alex Certify ಈ ರಾಶಿಯಲ್ಲಿ ಜನಿಸಿದವರಿಗೆ ಇಂದು ಕಾದಿದೆ ಬಡ್ತಿ ಭಾಗ್ಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯಲ್ಲಿ ಜನಿಸಿದವರಿಗೆ ಇಂದು ಕಾದಿದೆ ಬಡ್ತಿ ಭಾಗ್ಯ….!

ಮೇಷ : ನಿಮ್ಮ ಆರ್ಥಿಕ ಸಂಕಷ್ಟಗಳಿಗೆ ಸಹೋದರರು ಹೆಗಲು ನೀಡಲಿದ್ದಾರೆ. ಬಹಳ ದಿನಗಳ ಬಳಿಕ ಸ್ನೇಹಿತರನ್ನು ಭೇಟಿ ಮಾಡಲಿದ್ದೀರಿ. ಈಶ್ವರನಿಗೆ ಬಿಲ್ವಪತ್ರೆ ಅರ್ಪಿಸಿ. ಅತಿಯಾದ ಕೆಲಸದಿಂದ ದಣಿಯಲಿದ್ದೀರಿ, ಬೆನ್ನು ನೋವಿನ ಸಮಸ್ಯೆ ನಿಮ್ಮನ್ನು ಭಾದಿಸಲಿದೆ.

ವೃಷಭ : ಅಂದುಕೊಂಡ ಕಾರ್ಯಗಳಲ್ಲಿ ಕಾರ್ಯ ಸಾಧನೆ ಇರಲಿದೆ. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ನಿಮಗೆ ಮುನ್ನಡೆ ಇರಲಿದೆ. ಸಂಗಾತಿಯು ನಿಮ್ಮೆಲ್ಲ ಕಾರ್ಯಗಳಿಗೆ ಸಹಕಾರ ನೀಡಲಿದ್ದಾರೆ. ಜವಳಿ ವ್ಯಾಪಾರಿಗಳಿಗೆ ಲಾಭವಿದೆ.

ಮಿಥುನ : ಹೊಸ ಮನೆ ನಿರ್ಮಾಣ ಮಾಡುವ ಬಗ್ಗೆ ಯೋಚನೆ ಮಾಡಲಿದ್ದೀರಿ. ಇದಕ್ಕೆ ಪೋಷಕರೂ ಸಹಕಾರ ತೋರಲಿದ್ದಾರೆ. ಆರ್ಥಿಕ ಸಂಕಷ್ಟ ನಿಮ್ಮನ್ನು ಕಾಡಲಿದೆ. ಮಹಾಲಕ್ಷ್ಮೀಯನ್ನು ಆರಾಧಿಸಿ.

ಕಟಕ : ಸೌಂದರ್ಯವರ್ಧಕಗಳ ವ್ಯಾಪಾರದ ಉದ್ಯಮ ಆರಂಭಿಸಲಿದ್ದೀರಿ. ಬರಬೇಕಾದ ಹಣ ನಿಮ್ಮ ಕೈ ಸೇರಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾತಿನ ಮೇಲೆ ಹಿಡಿತ ಇರಲಿ.

ಸಿಂಹ : ವೈವಾಹಿಕ ಸಂಬಂಧ ಕೂಡಿ ಬರದೇ ಚಿಂತೆಗೆ ಒಳಗಗಾಗಿದ್ದ ನಿಮಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ತಂದೆಯು ನಿಮ್ಮ ಹೊಸ ಯೋಜನೆಗಳಿಗೆ ಸಹಕಾರ ನೀಡಲಿದ್ದಾರೆ. ಕಲಾವಿದರಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ.

ಕನ್ಯಾ : ವ್ಯಾಪಾರ ವ್ಯವಹಾರವು ಸುಗಮವಾಗಿ ನಡೆಯಲಿದೆ. ರಾಜಕಾರಣಿಗಳ ಸಂಪರ್ಕದಿಂದ ಭೂ ವ್ಯಾಜ್ಯವು ಪರಿಹಾರವಾಗಲಿದೆ. ದುಡಿಯುವವರು ಬಡ್ತಿ ಪಡೆಯಲಿದ್ದಾರೆ. ವಾಹನ ರಿಪೇರಿಗೆ ಅಧಿಕ ಹಣ ವ್ಯಯವಾಗಲಿದೆ. ಎಲೆಕ್ಟ್ರಾನಿಕ್​ ಉದ್ಯಮಿಗಳಿಗೆ ಲಾಭವಿದೆ.

