alex Certify ಈ ರಾಶಿಯವರಿಗಿದೆ ಇಂದು ಆಕಸ್ಮಿಕ ʼಧನ ಲಾಭʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗಿದೆ ಇಂದು ಆಕಸ್ಮಿಕ ʼಧನ ಲಾಭʼ

ಮೇಷ : ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಉಂಟಾಗಲಿದೆ. ಯಾರೋ ಮಾಡಿದ ತಪ್ಪಿಗೆ ನೀವು ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ. ಮಕ್ಕಳ ಒತ್ತಾಯಕ್ಕೆ ಮಣಿದು ವಾಹನ ಖರೀದಿ ಮಾಡುವ ಸಾಧ್ಯತೆ ಇದೆ. ಪೋಷಕರ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ.

ವೃಷಭ : ಮನೆಯಲ್ಲಿ ಆಕಸ್ಮಿಕ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಕೆಲವರು ಜಿಗಣೆಯಂತೆ ನಿಮ್ಮ ಜೀವನದಲ್ಲಿ ಅಂಟಿಕೊಂಡಿದ್ದಾರೆ. ಆದಷ್ಟು ಅಂತವರಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ. ಕೃಷಿ ಸಂಬಂಧ ಚಟುವಟಿಕೆಯಲ್ಲಿ ಇರುವವರಿಗೆ ಇಂದು ಲಾಭವಿದೆ.

ಮಿಥುನ : ವ್ಯಾಪಾರ – ವ್ಯವಹಾರಗಳಲ್ಲಿ ನಿಮಗೆ ತೊಡಕು ಉಂಟಾದೀತು. ನೀವು ಮಾಡಿದ ತಪ್ಪು ಕೆಲಸ ಮುಂದಿನ ದಿನಗಳಲ್ಲಿ ನಿಮ್ಮನ್ನೇ ಕಾಡಲಿದೆ. ಹೀಗಾಗಿ ಅಡ್ಡ ದಾರಿಯಲ್ಲಿ ಹಣ ಸಂಪಾದನೆ ಬೇಡವೇ ಬೇಡ. ಗಂಟಲು ನೋವಿನ ಸಮಸ್ಯೆ ನಿಮ್ಮನ್ನು ಕಾಡಬಹುದು.

ಕಟಕ : ಆಕಸ್ಮಿಕ ಧನಲಾಭದಿಂದ ಇವತ್ತು ನೀವು ಸಂತಸದಲ್ಲಿ ಇರಲಿದ್ದೀರಿ. ಮನೆಯಲ್ಲಿ ಚಿನ್ನಾಭರಣ ಖರೀದಿ ಮಾಡುವ ಸಾಧ್ಯತೆ ಇದೆ. ಪೋಷಕರ ಜೊತೆ ಅನಗತ್ಯ ವಾದ ಬೇಡ. ವಿವಾಹವಾಗದೇ ಚಿಂತೆಯಲ್ಲಿ ಇದ್ದವರಿಗೆ ಇಂದು ಕಂಕಣ ಭಾಗ್ಯ ಕೂಡಿ ಬರಲಿದೆ.

ಸಿಂಹ : ಸ್ತ್ರೀಯರಿಗೆ ಇಂದು ಧನಲಾಭವಿದೆ. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಜಯ ನಿಮ್ಮದಾಗಲಿದೆ. ತಾಯಿಯಿಂದ ಕಿರಿಕಿರಿಗೆ ಒಳಗಾಗಲಿದ್ದೀರಿ. ಆದರೂ ಹಿರಿಯ ಜೀವದ ಜೊತೆ ವಾದ ಬೇಡ. ತಾಳ್ಮೆಯಿಂದಿರಿ.

ಕನ್ಯಾ : ಮನೆಯಲ್ಲಿ ದೀರ್ಘಕಾಲದ ಬಳಿಕ ಶುಭ ಕಾರ್ಯ ಕೂಡಿಬರಲಿದೆ. ಸಾರ್ವಜನಿಕ ಸ್ಥಳದಲ್ಲಿ ಮುಜುಗರಕ್ಕೆ ಈಡಾಗುವ ಪ್ರಸಂಗ ಎದುರಾದೀತು. ಮಕ್ಕಳ ಓದಿಗಾಗಿ ಈ ತಿಂಗಳು ಹೆಚ್ಚಿನ ಹಣ ಎತ್ತಿಡಬೇಕಾಗಿ ಬರಲಿದೆ.

