alex Certify ಈ ರಾಶಿಯಲ್ಲಿ ಜನಿಸಿದವರಿಗೆ ಕೂಡಿ ಬರಲಿದೆ ಕಂಕಣ ಭಾಗ್ಯ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯಲ್ಲಿ ಜನಿಸಿದವರಿಗೆ ಕೂಡಿ ಬರಲಿದೆ ಕಂಕಣ ಭಾಗ್ಯ…..!

ಮೇಷ : ಹಿರಿಯರ ಸಲಹೆಗಳನ್ನು ಅನುಸರಿಸಿಯೇ ಉದ್ಯಮದಲ್ಲಿ ಮುನ್ನಡೆಯುವುದು ಉತ್ತಮವಾಗಿದೆ. ತಾಯಿಯ ಕೆಲ ನಿರ್ಣಯಗಳಿಂದ ನೀವು ಕ್ರೋಧಕ್ಕೆ ಒಳಗಾಗುವ ಸಾಧ್ಯತೆ ಇದೆ. ಮನೆಯಲ್ಲಿ ಶುಭ ಕಾರ್ಯ ನಡೆಯಲಿದೆ.

ವೃಷಭ : ಮಕ್ಕಳು ಓದಿನ ಕಡೆಗೆ ಕಡಿಮೆ ಲಕ್ಷ್ಯ ತೋರಲಿದ್ದಾರೆ. ಇದರಿಂದ ನೀವು ಚಿಂತೆಗೊಳಗಾಗಲಿದ್ದೀರಿ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಅಂದುಕೊಂಡ ಕೆಲಸಗಳಲ್ಲಿ ವಿಜಯ ನಿಮ್ಮದಾಗಲಿದೆ. ವಿದ್ಯಾರ್ಥಿಗಳಿಗೆ ಗುರು ಅನುಗ್ರಹ ಇರಲಿದೆ.

ಮಿಥುನ : ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರುವಿರಿ. ಈ ಮೂಲಕ ಮೇಲಾಧಿಕಾರಿಗಳ ವಿಶ್ವಾಸ ಗಳಿಸಲಿದ್ದೀರಿ. ಕುಟುಂಬದಲ್ಲಿ ಇಂದು ನಿಮ್ಮ ಮದುವೆಯ ಮಾತುಕತೆ ನಡೆಯಲಿದೆ. ಮನಸ್ಸಿಗೆ ನೆಮ್ಮದಿ ಇರಲಿದೆ. ಕುಲದೇವರನ್ನು ಪ್ರಾರ್ಥಿಸಿ.

ಕಟಕ : ವಯಸ್ಕರಿಗೆ ಕಂಕಣ ಬಲ ಕೂಡಿ ಬರಲಿದೆ. ದುಂದು ವೆಚ್ಚಗಳಿಗೆ ಕಡಿವಾಣ ಹಾಕಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಸಾರ್ವಜನಿಕ ಜೀವನದಲ್ಲಿ ನಿಮ್ಮ ಗೌರವ ಹೆಚ್ಚಲಿದೆ. ಆದಷ್ಟು ಅಗ್ನಿಯಿಂದ ಅಂತರ ಕಾಯ್ದುಕೊಳ್ಳಿ.

ಸಿಂಹ : ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ನೀವು ಇಂದು ಚೇತರಿಸಿಕೊಳ್ಳಲಿದ್ದೀರಿ. ಸರ್ಕಾರಿ ನೌಕರರಿಗೆ ಇಂದು ಉನ್ನತ ಸ್ಥಾನಕ್ಕೆ ಏರುವ ಅವಕಾಶ ಲಭಿಸಲಿದೆ. ಮೀನುಗಾರರು, ಮಾಂಸ ವ್ಯಾಪಾರಿಗಳು ಇಂದು ಲಾಭ ಹೊಂದಲಿದ್ದಾರೆ.

ಕನ್ಯಾ : ಪರಸ್ತ್ರೀ ನಿಂದಕ ಎಂಬ ಅಪವಾದ ಇಂದು ನಿಮ್ಮನ್ನು ಕಾಡಲಿದೆ. ತಾಯಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದ್ದು ಇದರಿಂದ ಚಿಂತೆಗೆ ಒಳಗಾಗಲಿದ್ದೀರಿ. ಸಂಗಾತಿಯು ನಿಮ್ಮ ಮೇಲೆ ಸುಖಾಸುಮ್ಮನೇ ಮುನಿಸಿಕೊಳ್ಳಲಿದ್ದಾರೆ.

