alex Certify ಈ ರಾಶಿಯಲ್ಲಿರುವವರಿಗೆ ರಾಜಕೀಯ ರಂಗದಲ್ಲಿ ಕಾದಿದೆ ಯಶಸ್ಸು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯಲ್ಲಿರುವವರಿಗೆ ರಾಜಕೀಯ ರಂಗದಲ್ಲಿ ಕಾದಿದೆ ಯಶಸ್ಸು…..!

ಮೇಷ : ನಿಮ್ಮ ಕುಟುಂಬದಲ್ಲೇ ಯಾರಿಂದಲೂ ಮಾಡಲಾಗದ ಶೈಕ್ಷಣಿಕ ಸಾಧನೆಯನ್ನು ನೀವು ಮಾಡಿ ತೋರಿಸಲಿದ್ದೀರಿ. ಇದರಿಂದ ಇಡೀ ಕುಟುಂಬವೇ ನಿಮ್ಮ ಮೇಲೆ ಹೆಮ್ಮೆ ವ್ಯಕ್ತಪಡಿಸಲಿದೆ. ಶಿಕ್ಷಕರಿಗೆ ಇಂದು ಕೆಲಸದ ಒತ್ತಡ ಹೆಚ್ಚಿರಲಿದೆ.

ವೃಷಭ : ಹಣ ಸಂಪಾದನೆ ಮಾಡಲು ಹೊಸ ಮಾರ್ಗವನ್ನು ಹುಡುಕಲಿದ್ದೀರಿ. ವೈವಾಹಿಕ ಸಂಬಂಧ ಕೂಡಿ ಬರದೇ ಇರುವವರು ಬನಶಂಕರಿ ದೇವಿಯನ್ನು ಆರಾಧಿಸಿ. ಮಕ್ಕಳು ಓದಿನ ಕಡೆಗೆ ಅಷ್ಟೊಂದು ಆಸಕ್ತಿ ತೋರುವುದಿಲ್ಲ. ಇದು ನಿಮ್ಮನ್ನು ಚಿಂತೆಗೆ ದೂಡಲಿದೆ.

ಮಿಥುನ: ತಾಯಿಯ ಆರೋಗ್ಯದಲ್ಲಿ ಹಠಾತ್​ ಏರುಪೇರು ಉಂಟಾಗಲಿದೆ. ಇದು ನಿಮ್ಮನ್ನು ಚಿಂತೆಗೆ ದೂಡುವ ಸಾಧ್ಯತೆ ಹೆಚ್ಚಿದೆ. ಮನೆಯ ಪೀಠೋಪಕರಣ ಖರೀದಿಗಾಗಿ ಇಂದು ನೀವು ಅತಿಯಾಗಿ ಖರ್ಚು ಮಾಡಲಿದ್ದೀರಿ. ವಾಹನ ಪ್ರಯಾಣ ಮಾಡುವ ಮುನ್ನ ಎಚ್ಚರಿಕೆ ವಹಿಸಿ.

ಕಟಕ: ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡುವ ಪ್ರಸಂಗ ಎದುರಾಗಬಹುದು. ಆದರೆ ನಿಮಗಿಂದು ವಾಹನ ಪ್ರಯಾಣ ಶುಭಕರವಾಗಿಲ್ಲ. ಹೀಗಾಗಿ ನೀವು ಈ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದೇ ಉತ್ತಮ. ಬೆನ್ನು ನೋವಿನ ಸಮಸ್ಯೆ ನಿಮ್ಮನ್ನು ಕಾಡಲಿದೆ.

ಸಿಂಹ : ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಪೂರಕ ವಾತಾವರಣ ಕೂಡಿ ಬರಲಿದೆ. ವ್ಯವಹಾರದ ವಿಚಾರದಲ್ಲಿ ಅನುಭವಸ್ಥರ ಮಾರ್ಗದರ್ಶನವನ್ನು ಕಡೆಗಣಿಸಬೇಡಿ. ಇದರಿಂದ ಮುಂದಿನ ದಿನಗಳಲ್ಲಿ ನೀವೇ ಸಂಕಷ್ಟ ಎದುರಿಸುವ ಸಾಧ್ಯತೆ ಇರಲಿದೆ.

ಕನ್ಯಾ : ಮಕ್ಕಳು ಓದಿನಲ್ಲಿ ಪ್ರಗತಿ ತೋರಲಿದ್ದಾರೆ. ಇದರಿಂದ ನಿಮ್ಮ ಸಂತೋಷಕ್ಕೆ ಪಾರವೇ ಇರೋದಿಲ್ಲ. ಗರ್ಭಿಣಿಯರ ಆರೋಗ್ಯದಲ್ಲಿ ಇಂದು ಏರುಪೇರು ಉಂಟಾಗಲಿದೆ. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ ಸಾಧಿಸಲಿದ್ದೀರಿ.