ತುಲಾ : ಕೆಟ್ಟ ಸ್ನೇಹಿತರಿಂದ ದುಶ್ಚಟಗಳನ್ನು ಹತ್ತಿಸಿಕೊಂಡಿದ್ದೀರಿ. ಇದರಿಂದ ನಿಮ್ಮ ಸಂಗಾತಿ ನಿಮ್ಮ ಮೇಲೆ ಅಸಮಾಧಾನಗೊಳ್ಳಲಿದ್ದಾರೆ. ವ್ಯಾಪಾರ ವ್ಯವಹಾರದಲ್ಲಿ ಅಧಿಕ ನಷ್ಟವಿದೆ. ಪೋಷಕರ ಚಿಕಿತ್ಸೆಗೆ ಖರ್ಚು ಹೆಚ್ಚಲಿದೆ.

ವೃಶ್ಚಿಕ : ಸೋಮಾರಿತನದಿಂದಾಗಿ ಅತ್ಯುತ್ತಮ ಅವಕಾಶಗಳನ್ನು ಕಳೆದುಕೊಳ್ಳುವಿರಿ. ಸ್ತ್ರೀಯರಿಗೆ ಇಂದು ಸ್ನೇಹಿತರು ಸಹಾಯ ಮಾಡಲಿದ್ದಾರೆ. ಮನೆ ನವೀಕರಣ ಕಾರ್ಯ ಮಾಡುವಿರಿ.

ಧನು : ಇಂದು ನಿಮಗೆ ಪ್ರಭಾವಿ ವ್ಯಕ್ತಿಗಳನ್ನು ಭೇಟಯಾಗುವ ಅವಕಾಶ ಕೂಡಿ ಬರಲಿದೆ. ಆತ್ಮಗೌರವಕ್ಕೆ ಚ್ಯುತಿ ತರುವಂತಹ ಪ್ರಸಂಗ ಎದುರಾದೀತು. ಕುಲದೇವರ ದರ್ಶನಕ್ಕೆ ಕುಟುಂಬಸ್ಥರೊಂದಿಗೆ ಪ್ರಯಾಣ ಬೆಳೆಸಲಿದ್ದೀರಿ.

ಮಕರ : ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಸರ್ಕಾರಿ ಕೆಲಸಗಾರರಿಗೆ ದಿಢೀರ್​ ವರ್ಗಾವಣೆ ಆದೀತು. ಹಳೆಯ ಸಾಲಗಳು ತೀರಲಿವೆ. ವ್ಯಾಪಾರ – ವ್ಯವಹಾರಗಳಿಂದ ಲಾಭವಿದೆ.

ಕುಂಭ :ವ್ಯಾಪಾರ ವ್ಯವಹಾರದಲ್ಲಿ ಪಾಲುದಾರರೊಂದಿಗೆ ವೈಮನಸ್ಯ ಮೂಡಲಿದೆ. ಸಂಗಾತಿಗೆ ದುಬಾರಿ ಬೆಲೆಯ ಉಡುಗೊರೆ ನೀಡಲಿದ್ದೀರಿ. ಬಂಧುಗಳು ಮನೆಗೆ ಆಗಮಿಸಲಿದ್ದಾರೆ. ಪೋಷಕರ ಆರೋಗ್ಯ ಸುಧಾರಿಸಲಿದೆ.

ಮೀನ : ಅದೃಷ್ಟದ ಬಾಗಿಲನ್ನು ಬಂದ್​ ಮಾಡಿಕೊಂಡಿರುವ ನೀವು ಈಗ ಉತ್ತಮ ಭಾಗ್ಯಕ್ಕಾಗಿ ಪರದಾಡುತ್ತಿದ್ದೀರಿ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಇದೆ. ಮಕ್ಕಳಿಂದ ಧನನಷ್ಟವಾಗಲಿದೆ. ವಾಹನವನ್ನು ಬದಲಾವಣೆ ಮಾಡುವ ಬಗ್ಗೆ ಯೋಚನೆ ಮಾಡುವಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...