಲಿದ್ದಾರೆ. ಇದರಿಂದ ನಿಮ್ಮ ಸಂತಸ ಇಮ್ಮಡಿಯಾಗಲಿದೆ. ಹಣಕಾಸಿನ ಸ್ಥಿತಿ ಸಾಮಾನ್ಯವಾಗಿದೆ.

ಮೀನ : ಚಿಕ್ಕ ಚಿಕ್ಕ ವಿಷಯಗಳನ್ನು ಸಂಭ್ರಮಿಸಿದಾಗ ಮಾತ್ರ ದಾಂಪತ್ಯ ಜೀವನ ಸುಖಮಯವಾಗಿ ಇರಲು ಸಾಧ್ಯ. ಐಷಾರಾಮಿ ಜೀವನವೇ ಬದುಕಲ್ಲ. ಮನೆಯಲ್ಲಿ ಧಾರ್ಮಿಕ ಕಾರ್ಯ ನಡೆಸುವ ಬಗ್ಗೆ ಚರ್ಚೆ ನಡೆಸಲಿದ್ದೀರಿ. ಕೋರ್ಟ್ – ಕಚೇರಿ ವ್ಯವಹಾರಗಳಲ್ಲಿ ಮುನ್ನಡೆಯಿದೆ. ಯಾರ ಮೇಲೂ ಅತಿಯಾದ ನಂಬಿಕೆ ಸಲ್ಲದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...