ತುಲಾ : ಇಂದು ನಿಮ್ಮ ಮನೆಯಲ್ಲಿ ಹೊಸ ವಾಹನವನ್ನು ಖರೀದಿ ಮಾಡಲಿದ್ದಾರೆ. ವ್ಯಾಪಾರ ಕ್ಷೇತ್ರದಲ್ಲಿ ಇರುವವರಿಗೆ ಆರ್ಥಿಕ ಪ್ರಗತಿ ಕಾಣಲಿದ್ದೀರಿ. ವೈದ್ಯಕೀಯ ರಂಗದಲ್ಲಿ ಇರುವವರಿಗೆ ಇದು ಒತ್ತಡದ ದಿನವಾಗಿದೆ. ಕಲಾವಿದರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿದೆ.

ವೃಶ್ಚಿಕ : ಬಹಳ ದಿನಗಳಿಂದ ಅನಾರೋಗ್ಯದಲ್ಲಿ ಬಳಲುತ್ತಿದ್ದ ನೀವು ಇಂದು ಚೇತರಿಸಿಕೊಳ್ಳಲಿದ್ದೀರಿ. ಇಂದು ಯಾವುದೇ ಕಾರಣಕ್ಕೂ ಯಾರಿಗೂ ಸಾಲ ನೀಡಬೇಡಿ. ಇದರಿಂದ ಹಣ ವಾಪಾಸ್​ ಬರೋದಿಲ್ಲ. ಕಚೇರಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಲಿದೆ.

ಧನು : ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕಾರ್ಯವು ಇಂದಿನಿಂದ ಪುನಾರಂಭಗೊಳ್ಳಲಿದೆ. ಜವಳಿ ಉದ್ಯಮಿಗಳಿಗೆ ಇಂದು ಲಾಭದ ದಿನವಾಗಿದೆ. ವಿದ್ಯಾರ್ಥಿಗಳಿಗೆ ಈ ದಿನ ಅನುಕೂಲಕರವಾಗಿದೆ. ಪೋಷಕರು ನಿಮ್ಮ ಮೇಲೆ ಮುನಿಸಿಕೊಳ್ಳಲಿದ್ದಾರೆ.

ಮಕರ : ಮನೆಯ ಕಿರಿಯ ಪುತ್ರಿಗೆ ಇಂದು ಕಂಕಣ ಭಾಗ್ಯ ಕೂಡಿ ಬರಲಿದೆ. ಇದರಿಂದ ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ಇಂದು ಅಗ್ನಿಯಿಂದ ಆದಷ್ಟು ಅಂತರ ಕಾಯ್ದುಕೊಳ್ಳುವುದು ಉತ್ತಮ. ನೂತನ ಕಾರ್ಯಯೋಜನೆಗೆ ಇದು ಸಕಾಲವಾಗಿದೆ.

ಕುಂಭ : ರಾಜಕೀಯ ರಂಗದಲ್ಲಿ ಇರುವವರಿಗೆ ಸಾರ್ವಜನಿಕ ಜೀವನದಲ್ಲಿ ಗೌರವ ಇನ್ನಷ್ಟು ಹೆಚ್ಚಾಗಲಿದೆ. ನೀವು ಬಹಳ ದಿನಗಳಿಂದ ಆಸೆ ಪಟ್ಟಿದ್ದ ಅಮೂಲ್ಯವಾದ ವಸ್ತುವನ್ನು ಸಂಗಾತಿಯು ಉಡುಗೊರೆ ರೂಪದಲ್ಲಿ ನೀಡಲಿದ್ದಾರೆ. ಹಿರಿಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಮೀನ : ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬರಲಿದೆ. ಇದರಿಂದ ನಿಮಗೆ ಇನ್ನಿಲ್ಲದ ಸಂತೋಷವಾಗಲಿದೆ. ಹೊಸ ಉದ್ಯಮವನ್ನು ಸೃಷ್ಟಿ ಮಾಡಲು ಇದೇ ಸಕಾಲವಾಗಿದೆ. ಆದಷ್ಟು ಬೇಗ ವ್ಯವಹಾರವನ್ನು ವಿಸ್ತರಣೆ ಮಾಡಲಿದ್ದೀರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...