ತುಲಾ : ಮಕ್ಕಳ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಸಂಗಾತಿಯ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಲಿದೆ. ಅತ್ಯಮೂಲ್ಯ ವಸ್ತುವೊಂದನ್ನು ನೀವು ಕಳೆದುಕೊಳ್ಳಲಿದ್ದೀರಿ. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ.

ವೃಶ್ಚಿಕ : ವಕೀಲ ವೃತ್ತಿ ಮಾಡಿಕೊಂಡಿರುವವರಿಗೆ ಇಂದು ಲಾಭವಿದೆ. ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿದ್ದವರಿಗೆ ಸರ್ಕಾರಿ ಕೆಲಸ ಸಿಗುವ ಸಾಧ್ಯತೆ ಇದೆ. ಕುಟುಂಬಸ್ಥರ ಜೊತೆ ಸೇರಿ ದೇವತಾ ಕಾರ್ಯ ಕೈಗೊಳ್ಳಲಿದ್ದೀರಿ. ಗೆಳೆಯರೊಂದಿಗೆ ಉತ್ತಮ ಕಾಲ ಕಳೆಯುವಿರಿ.

ಧನು : ಹೊಸದಾಗಿ ಉದ್ಯಮ ಆರಂಭಿಸಿರುವ ನಿಮಗೆ ಇನ್ನಷ್ಟು ಮಾರ್ಗದರ್ಶನದ ಅವಶ್ಯಕತೆ ಇದೆ. ಕಚೇರಿಯಲ್ಲಿ ಮೈ ಎಲ್ಲಾ ಕಣ್ಣಾಗಿ ಇದ್ದಷ್ಟೂ ಒಳ್ಳೆಯದು. ಹಿತಶತ್ರುಗಳ ಕಾಟ ತಪ್ಪಿದ್ದಲ್ಲ. ಆರೋಗ್ಯ ಜಾಗ್ರತೆ ಇರಲಿ.

ಮಕರ : ಪರಸ್ತ್ರೀಯರ ಸಹವಾಸ ನಿಜಕ್ಕೂ ಒಳ್ಳೆಯದಲ್ಲ. ಹೀಗಾಗಿ ಆದಷ್ಟು ಅಂತರ ಕಾಯ್ದುಕೊಳ್ಳಿ. ನೆಗಡಿ, ಕೆಮ್ಮು ನಿಮ್ಮನ್ನು ಭಾದಿಸಲಿದೆ. ಯಾರ ಒಪ್ಪಿಗೆ ಇಲ್ಲದೇ ಉದ್ಯಮ ಆರಂಭಿಸಿದ ನೀವು ನಷ್ಟ ಅನುಭವಿಸಿ ಪಶ್ಚಾತಾಪಕ್ಕೆ ಸಿಲುಕಲಿದ್ದೀರಿ.

ಕುಂಭ : ಇಂದು ನಿಮಗೆ ಮಕ್ಕಳ ಓದಿಗಾಗಿ ಹೆಚ್ಚಿನ ಖರ್ಚು ಮಾಡಬೇಕಾಗಿ ಬರಬಹುದು. ಪೋಷಕರ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇರುವುದರಿಂದ ಆಸ್ಪತ್ರೆಗೆ ಓಡಾಟ ಇರಲಿದೆ. ಸಂಗಾತಿಯು ನಿಮಗೆ ಸಹಕಾರ ನೀಡಲಿದ್ದಾರೆ.

ಮೀನ : ಸಹೋದರಿಯಿಂದಾಗಿ ಇಂದು ನೀವು ಆರ್ಥಿಕ ನಷ್ಟ ಎದುರಿಸಬೇಕಾಗಿ ಬರಲಿದೆ. ಮಕ್ಕಳು ಓದಿನಲ್ಲಿ ಪ್ರಗತಿ ತೋರಲಿದ್ದಾರೆ. ಇದರಿಂದ ನಿಮಗೆ ಹೆಮ್ಮೆ ಎನಿಸಲಿದೆ. ಸುಬ್ರಹ್ಮಣ್ಯ ದೇವರಿಗೆ ಜೇನುತುಪ್ಪವನ್ನು ಅರ್ಪಿಸಿ. ಸ್ತ್ರೀಯರಿಗೆ ಧನಲಾಭ ಇರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...