alex Certify ಈ ರಾಶಿಯಲ್ಲಿ ಜನಿಸಿದವರಿಗೆ ಇಂದು ಸಿಗಲಿದೆ ಆರ್ಥಿಕವಾಗಿ ಪ್ರಗತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯಲ್ಲಿ ಜನಿಸಿದವರಿಗೆ ಇಂದು ಸಿಗಲಿದೆ ಆರ್ಥಿಕವಾಗಿ ಪ್ರಗತಿ

ಮೇಷ : ನಿಮ್ಮ ಪ್ರಾಮಾಣಿಕ ಬುದ್ಧಿಯೇ ನಿಮ್ಮನ್ನು ಕಾಯಲಿದೆ. ಹೀಗಾಗಿ ದೇವರ ಮೇಲೆ ಭಾರ ಹಾಕಿ ನಿಮ್ಮ ಪ್ರಯತ್ನವನ್ನು ಮುಂದುವರಿಸಿ. ತಂದೆ ತಾಯಿ ತೀರ್ಥಯಾತ್ರೆ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಿದ್ದಾರೆ. ವೈದ್ಯಕೀಯ ರಂಗದವರಿಗೆ ಉನ್ನತಿ ಇದೆ.

ವೃಷಭ : ವಿದ್ಯಾರ್ಥಿಗಳು ಅಂದುಕೊಂಡ ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗಲಿದ್ದಾರೆ. ಇದು ಇಡೀ ಕುಟುಂಬದ ಸಂಭ್ರಮಕ್ಕೆ ಕಾರಣವಾಗಲಿದೆ. ಸಂಗಾತಿಯೊಡನೆ ವಿನಾಕಾರಣ ಸಿಟ್ಟು ಮಾಡಿಕೊಳ್ಳದಿರಿ. ಕಂಕಣ ಭಾಗ್ಯವಿದೆ.

ಮಿಥುನ : ಅನಗತ್ಯ ಖರ್ಚಿನಿಂದಾಗಿ ಆರ್ಥಿಕ ಹೊರೆ ಹೆಚ್ಚಾಗಲಿದೆ. ಕ್ಷುಲ್ಲಕ ಕಾರಣಕ್ಕೆ ದಂಪತಿ ನಡುವೆ ವೈಮನಸ್ಯ ಮೂಡಲಿದೆ. ಕಚೇರಿಯಲ್ಲಿ ಹಿತಶತ್ರುಗಳಿಂದ ಎಚ್ಚರಿಕೆಯಿಂದಿರಿ. ಬಹಳ ದಿನಗಳ ಬಳಿಕ ನೀವು ಸ್ನೇಹಿತರನ್ನು ಭೇಟಿಯಾಗಲಿದ್ದೀರಿ.

ಕಟಕ : ಪರಸ್ತ್ರೀಯರಿಂದ ಅತಿಯಾದ ಸಲುಗೆಯಿಂದ ಮಾತನಾಡುತ್ತಿದ್ದೀರಿ. ಇದು ನಿಮ್ಮ ಚಾರಿತ್ರ್ಯದ ಮೇಲೆ ಕಪ್ಪು ಚುಕ್ಕೆ ಇಡಲಿದೆ ಎಂಬುದು ಗಮನದಲ್ಲಿರಲಿ. ಕಚೇರಿಯಲ್ಲಿ ನಿಮ್ಮ ಕೆಲಸವು ಪ್ರಶಂಸೆ ಪಡೆದುಕೊಳ್ಳಲಿದೆ. ಸಾರ್ವಜನಿಕ ಜೀವನದಲ್ಲಿ ಗೌರವವನ್ನು ಪಡೆಯಲಿದ್ದೀರಿ.

ಸಿಂಹ : ನಿಮ್ಮ ಕೆಲಸದ ಮೇಲಿನ ನಿಷ್ಠೆಯನ್ನು ಗಮನಿಸಿ ಮೇಲಾಧಿಕಾರಿಗಳು ಬಡ್ತಿ ನೀಡಲಿದ್ದಾರೆ. ವಿದ್ಯಾರ್ಥಿಗಳಿಗೆ ಗುರುವಿನ ಅನುಗ್ರಹ ಇರಲಿದೆ. ಕುಟುಂಬಸ್ಥರ ಜೊತೆಯಲ್ಲಿ ಪುಣ್ಯ ಕ್ಷೇತ್ರ ದರ್ಶನ ಮಾಡುವಿರಿ. ಈ ಹಿಂದೆ ಸ್ಥಗಿತಗೊಂಡ ಕಾರ್ಯಗಳೆಲ್ಲ ಚಾಲನೆ ಪಡೆಯಲಿದೆ.

