alex Certify ಈ ರಾಶಿಯಲ್ಲಿ ಜನಿಸಿದ ಹೋಟೆಲ್​ ಉದ್ಯಮಿಗಳಿಗೆ ಇಂದು ಶುಭ ದಿನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯಲ್ಲಿ ಜನಿಸಿದ ಹೋಟೆಲ್​ ಉದ್ಯಮಿಗಳಿಗೆ ಇಂದು ಶುಭ ದಿನ….!

ಮೇಷ : ಹೊಸ ಹೂಡಿಕೆಗಳನ್ನು ಮಾಡುವವರು ನೀವಾಗಿದ್ದರೆ ಈ ದಿನ ಶುಭಕರವಾಗಿದೆ. ಒಮ್ಮೆ ಪೋಷಕರ ಎದುರು ನಂಬಿಕೆ ಕಳೆದುಕೊಂಡ ನೀವು ಆ ನಂಬಿಕೆಯನ್ನು ಮರಳಿ ಪಡೆಯಲು ಇನ್ನಿಲ್ಲದ ಹರಸಾಹಸ ಪಡಲಿದ್ದೀರಿ. ಸಂಗಾತಿಯಿಂದ ಕಿರಿಕಿರಿ ಇರಲಿದೆ.

ವೃಷಭ : ಪೋಷಕರ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಇದರಿಂದ ನೀವು ಚಿಂತೆಗೆ ಗುರಿಯಾಗಲಿದ್ದೀರಿ. ಹೊಸ ಹಣಕಾಸು ಯೋಜನೆಗಳ ಬಗ್ಗೆ ಕುಟುಂಬಸ್ಥರ ಜೊತೆ ಚರ್ಚೆ ನಡೆಸಲಿದ್ದೀರಿ. ಅನವಶ್ಯಕವಾಗಿ ಗಲಾಟೆಯೊಂದರಲ್ಲಿ ನಿಮ್ಮ ಹೆಸರು ಥಳುಕು ಹಾಕಿಕೊಳ್ಳಲಿದೆ.

ಮಿಥುನ : ನಿಮ್ಮ ಏಳ್ಗೆಯನ್ನು ಸಹಿಸದ ಅನೇಕರು ನಿಮ್ಮ ವಿರುದ್ಧ ಅಸ್ತ್ರಗಳನ್ನು ಪ್ರಯೋಗ ಮಾಡುತ್ತಲೇ ಇರುತ್ತಾರೆ. ಎಂದಿಗೂ ಧೈರ್ಯ ಕಳೆದುಕೊಳ್ಳದಿರಿ. ಕುಲದೇವರ ಆಶೀರ್ವಾದ ನಿಮ್ಮ ಮೇಲಿದೆ. ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಬಹುದು.

ಕಟಕ : ಕಚೇರಿ ಕೆಲಸಗಳಿಂದ ಅತಿಯಾಗಿ ದಣಿಯಲಿದ್ದೀರಿ. ಮನೆಯಲ್ಲಿ ಸಂಭ್ರಮಾಚರಣೆಯು ಈ ದಣಿವನ್ನು ಮರೆಸಲಿದೆ. ಮನೆಯ ಕಿರಿಯ ಪುತ್ರಿಗೆ ವೈವಾಹಿಕ ಸಂಬಂಧ ಕೂಡಿ ಬರಲಿದೆ. ದೊಡ್ಡ ಸಂಸ್ಥೆಗಳ ಮಾಲೀಕರಿಗೆ ಇಂದು ಲಾಭವಿದೆ.

ಸಿಂಹ : ಸಾರ್ವಜನಿಕ ಜೀವನವು ಅತ್ಯಂತ ವಿನೋದದಿಂದ ಕೂಡಿರಲಿದೆ. ಹೊಂದಾಣಿಕೆ ಸಾಧಿಸದ ಹೊರತು ದಾಂಪತ್ಯ ಜೀವನದಲ್ಲಿ ನೆಮ್ಮದಿ ಇಲ್ಲ. ಕಚೇರಿ ಕೆಲಸದಲ್ಲಿ ಬಡ್ತಿ ವಾರ್ತೆಯನ್ನು ಕೇಳಲಿದ್ದೀರಿ. ಇದು ನಿಮ್ಮ ಇಡೀ ದಿನದ ದಣಿವನ್ನು ಮರೆಸಲಿದೆ.

ಕನ್ಯಾ : ಕಚೇರಿ ಬದಲಿಸಬೇಕು ಎಂದುಕೊಂಡವರಿಗೆ ಇದು ಶುಭದಿನವಾಗಿದೆ. ವೃತ್ತಿ ಕ್ಷೇತ್ರ ಬದಲಾಯಿಸಲು ಇಂದು ನೀವು ಮೊದಲ ಹೆಜ್ಜೆ ಇಡಬಹುದು. ಸ್ತ್ರೀಯರಿಗೆ ಧನಲಾಭಬಿದೆ. ಉದ್ಯಮದಲ್ಲಿ ಅನಿರೀಕ್ಷಿತ ಲಾಭ ನಿಮ್ಮದಾಗಲಿದೆ. ತಂದೆಯು ನಿಮ್ಮ ವ್ಯಾಪಾರ – ವ್ಯವಹಾರದಲ್ಲಿ ಆಧಾರ ಸ್ಥಂಭವಾಗಿ ನಿಮ್ಮ ಬೆನ್ನಿಗೆ ನಿಲ್ಲಲಿದ್ದಾರೆ.

