alex Certify ಈ ರಾಶಿಯವರಿಗಿದೆ ಇಂದು ಕಷ್ಟದಿಂದ ಪಾರಾಗಲು ದಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗಿದೆ ಇಂದು ಕಷ್ಟದಿಂದ ಪಾರಾಗಲು ದಾರಿ

ಮೇಷ : ಉದ್ಯೋಗದಲ್ಲಿ ಬಡ್ತಿ ಭಾಗ್ಯ ಸಿಗುವ ಸಾಧ್ಯತೆ ಇದೆ. ನಿಮ್ಮ ಅತಿಯಾದ ಸಿಟ್ಟು ದಾಂಪತ್ಯ ಜೀವನದಲ್ಲಿ ಕಲಹ ತಂದೊಡ್ಡಬಹುದು. ಮಕ್ಕಳ ಓದಿನ ನಿಮಿತ್ತ ಬಹುದೊಡ್ಡ ಖರ್ಚೊಂದು ನಿಮ್ಮ ಮುಂದೆ ಬರಲಿದೆ.

ವೃಷಭ : ಅನಿರೀಕ್ಷಿತ ಧನಾಗಮನವಾಗಲಿದೆ. ನಿಮ್ಮ ಚಾಣಕ್ಯತನವು ಕಚೇರಿಯಲ್ಲಿ ಪ್ರಶಂಸೆಗೆ ಕಾರಣವಾಗಲಿದೆ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಇರಲಿದೆ. ವಿದ್ಯಾರ್ಥಿಗಳು ಅಂದುಕೊಂಡಿದ್ದನ್ನು ಸಾಧಿಸಲಿದ್ದಾರೆ. ಮುದ್ರಣ ಮಳಿಗೆ ಹೊಂದಿದವರಿಗೆ ಇಂದು ಲಾಭವಿದೆ.

ಮಿಥುನ : ಕಲಾವಿದರಿಗೆ ಇಂದು ಹೊಸ ಅವಕಾಶಗಳು ಹುಡುಕಿಕೊಂಡು ಬರಲಿದೆ. ಹಿಂದೆಂದೋ ಕೂಡಿಟ್ಟ ಹಣವು ಇಂದು ನಿಮ್ಮನ್ನು ದೊಡ್ಡ ಕಷ್ಟದಿಂದ ಪಾರು ಮಾಡಲಿದೆ. ಗರ್ಭಿಣಿಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಗುರು ಅನುಗ್ರಹ ಇರಲಿದೆ.

ಕಟಕ : ಅನಾರೋಗ್ಯವೆಲ್ಲ ಕಳೆದು ಚೇತರಿಕೆ ಕಾಣಲಿದ್ದೀರಿ. ಕೋರ್ಟ್​ ಕಚೇರಿ ವ್ಯವಹಾರಗಳಲ್ಲಿ ನಿಮಗೆ ಮುನ್ನಡೆ ಸಿಗಲಿದೆ. ಹಳೆಯ ಸಾಲಗಳು ತೀರಲಿವೆ. ರಾಜಕೀಯ ವ್ಯಕ್ತಿಗಳಿಗೆ ಉನ್ನತ ಸ್ಥಾನ ಲಭಿಸಲಿದೆ.

ಸಿಂಹ : ಆರ್ಥಿಕವಾಗಿ ನಿಮ್ಮ ಜೀವನದಲ್ಲಿ ಸುಧಾರಣೆ ಕಂಡು ಬರಲಿದೆ. ಹೊಸ ಕಚೇರಿಯ ವಾತಾವರಣಕ್ಕೆ ಹೊಂದಿಕೊಳ್ಳಲಿದ್ದೀರಿ. ವೈವಾಹಿಕ ಸಂಬಂಧಕ್ಕೆ ಹುಡುಕಾಟ ನಡೆಸುತ್ತಿರುವವರಿಗೆ ಇಂದು ಶುಭ ಸುದ್ದಿ ಕಾದಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ ಮೂಡುವ ಸಾಧ್ಯತೆ ಇದೆ.

ಕನ್ಯಾ : ಬೆನ್ನು ನೋವಿನ ಸಮಸ್ಯೆ ಇಂದು ನಿಮ್ಮನ್ನು ಭಾದಿಸಲಿದೆ. ಹೀಗಾಗಿ ನಿಮಗೆ ಇಂದು ಕೆಲಸದ ಮೇಲೆ ಏಕಾಗ್ರತೆ ಹೊಂದಲು ಸಾಧ್ಯವಾಗೋದಿಲ್ಲ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಕುಟುಂಬದಲ್ಲಿ ಕಲಹ ಏರ್ಪಡುವ ಸಾಧ್ಯತೆ ಇದೆ.