ಕನ್ಯಾ : ಆಸ್ತಿ ವಿಚಾರವಾಗಿ ಕುಟುಂಬದಲ್ಲಿ ವೈಮನಸ್ಯ ಮೂಡಲಿದೆ. ಬೆಳಗ್ಗೆ ಅನಾರೋಗ್ಯ ಕೈಕೊಡುವ ಹಿನ್ನೆಲೆಯಲ್ಲಿ ಇಂದು ವಿಶ್ರಾಂತಿ ಪಡೆಯಲಿದ್ದಾರೆ. ತಾಯಿಯ ನಡವಳಿಕೆಯಿಂದ ನಿಮಗೆ ಬೇಸರವಾಗಲಿದೆ. ಯಾವುದೇ ಒಪ್ಪಂದಗಳಿಗೆ ಸಹಿ ಹಾಕುವ ಮುನ್ನ ಎಚ್ಚರಿಕೆ ಇರಲಿ.

ತುಲಾ : ಅತಿಯಾದ ಬೆನ್ನು ನೋವು ಇಂದು ನಿಮ್ಮನ್ನು ಕಾಡಲಿದೆ. ಪಿತ್ರಾರ್ಜಿತ ಆಸ್ತಿ ಪಾಲು ಮಾಡುವ ಬಗ್ಗೆ ಚರ್ಚೆ ನಡೆಯಲಿದೆ. ವ್ಯವಹಾರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಧಕ್ಕಲಿದೆ. ಕಲಾವಿದರಿಗೆ ಉತ್ತಮ ಅವಕಾಶ ಸಿಗಲಿದೆ.

ವೃಶ್ಚಿಕ : ಸಾರ್ವಜನಿಕ ಸ್ಥಳಗಳಲ್ಲಿ ಮಾತನಾಡುವ ವೇಳೆ ಮಾತಿನ ಮೇಲೆ ಹಿಡಿತ ಇದ್ದರೆ ನಿಮಗೇ ಒಳ್ಳೆಯದು. ಉತ್ತಮ ಸಂಭಾವನೆ ಬಂದರೂ ಅತಿಯಾದ ಖರ್ಚಿನಿಂದಾಗಿ ಕೈಯಲ್ಲಿ ಹಣ ಉಳಿಯುವುದಿಲ್ಲ. ಸ್ತ್ರೀಯರಿಗೆ ಇದು ಶುಭ ದಿನವಾಗಿದೆ.

ಧನು : ಇಂದು ನೀವು ಹೊಸ ವಾಹನವನ್ನು ಖರೀದಿ ಮಾಡಲಿದ್ದೀರಿ. ಕೃಷಿಕರಿಗೆ ಇಂದು ಅನಿರೀಕ್ಷಿತ ಲಾಭವಿದೆ. ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ತೋರಿಸಲಿದ್ದಾರೆ.

ಮಕರ : ಈ ದಿನವು ನಿಮಗೆ ಮಿಶ್ರಫಲವನ್ನು ತಂದುಕೊಡಲಿದೆ. ವ್ಯಾಪಾರ ವ್ಯವಹಾರದಲ್ಲಿ ನಿಮಗಿಂದು ಅಂದುಕೊಂಡ ಗುರಿಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಸಂಗಾತಿಯು ನಿಮ್ಮೆಲ್ಲ ಕಷ್ಟಗಳಿಗೆ ಹೆಗಲಾಗಲಿದ್ದಾರೆ. ಸಿಟ್ಟಿನ ಕೈಗೆ ಬುದ್ಧಿ ನೀಡದಿರಿ.

ಕುಂಭ : ಹೊಸ ವ್ಯವಹಾರದಲ್ಲಿ ನೀವು ಲಾಭ ಗಳಿಸುವಿರಿ. ಭೂಮಿ ಖರೀದಿ ಮಾಡುವವರಿಗೆ ಇದು ಶುಭ ದಿನವಾಗಿದೆ. ಜವಳಿ ವ್ಯಾಪಾರಿಗಳು ಇಂದು ನಷ್ಟ ಅನುಭವಿಸಲಿದ್ದಾರೆ. ರಾಜಕೀಯ ಚದುರಂಗದಾಟದ ನಡುವೆ ಸಿಲುಕುವ ಸಾಧ್ಯತೆ ಇದೆ.

ಮೀನ : ಹಿರಿಯರ ಆಶೀರ್ವಾದ ಪಡೆದು ಇಂದು ಹೊಸ ಉದ್ಯಮವನ್ನು ಆರಂಭಿಸುತ್ತಿದ್ದೀರಿ. ಮನೆಯಲ್ಲಿ ಧಾರ್ಮಿಕ ಕಾರ್ಯ ಜರುಗಲಿದೆ. ಮನೆ ಮಗಳಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಶತ್ರು ಭಾದೆ ತಪ್ಪಿದ್ದಲ್ಲ. ಪೋಷಕರ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...