ತುಲಾ : ಅತ್ಯಂತ ಚಟುವಟಿಕೆಯಿಂದ ಇರುತ್ತಿದ್ದ ನೀವು ಇಂದು ಅನಾರೋಗ್ಯದಿಂದ ಹಾಸಿಗೆ ಹಿಡಿಯಲಿದ್ದೀರಿ. ಹಬ್ಬದ ನಿಮಿತ್ತ ಅನಗತ್ಯ ಖರ್ಚು ಉಂಟಾಗುವ ಸಾಧ್ಯತೆ ಇದೆ. ಮಕ್ಕಳು ನಿಮ್ಮ ಕೀರ್ತಿ ಹೆಚ್ಚಿಸುವಂತಹ ಸಾಧನೆ ತೋರಲಿದ್ದಾರೆ.

ವೃಶ್ಚಿಕ : ಬಹುದಿನದ ಬಳಿಕ ಸ್ನೇಹಿತರನ್ನು ಭೇಟಿ ಮಾಡಲಿದ್ದೀರಿ. ಪಾಲುದಾರಿಕೆ ಉದ್ಯಮದಿಂದ ಲಾಭ ಕಂಡುಕೊಳ್ಳಲಿದ್ದೀರಿ. ಮಕ್ಕಳಿಗೆ ಅನಿರೀಕ್ಷಿತ ಉಡುಗೊರೆ ಸಿಗಲಿದೆ. ಸಾರ್ವಜನಿಕ ಸ್ಥಳದಲ್ಲಿ ಮಾತನಾಡುವ ವೇಳೆ ನಾಲಗೆ ಮೇಲೆ ಹಿಡಿತವಿರಲಿ.

ಧನು : ಇನ್ನೊಬ್ಬರ ಬಗ್ಗೆ ಅನಗತ್ಯ ಮಾತುಗಳನ್ನಾಡುವವರಿಂದ ದೂರವೇ ಇರಿ. ಸಂಗಾತಿಯ ಕೆಲ ನಿರ್ಧಾರಗಳು ನಿಮಗೆ ಒಪ್ಪಿಗೆ ಎನಿಸದೇ ಇರಬಹುದು. ವೈದ್ಯ ವೃತ್ತಿಯಲ್ಲಿ ಇರುವವರಿಗೆ ಇಂದು ಕೆಲಸದ ಒತ್ತಡ ಹೆಚ್ಚಲಿದೆ. ಭೂ ವ್ಯಾಜ್ಯಗಳು ಪರಿಹಾರವಾಗಲಿದೆ.

ಮಕರ : ಸಾರ್ವಜನಿಕ ಸ್ಥಳದಲ್ಲಿ ಮುಜುಗರಕ್ಕೆ ಕಾರಣವಾಗುವಂತಹ ಪ್ರಸಂಗವೊಂದು ನಡೆಯಲಿದೆ. ವಿದ್ಯಾರ್ಥಿಗಳಿಗೆ ವಿದೇಶಿ ಪ್ರಯಾಣದ ಯೋಗವಿದೆ. ಮಕ್ಕಳ ಮದುವೆ ವಿಚಾರದಲ್ಲಿ ಅತಿಯಾಗಿ ತಲೆಕೆಡಿಸಿಕೊಳ್ಳಲಿದ್ದೀರಿ.

ಕುಂಭ : ಕಚೇರಿಯಲ್ಲಿ ಹಿತಶತ್ರುಗಳಿಂದ ಎಚ್ಚರಿಕೆಯಿಂದಿರಿ. ಮಕ್ಕಳ ಒತ್ತಾಯಕ್ಕೆ ಮಣಿದು ವಾಹನ ಖರೀದಿ ಮಾಡುವಿರಿ. ಕುಟುಂಬಸ್ಥರ ಜೊತೆ ಸೇರಿ ಇಂದು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದೀರಿ. ಆರೋಗ್ಯದ ಬಗ್ಗೆ ಇಂದು ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ.

ಮೀನ : ಕುಲದೇವರನ್ನು ಪ್ರಾರ್ಥಿಸಿ ಈ ದಿನವನ್ನು ಆರಂಭಿಸುವುದರಿಂದ ನಿಮಗೆ ಎಲ್ಲವೂ ಒಳಿತಾಗಲಿದೆ. ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಕೈಗೊಳ್ಳುವಿರಿ. ಮಕ್ಕಳ ಯಶಸ್ಸು ನಿಮ್ಮ ಗೌರವ ಹೆಚ್ಚಿಸಲಿದೆ. ಮನೆಯಲ್ಲಿ ಚಿನ್ನಾಭರಣ ಖರೀದಿ ಸಾಧ್ಯತೆ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...