ತುಲಾ : ನವವಿವಾಹಿತರಿಗೆ ಸಂತಾನ ಭಾಗ್ಯವಿದೆ. ಮಕ್ಕಳು ಓದಿನ ಕಡೆಗೆ ಗಮನ ನೀಡುವುದಿಲ್ಲ. ಇದರಿಂದ ನೀವು ತುಂಬಾನೇ ಆತಂಕಕ್ಕೆ ಒಳಗಾಗುವಿರಿ. ಮನೆಯಲ್ಲಿ ಧಾರ್ಮಿಕ ಕಾರ್ಯ ನಡೆಯಲಿದೆ. ಕುಟುಂಬದಲ್ಲಿ ಯಾರೊಂದಿಗೂ ಅನಗತ್ಯ ವಾದಕ್ಕೆ ಇಳಿಯಬೇಡಿ.

ವೃಶ್ಚಿಕ : ವ್ಯವಹಾರದಲ್ಲಿ ನಿಮ್ಮ ಮಾತಿನ ಶೈಲಿಯೇ ನಿಮ್ಮನ್ನು ಕಾಪಾಡಲಿದೆ. ಹೀಗಾಗಿ ನೀವು ದೊಡ್ಡ ಮಟ್ಟದಲ್ಲಿ ಲಾಭವನ್ನು ಕಾಣಲಿದ್ದೀರಿ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಇದೆ. ಪರಸ್ತ್ರೀಯರೊಂದಿಗೆ ಅನಗತ್ಯ ವಾದ ಸಲ್ಲದು.

ಧನು : ವೃತ್ತಿ ಜೀವನದಲ್ಲಿ ಅತ್ಯುತ್ತಮ ಸಾಧನೆ ಮಾಡುವ ನೀವು ಕುಟುಂಬ ವರ್ಗದಲ್ಲಿ ಗೌರವ ಹೆಚ್ಚಿಸಿಕೊಳ್ಳಲಿದ್ದೀರಿ. ನಿಮ್ಮ ಪ್ರೇಮವು ವೈವಾಹಿಕ ಜೀವನಗಾಗಿ ಬದಲಾಗುವ ಕಾಲ ಸನ್ನಿಹಿತವಾಗಲಿದೆ. ದೂರ ಪ್ರಯಾಣ ಮಾಡಲು ಇದು ಸೂಕ್ತವಾದ ಸಮಯವಲ್ಲ.

ಮಕರ : ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ತೋರಲಿದ್ದಾರೆ. ಇದರಿಂದ ಪೋಷಕರಾದ ನಿಮಗೆ ಹೆಮ್ಮೆ ಎನಿಸಲಿದೆ. ಕುಲದೇವರ ದರ್ಶನಕ್ಕೆ ಕುಟುಂಬ ಸಮೇತ ತೆರಳಲಿದ್ದೀರಿ. ನಿಮ್ಮ ಕೈಲಾದಷ್ಟು ದಾನ – ಧರ್ಮ ಮಾಡಿ.

ಕುಂಭ : ನೀವು ಅಂದುಕೊಂಡ ಕಾರ್ಯಗಳಲ್ಲಿ ವಿಘ್ನ ಎದುರಾಗಬಹುದು. ಇದರಿಂದ ನಿಮ್ಮ ಮನಸ್ಸಿಗೆ ತುಂಬಾನೆ ಘಾಸಿ ಉಂಟಾಗಲಿದೆ. ವಿದ್ಯಾರ್ಥಿಗಳು ಎರಡು ಆಯ್ಕೆಗಳ ನಡುವೆ ಗೊಂದಲಕ್ಕೆ ಒಳಗಾಗುವ ಸಾಧ್ಯತೆ ಇದೆ.

ಮೀನ : ಪ್ರಭಾವಿ ವ್ಯಕ್ತಿಗಳ ಭೇಟಿಯಿಂದ ನಿಮ್ಮ ವರ್ಚಸ್ಸು ಕೂಡ ಹೆಚ್ಚಲಿದೆ. ಅನಿರೀಕ್ಷಿತ ಮೂಲದಿಂದ ಧನಾಗಮನವಿದೆ. ಗುರಿಯಲ್ಲಿ ಸ್ಪಷ್ಟತೆ ಇರಲಿ. ಹಳೆಯ ಸಾಲಗಳು ತೀರಲಿದೆ. ವಿವಾಹ ಸಂಬಂಧಕ್ಕೆ ಹುಡುಕಾಟ ನಡೆಸುತ್ತಿರುವವರಿಗೆ ಕಂಕಣಬಲ ಕೂಡಿ ಬರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...