ತುಲಾ : ಸರ್ಕಾರದ ಕೆಲ ಯೋಜನೆಗಳು ನಿಮಗೆ ಅತ್ಯಂತ ಸಂಕಷ್ಟದ ಸಂದರ್ಭದಲ್ಲಿ ಬೆಳಕಾಗಲಿವೆ. ಇದರಿಂದ ದೊಡ್ಡ ಚಿಂತೆಯಲ್ಲಿದ್ದ ನೀವು ಕೊಂಚ ನಿರಾಳತೆ ಅನುಭವಿಸಲಿದ್ದಾರೆ. ಕಚೇರಿಯಲ್ಲಿ ಹಿತಶತ್ರುಗಳ ಕಾಟ ತಪ್ಪಿದ್ದಲ್ಲ.

ವೃಶ್ಚಿಕ : ಕೋರ್ಟ್​- ಕಚೇರಿ ವ್ಯವಹಾರಗಳಲ್ಲಿ ನಿಮಗೆ ಜಯವಿದೆ. ಅನೇಕ ಅನಿರೀಕ್ಷಿತ ಘಟನೆಗಳು ಇಂದು ಜರುಗಲಿದೆ. ಕಚೇರಿ ಕೆಲಸದ ನಿಮಿತ್ತ ಪ್ರಯಾಣ ಮಾಡಲಿದ್ದೀರಿ. ತಾಯಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ.

ಧನು : ಇಂದು ನೀವು ನಿಮ್ಮ ವೃತ್ತಿ ಜೀವನದಲ್ಲಿ ಯಶಸ್ಸನ್ನು ಕಾಣಲಿದ್ದೀರಿ. ಮೇಲಾಧಿಕಾರಿಗಳು ನಿಮ್ಮ ಕೆಲಸವನ್ನು ಪ್ರಶಂಸಿಸಲಿದ್ದಾರೆ. ಹಿರಿಯರು ತೀರ್ಥಯಾತ್ರೆ ಕೈಗೊಳ್ಳಲಿದ್ದಾರೆ. ಸಂಗಾತಿಯ ಕಿರಿಕಿರಿಯಿಂದ ಅತಿಯಾದ ಮಾನಸಿಕ ವೇದನೆ ಅನುಭವಿಸುವಿರಿ.

ಮಕರ : ವಕೀಲ ವೃತ್ತಿಯಲ್ಲಿ ಇರುವವರಿಗೆ ಇಂದು ಲಾಭವಿದೆ. ಹಳೆಯ ಭೂ ವ್ಯಾಜ್ಯವೊಂದು ಪ್ರಭಾವಿ ವ್ಯಕ್ತಿಯ ನೆರವಿನಿಂದ ಈಡೇರಲಿದೆ. ಲಾಟರಿ ಟಿಕೆಟ್​ ಮೂಲಕ ಅದೃಷ್ಟದ ಬಾಗಿಲು ಬಡಿಯುವ ಬಗ್ಗೆ ಪ್ರಯತ್ನ ಪಡಲಿದ್ದೀರಿ. ಮಕ್ಕಳ ಆರೋಗ್ಯದಲ್ಲಿ ಎಚ್ಚರಿಕೆ ಇರಲಿ.

ಕುಂಭ : ವೈದ್ಯಕೀಯ ವೃತ್ತಿಯಲ್ಲಿ ಇರುವವರು ಏಳಿಗೆ ಹೊಂದಲಿದ್ದಾರೆ. ವಿಮಾ ಯೋಜನೆಯು ಸಂಕಷ್ಟದ ಕಾಲದಲ್ಲಿ ನೆರವಾಗಲಿದೆ. ಮದುವೆಯಾಗೋದರ ಬಗ್ಗೆ ಯೋಚಿಸಲು ಇದು ಸರಿಯಾದ ಸಮಯವಾಗಿದೆ. ಹೊಸ ಕಂಪನಿಗಳು ನಿಮಗೆ ಉದ್ಯೋಗದ ಆಫರ್​ ನೀಡಲಿವೆ. ಯೋಜನೆ ಮಾಡಿ ಮುಂದಿನ ಹೆಜ್ಜೆ ಇಡಿ.

ಮೀನ : ಕಾನೂನಿಗೆ ಸಂಬಂಧಿಸಿದ ವಿಚಾರದಲ್ಲಿ ಯಶಸ್ಸನ್ನು ಕಾಣಲಿದ್ದೀರಿ. ಸಾಲಗಳನ್ನು ಒಂದೊಂದಾಗಿ ತೀರಿಸುತ್ತಿರುವ ನೀವು ಶೀಘ್ರದಲ್ಲಿಯೇ ಸಾಲ ಮುಕ್ತರಾಗಲಿದ್ದೀರಿ. ಕಾರ್ಯವಿಧಾನವು ಹೆಚ್ಚಿನ ಆತ್ಮವಿಶ್ವಾಸ ನೀಡಲಿದೆ. ರೆಸ್ಟಾರೆಂಟ್​ ಉದ್ಯಮಿಗಳಿಗೆ ಶುಭದಿನ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...